ಕರ್ನಾಟಕ

karnataka

ಕಾಂಗ್ರೆಸ್​​ನ ರಣದೀಪ್ ಸುರ್ಜೇವಾಲ ಬಂಧನಕ್ಕೆ ಮಾಳವಿಕಾ ಆಗ್ರಹ

By

Published : Mar 26, 2019, 11:25 AM IST

ನಕಲಿ‌ ಡೈರಿ ಸೃಷ್ಟಿಸಿ ಬಿಡುಗಡೆ ಮಾಡಿದ ರಣದೀಪ್ ಸುರ್ಜೇವಾಲ ಬಂಧನಕ್ಕೆ ಮಾಳವಿಕಾ ಆಗ್ರಹ.

ಮಾಳವಿಕಾ

ದಾವಣಗೆರೆ: ಯಡಿಯೂರಪ್ಪ ಬಿಜೆಪಿ ಕೇಂದ್ರ ವರಿಷ್ಠರಿಗೆ 1800 ಕೋಟಿ ರೂಪಾಯಿ ಕಪ್ಪ ನೀಡಿದ್ದಾರೆ ಎಂದು ಸುಳ್ಳು ಆರೋಪ ಮಾಡಲಾಗಿದೆ. ಈ ಕುರಿತು ನಕಲಿ‌ ಡೈರಿ ಸೃಷ್ಟಿಸಿ ಬಿಡುಗಡೆ ಮಾಡಿದ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ರಣದೀಪ್ ಸುರ್ಜೇವಾಲರನ್ನು ಬಂಧಿಸಬೇಕು ಎಂದು ಬಿಜೆಪಿ ನಾಯಕಿ ಮಾಳವಿಕಾ ಆಗ್ರಹಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಯಾವುದೋ ಝೆರಾಕ್ಸ್ ಪ್ರತಿಯ ಹಾಳೆಯ ಆಧಾರದ ಮೇಲೆ ಯಡಿಯೂರಪ್ಪ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಸುರ್ಜೇವಾಲ ಬಿಡುಗಡೆ ಮಾಡಿದ ಡೈರಿ ಫೋರ್ಜರಿ ಎಂದು ಆದಾಯ ಇಲಾಖೆ ಪ್ರಧಾನ ಮುಖ್ಯ ಆಯುಕ್ತ ಬಾಲಕೃಷ್ಣ ಸ್ಪಷ್ಟವಾಗಿ ಹೇಳಿದ್ದಾರೆ. ಕಾಂಗ್ರೆಸ್ ಚುನಾವಣೆ ವೇಳೆ ಜನರನ್ನು ಹಾದಿ ತಪ್ಪಿಸಲಿಕ್ಕೆ ಇಂಥ ಕೃತ್ಯಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.

ರಣದೀಪ್ ಸುರ್ಜೇವಾಲ ಬಂಧನಕ್ಕೆ ಮಾಳವಿಕಾ ಆಗ್ರಹ

ಜಲಸಂಪನ್ಮೂಲ ಸಚಿವ ಡಿ.‌ಕೆ. ಶಿವಕುಮಾರ್ ಅವರ 75 ಕೋಟಿ ಮೌಲ್ಯದ ಆಸ್ತಿಯನ್ನು ಐಟಿ ಇಲಾಖೆಯವರು ಜಪ್ತಿ ಮಾಡಿರುವುದು ಜಗಜ್ಜಾಹೀರಾಗಿದೆ. ಡಿಕೆಶಿ ತೆರಿಗೆ ವಂಚನೆ, ಅಕ್ರಮ ಹಣ ಹೂಡಿಕೆ ಪ್ರಕರಣದಲ್ಲಿ ಸಿಲುಕಿದ್ದಾರೆ. ಇಷ್ಟೆಲ್ಲಾ ಅಕ್ರಮದಲ್ಲಿ ಭಾಗಿಯಾಗಿರುವ ಶಿವಕುಮಾರ್ ಅವರ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಂಡಿಲ್ಲ.‌ ಕೂಡಲೇ ಶಿವಕುಮಾರ್ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಮಾಳವಿಕಾ ಆಗ್ರಹಿಸಿದರು.

For All Latest Updates

TAGGED:

ABOUT THE AUTHOR

...view details