ಕರ್ನಾಟಕ

karnataka

ETV Bharat / state

ಅಗ್ನಿ ಅವಘಡದಲ್ಲಿ 3 ಅಂಗಡಿಗಳು ಸುಟ್ಟು ಭಸ್ಮ: ಮೂವರು ಸಂತ್ರಸ್ತರಿಗೆ ತಲಾ ₹50 ಸಾವಿರ ನೀಡಿದ ಶಾಸಕ ರಾಮಚಂದ್ರಪ್ಪ - ದಾವಣಗೆರೆಯಲ್ಲಿ ಅಗ್ನಿ ಅವಘಡದಲ್ಲಿ ಅಂಗಡಿಗಳು ಸುಟ್ಟು ಭಸ್ಮ

ಜಿಲ್ಲೆಯ ಜಗಳೂರು ಪಟ್ಟಣದ ಕೆರೆ ಪಕ್ಕದಲ್ಲಿರುವ ಅಂಗಡಿಗಳಲ್ಲಿ ಕಳೆದ ತಡರಾತ್ರಿ ಅಗ್ನಿ ಅವಘಡ ಸಂಭವಿಸಿ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದ್ದವು. ಅಂಗಡಿಗಳು ಜಬೀವುಲ್, ಲುಕ್ಮನ್ ಸಾಬ್, ವೀರಣ್ಣ ಎಂಬುವರಿಗೆ ಸೇರಿದ್ದವು ಎಂದು ತಿಳಿದು ಬಂದಿದೆ..

MLA Ramachandrappa gave 50 thousand who were loss  shops in fire incident   at Davanagere
ಅಗ್ನಿ ಅವಘಡದಲ್ಲಿ ಅಂಗಡಿ ಕಳೆದುಕೊಂಡವರಿಗೆ ಶಾಸಕ ರಾಮಚಂದ್ರಪ್ಪ ಸಹಾಯ

By

Published : Feb 12, 2022, 8:05 PM IST

ದಾವಣಗೆರೆ :ಅಗ್ನಿ ಅವಘಡದಲ್ಲಿ ಮೂರು ಅಂಗಡಿಗಳು ಸುಟ್ಟು ಭಸ್ಮವಾಗಿದ್ದು, ಲಕ್ಷಾಂತರ ಮೌಲ್ಯದ ಗುಜರಿ ವಸ್ತುಗಳು ಸುಟ್ಟು ಕರಕಲಾಗಿವೆ. ಘಟನೆ ಬೆನ್ನಲ್ಲೆ ಜಗಳೂರು ಶಾಸಕ ಎಸ್‌ ವಿ ರಾಮಚಂದ್ರಪ್ಪ ಭೇಟಿ ನೀಡಿ ಅಂಗಡಿ ಮಾಲೀಕರಿಗೆ ತಲಾ ₹50 ಸಾವಿರ ಸಹಾಯಧನ ನೀಡಿ ಸಾಂತ್ವನ ಹೇಳಿದರು.

ಅಗ್ನಿ ಅವಘಡದಲ್ಲಿ ಅಂಗಡಿ ಕಳೆದುಕೊಂಡವರಿಗೆ ಶಾಸಕ ರಾಮಚಂದ್ರಪ್ಪ ಸಹಾಯ ಮಾಡಿರುವುದು..

ಜಿಲ್ಲೆಯ ಜಗಳೂರು ಪಟ್ಟಣದ ಕೆರೆ ಪಕ್ಕದಲ್ಲಿರುವ ಅಂಗಡಿಗಳಲ್ಲಿ ಕಳೆದ ತಡರಾತ್ರಿ ಅಗ್ನಿ ಅವಘಡ ಸಂಭವಿಸಿ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದ್ದವು. ಅಂಗಡಿಗಳು ಜಬೀವುಲ್, ಲುಕ್ಮನ್ ಸಾಬ್, ವೀರಣ್ಣ ಎಂಬುವರಿಗೆ ಸೇರಿದ್ದವು ಎಂದು ತಿಳಿದು ಬಂದಿದೆ.

ಇದರ ಬೆನ್ನಲ್ಲೇ ಸ್ಥಳಕ್ಕೆ ಶಾಸಕ ಎಸ್ ವಿ ರಾಮಚಂದ್ರಪ್ಪನವರು ಭೇಟಿ ನೀಡಿ ವೈಯಕ್ತಿಕವಾಗಿ ಮೂರು ಜನಕ್ಕೆ ತಲಾ 50 ಸಾವಿರ ರೂ. ಸಹಾಯಧನ ನೀಡಿದರು. ಈ ವೇಳೆ ಬಿಜೆಪಿ ಅಧ್ಯಕ್ಷ ಪಲ್ಲಾಗಟ್ಟೆ ಮಹೇಶ್, ಪಟ್ಟಣ ಪಂಚಾಯತ್‌ ಅಧ್ಯಕ್ಷ ರೇವಣ್ಣ, ಉಪಾಧ್ಯಕ್ಷೆ ಮಂಜಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇದನ್ನೂ ಓದಿ: ಬಾರ್​ನಲ್ಲಿ ಧಮ್​​ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ..

For All Latest Updates

ABOUT THE AUTHOR

...view details