ಕರ್ನಾಟಕ

karnataka

By

Published : May 27, 2021, 10:30 PM IST

ETV Bharat / state

ಕೋವಿಡ್ ಶವ ಹೊತ್ತ ಆ್ಯಂಬುಲೆನ್ಸ್​ಗೆ ಸ್ವತಃ ತಾವೇ ಚಾಲಕರಾದ ರೇಣುಕಾಚಾರ್ಯ

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗ ಗ್ರಾಮದ ವ್ಯಕ್ತಿ ಕೋವಿಡ್​​ನಿಂದ ಇಂದು ಮುಂಜಾನೆ ಮೃತಪಟ್ಟಿದ್ದರು. ಶಾಸಕರು ತಂದೆ-ತಾಯಿ ಸ್ಮರಣಾರ್ಥವಾಗಿ ನೀಡಿದ್ದ ಆ್ಯಂಬುಲೆನ್ಸ್​ನಲ್ಲಿ ಮೃತದೇಹವಿಟ್ಟು ತಾವೇ ಚಲಾಯಿಸಿದ್ದಾರೆ.

ಚಾಲಕರಾದ ಎಂ ಪಿ ರೇಣುಕಾಚಾರ್ಯ
ಚಾಲಕರಾದ ಎಂ ಪಿ ರೇಣುಕಾಚಾರ್ಯ

ದಾವಣಗೆರೆ: ಕೋವಿಡ್​​ನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನ ಶಾಸಕ ಎಂ.ಪಿ ರೇಣುಕಾಚಾರ್ಯ ತಾವೇ ಆ್ಯಂಬುಲೆನ್ಸ್​ನಲ್ಲಿ ಕೊಂಡೊಯ್ದಿದ್ದಾರೆ.

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗ ಗ್ರಾಮದ ವ್ಯಕ್ತಿ ಕೋವಿಡ್​​ನಿಂದ ಇಂದು ಮುಂಜಾನೆ ಮೃತಪಟ್ಟಿದ್ದರು. ಶಾಸಕರು ತಂದೆ - ತಾಯಿ ಸ್ಮರಣಾರ್ಥವಾಗಿ ನೀಡಿದ್ದ ಆ್ಯಂಬುಲೆನ್ಸ್​ನಲ್ಲಿ ಮೃತದೇಹ ರವಾನಿಸಿದಲ್ಲದೆ. ಮೃತರ ಕುಟುಂಬಸ್ಥರಿಗೆ 15 ಸಾವಿರ ವೈಯಕ್ತಿಕ ಪರಿಹಾರ ನೀಡಿದ್ದಾರೆ.

ಆ್ಯಂಬುಲೆನ್ಸ್​ಗೆ ಸ್ವತಃ ತಾವೇ ಚಾಲಕರಾದ ಎಂ ಪಿ ರೇಣುಕಾಚಾರ್ಯ

ಮೃತ ದೇಹ ಹೊತ್ತ ಆ್ಯಂಬುಲೆನ್ಸ್​ ಅನ್ನು ಚಿತಾಗಾರದವರೆಗೂ ತಾವೇ ಚಲಾಯಿಸಿದ್ದಾರೆ. ಶಾಸಕರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ಓದಿ:ಸರ್ಕಾರಿ ಆಸ್ಪತ್ರೆಗೆ ಸ್ಯಾನಿಟೈಸರ್ ಸಿಂಪಡಿಸಿ, ಆ್ಯಂಬುಲೆನ್ಸ್ ಚಲಾಯಿಸಿದ ರೇಣುಕಾಚಾರ್ಯ

ABOUT THE AUTHOR

...view details