ಕರ್ನಾಟಕ

karnataka

ಮಕ್ಕಳಲ್ಲಿ‌ ವಿಷಬೀಜ ಬಿತ್ತುವ ಕೆಲಸ ಮಾಡಬಾರದು: ಶಾಸಕ ಎಸ್. ರಾಮಪ್ಪ

By

Published : Feb 9, 2022, 8:16 PM IST

ವಿದ್ಯಾರ್ಥಿಗಳನ್ನು ದಾಳವಾಗಿರಿಸಿಕೊಂಡು ರಾಜಕೀಯ ಮಾಡಬಾರದು. ಕೇಸರಿ‌ಶಾಲು ಹಾಕಿಕೊಂಡು ಕಾಲೇಜಿನಲ್ಲಿ ರಾಜಕೀಯ ಬೇಡ ಎಂದು ಶಾಸಕ ಎಸ್. ರಾಮಪ್ಪ ಆರೋಪಿಸಿದ್ದಾರೆ.

mla-s-ramappa
ಶಾಸಕ ಎಸ್. ರಾಮಪ್ಪ

ದಾವಣಗೆರೆ: ಹರಿಹರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಗಲಭೆ ಪೂರ್ವ ನಿಯೋಜಿತ ಕೃತ್ಯ, ರಾಜಕೀಯ ಉದ್ದೇಶದಿಂದ ಈ ಗಲಭೆ ನಡೆದಿದೆ ಎಂದು ಶಾಸಕ ಎಸ್. ರಾಮಪ್ಪ ಆರೋಪಿಸಿದ್ದಾರೆ.

ಶಾಸಕ ಎಸ್. ರಾಮಪ್ಪ ಮಾತನಾಡಿದರು

ನಗರದ ಕಾಲೇಜಿಗೆ ಭೇಟಿ ನೀಡಿದ ಮಾಹಿತಿ ಕಲೆ ಹಾಕಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳನ್ನು ದಾಳವಾಗಿರಿಸಿಕೊಂಡು ರಾಜಕೀಯ ಮಾಡಬಾರದು, ಕೇಸರಿ‌ಶಾಲು ಹಾಕಿಕೊಂಡು ಕಾಲೇಜಿನಲ್ಲಿ ರಾಜಕೀಯ ಬೇಡ ಎಂದರು.

ಹರಿಹರದಲ್ಲಿ ಹಿಂದೂ - ಮುಸಲ್ಮಾನರು ಒಗ್ಗಟ್ಟಾಗಿ ಜೀವಿಸುತ್ತಿದ್ದಾರೆ. ಮಕ್ಕಳಲ್ಲಿ‌ ವಿಷಬೀಜ ಬಿತ್ತುವ ಕೆಲಸ ಮಾಡಬಾರದು. ಕೋರ್ಟ್ ಇದೆ, ಕಾನೂನು‌ ಇದೆ, ಇದರ ಬಗ್ಗೆ ಯಾರೂ ಉದ್ವಿಗ್ನ ಆಗೋದು ಬೇಡ. ಎಲ್ಲ ವಿದ್ಯಾರ್ಥಿಗಳು ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಬೇಕು ಎಂದು ಮನವಿ ಮಾಡಿದರು.

ಓದಿ:ಹಿಜಾಬ್ ಧರಿಸದೇ ಶಾಲಾ - ಕಾಲೇಜಿಗೆ ಬನ್ನಿ: ಬಿ.ಸಿ. ನಾಗೇಶ್

TAGGED:

ABOUT THE AUTHOR

...view details