ಕರ್ನಾಟಕ

karnataka

ETV Bharat / state

ನ.29ಕ್ಕೆ ’ಮುಂದಿನ ನಿಲ್ದಾಣ’ ತೆರೆಗೆ - ಮುಂದಿನ ನಿಲ್ದಾಣ ಚಿತ್ರದ ಪತ್ರಿಕಾಗೋಷ್ಠಿ

ಇದೇ ನವೆಂಬರ್ 29ರಂದು ಮುಂದಿನ ನಿಲ್ದಾಣ ಚಿತ್ರ ತೆರೆಗೆ ಬರಲಿದ್ದು, ಅಭಿಮಾನಿಗಳು ಸಿನಿಮಾ ನೋಡಿ ಆರ್ಶೀವದಿಸಬೇಕು ಎಂದು ನಟ ಪ್ರವೀಣ ತೇಜ್ ಹೇಳಿದರು.

ಮುಂದಿನ ನಿಲ್ದಾಣ ಚಿತ್ರ ತಂಡ

By

Published : Nov 22, 2019, 6:44 PM IST

ದಾವಣಗೆರೆ: ಸ್ನೇಹ ಸಂಬಂಧ, ಉದ್ಯೋಗ, ಪ್ರೀತಿಯ ಆಯ್ಕೆಯ ಜರ್ನಿಯೇ 'ಮುಂದಿನ‌‌ ನಿಲ್ದಾಣ' ಸಿನಿಮಾದ ಚಿತ್ರಕಥೆಯಾಗಿದ್ದು, ವಿಭಿನ್ನವಾದ ಬಣ್ಣಗಳಲ್ಲಿ ಸಿನಿಮಾ ಮೂಡಿ ಬಂದಿದೆ ಎಂದು ಸಿನಿಮಾ ನಾಯಕ ಪ್ರವೀಣ್ ತೇಜ್ ಹೇಳಿದರು.

ಮುಂದಿನ ನಿಲ್ದಾಣ ಚಿತ್ರ ತಂಡ

ವಿನಯ್ ಭಾರಧ್ವಾಜ್ ನಿರ್ದೇಶನದಲ್ಲಿ ಮುಂದಿನ ನಿಲ್ದಾಣ ಚಿತ್ರ ಕನ್ನಡ ಚಿತ್ರರಂಗದಲ್ಲೇ ತನ್ನದೇ ಆದ ಛಾಪೂ ಮೂಡಿಸಲಿದೆ. ಸುಂದರವಾದ ವರ್ಣ ವಿನ್ಯಾಸ, ಆಕರ್ಷಕ ವಸ್ತ್ರ ವಿನ್ಯಾಸ, ಮನಮೋಹಕ‌ ಸ್ಥಳಗಳು ಚಿತ್ರದಲ್ಲಿವೆ. ದಾವಣಗೆರೆ ಎಂದರೇ ಎರಡನೇ ಗಾಂಧಿನಗರ ಎಂದು ಪ್ರಸಿದ್ಧಿಯಾಗಿದೆ. ನಮ್ಮ ಸಿನಿಮಾವನ್ನು ಇಲ್ಲಿನ ಜನ ನೋಡಿ‌ ಆಶೀರ್ವಾದ ಮಾಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಸಿನಿಮಾ ನಿರ್ದೇಶಕ ವಿನಯ್ ಭಾರದ್ವಾಜ್ ಮಾತನಾಡಿ, ಚಿತ್ರದ ದೃಶ್ಯಗಳು ಬಣ್ಣ ಹಚ್ಚಿದಂತೆ ಮೂಡಿ ಬಂದಿವೆ. ಏಳು ಪ್ರಸಿದ್ಧ ಸಂಗೀತ ನಿರ್ದೇಶಕರು ರಾಗ ಸಂಯೋಜನೆ ಮಾಡಿದ್ದಾರೆ. ಶಾರುಖ್ ಖಾನ್ ಒಡೆತನದ ರೆಡ್ ಚಿಲ್ಲೀಸ್ ನಮ್ಮ ಚಿತ್ರಕ್ಕೆ ಬಣ್ಣ ವಿನ್ಯಾಸ ಮಾಡಿದ್ದು ನವೆಂಬರ್ 29ಕ್ಕೆ ತೆರಕಾಣಲಿದೆ ಎಂದು ತಿಳಿಸಿದರು.

ABOUT THE AUTHOR

...view details