ಕರ್ನಾಟಕ

karnataka

ETV Bharat / state

ದಾವಣಗೆರೆಯಲ್ಲಿ ಆನ್​ಲೈನ್​​​ ಖಾತಾ ವಿತರಣೆಗೆ ಚಾಲನೆ ನೀಡಿದ ಶಾಸಕ‌ ರವೀಂದ್ರನಾಥ್ - ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ

ನಗರದ ಎಂಸಿಸಿಎ ಬ್ಲಾಕ್ ಆಶ್ರಯ ಆಸ್ಪತ್ರೆ ಬಳಿ ಇರುವ ವಲಯ -3 ರಲ್ಲಿ ಖಾತಾ ವಿತರಣೆಗೆ ಶಾಸಕ‌ ಎಸ್​.ಎ  ರವೀಂದ್ರನಾಥ್, ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಚಾಲನೆ ನೀಡಿದ್ದಾರೆ.

ಆನ್​ಲೈನ್​ ಖಾತಾ ವಿತರಣೆ

By

Published : Oct 18, 2019, 7:40 PM IST

ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊಲದ ಉತಾರ ಪಡೆಯಲು, ತಪ್ಪುಗಳ ತಿದ್ದುಪಡಿಗೆ ಇನ್ಮುಂದೆ ಅರ್ಜಿ ಹಿಡಿದು ಅಲೆದಾಡಬೇಕಿಲ್ಲ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಸ್ಥಿರ ಸ್ವತ್ತಿನ ಆಸ್ತಿ ಮಾಲೀಕರ ವಿವರವನ್ನು ಆನ್​ಲೈನ್ ತಂತ್ರಾಂಶದಲ್ಲಿ ಅಳವಡಿಸಿ, ಗಣಕೀಕೃತ ಖಾತಾ ಉತಾರ ನೀಡಲು ಪಾಲಿಕೆ ಮುಂದಾಗಿದೆ.

ದಾವಣಗೆರೆಯಲ್ಲಿ ಆನ್​ಲೈನ್​ ಖಾತಾ ವಿತರಣೆಗೆ ಚಾಲನೆ ನೀಡಿದ ಶಾಸಕ‌ ಎಸ್​.ಎ ರವೀಂದ್ರನಾಥ್

ನಗರದ ಎಂಸಿಸಿಎ ಬ್ಲಾಕ್ ಆಶ್ರಯ ಆಸ್ಪತ್ರೆ ಬಳಿ ಇರುವ ವಲಯ 3 ರಲ್ಲಿ ಖಾತಾ ವಿತರಣೆಗೆ ಶಾಸಕ‌ ಎಸ್​.ಎ ರವೀಂದ್ರನಾಥ್, ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಚಾಲನೆ ನೀಡಿದರು.

ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಸುಮಾರು143.370 ಸ್ಥಿರಾಸ್ತಿಗಳ‌ ಪೈಕಿ ವಲಯ 3ರ ವ್ಯಾಪ್ತಿಯ 10 ವಾರ್ಡ್​​ಗಳು 66.155 ಸ್ಥಿರಾಸ್ತಿ ವಿವರಗಳನ್ನು ಮೊದಲ ಹಂತವಾಗಿ ಆನ್​ಲೈನ್ ತಂತ್ರಾಂಶದಲ್ಲಿ ಅಳವಡಿಸಲಾಗಿದೆ. ಅರ್ಜಿ ನೀಡಿದ ತಕ್ಷಣ ಉತಾರ ಅರ್ಜಿದಾರರ ಕೈ ಸೇರಲಿದೆ. ಇನ್ನೂ ತಿದ್ದುಪಡಿಗೂ ಸಹ ಇಲ್ಲಿ ಅವಕಾಶ ಕಲ್ಪಿಸಲಾಗಿದೆ.

ಈ‌ ಹಿಂದೆ ಕೈಬರಹದ ಖಾತಾ ಉತಾರ ಕೊಡಲಾಗುತ್ತಿತ್ತು, ಹೆಸರು ನಮೂದಿಸುವಾಗ ಕಾಗುಣಿತ ದೋಷ ಸೇರಿದಂತೆ ಹಲವು ತಪ್ಪುಗಳು ಆಗುತ್ತಿದ್ದವು, ಸಾಧ್ಯವಾದಷ್ಟು ತಪ್ಪುಗಳು ಆಗದಂತೆ ತಂತ್ರಾಂಶ ರೂಪಿಸಲಾಗಿದೆ. ಆರಂಭದಲ್ಲಿ ಪಾಲಿಕೆಯ 10 ವಾರ್ಡ್​​ಗಳಲ್ಲಿ ಸ್ಥಿರ ಸ್ವತ್ತಿನ ಆಸ್ತಿ ಮಾಲೀಕರ ವಿವರಗಳನ್ನು ಆನ್​ಲೈನ್ ತಂತ್ರಾಂಶದಲ್ಲಿ ಅಳವಡಿಸಲಾಗಿದೆ.

ABOUT THE AUTHOR

...view details