ಕರ್ನಾಟಕ

karnataka

By

Published : Oct 15, 2022, 2:29 PM IST

ETV Bharat / state

ದಾವಣಗೆರೆಯಲ್ಲಿ ಕೈಚಳಕ ತೋರಿದ ಕಳ್ಳರು: 80 ಗ್ರಾಂ ಬಂಗಾರ, ಅರ್ಧ ಕೆಜಿ ಬೆಳ್ಳಿ ಕಳವು

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಂಗೇನಹಳ್ಳಿ ಗ್ರಾಮದ ಮಾರುತಿ ಎಂಬುವರ ಮನೆಯಲ್ಲಿ 6.5 ಲಕ್ಷ ರೂ. ನಗದು ಹಾಗೂ 80 ಗ್ರಾಂ ಬಂಗಾರ, ಅರ್ಧ ಕೆಜಿ ಬೆಳ್ಳಿ ಕಳವು ಮಾಡಿ ಕಳ್ಳರು ಪರಾರಿಯಾಗಿದ್ದಾರೆ.

stolen
ದಾವಣಗೆರೆಯಲ್ಲಿ ಕೈಚಳಕ ತೋರಿದ ಕಳ್ಳರು

ದಾವಣಗೆರೆ: ಯಾರೂ ಇಲ್ಲದ ವೇಳೆ ಬೀಗ ಮುರಿದು ಮನೆಗೆ ನುಗ್ಗಿದ ಖದೀಮರು 6.5 ಲಕ್ಷ ರೂ. ನಗದು ಹಾಗೂ 80 ಗ್ರಾಂ ಬಂಗಾರ, ಅರ್ಧ ಕೆಜಿ ಬೆಳ್ಳಿ ಕಳವು ಮಾಡಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಂಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ದಾವಣಗೆರೆಯಲ್ಲಿ ಕೈಚಳಕ ತೋರಿದ ಕಳ್ಳರು

ಮಂಗೇನಹಳ್ಳಿ ಗ್ರಾಮದ ಮಾರುತಿ ಎಂಬುವರ ಮನೆಯಲ್ಲಿ ಕಳ್ಳತನ ಮಾಡಲಾಗಿದೆ. ಮಾರುತಿ ಕುಟುಂಬಸ್ಥರು ಊರಿಗೆ ಹೋಗಿ ಇಂದು ಬೆಳಗ್ಗೆ ಮನೆಗೆ ಹಿಂದಿರುಗಿದಾಗ ಪ್ರಕರಣ ಬೆಳಕಿಗೆ ಬಂದಿದೆ.‌ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಖದೀಮರ ಪಾಲಾಗಿದ್ದು, ಕುಟುಂಬಸ್ಥರು ದೂರು ನೀಡಿದ್ದಾರೆ.

ಇದನ್ನೂ ಓದಿ:ಚಿನ್ನಾಭರಣ ದೋಚಿದ್ದ ಅಣ್ಣ-ತಮ್ಮ ಸೇರಿ ಮೂವರು ಅಂದರ್‌: ಕಳ್ಳತನಕ್ಕೆ ಪೋಷಕರು ಸಾಥ್‌

ಈ ಸಂಬಂಧ ಘಟನಾ ಸ್ಥಳಕ್ಕೆ ಸಂತೆಬೆನ್ನೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಖದೀಮರ ಬಂಧನಕ್ಕೆ ಬಲೆ ಬೀಸಿದ್ದಾರೆ.

ABOUT THE AUTHOR

...view details