ಕರ್ನಾಟಕ

karnataka

ETV Bharat / state

ಎರಡು ರೂಪಾಯಿ ಡಾಕ್ಟರ್ ಬಸವಂತಪ್ಪಗೆ ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ - Serving the poor for 18 years

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ಸಂತೇಬೆನ್ನೂರು ಗ್ರಾಮೀಣ ಪ್ರದೇಶದಲ್ಲಿ ಎರಡು ರೂಪಾಯಿ ಡಾಕ್ಟರ್​ ಎಂದೇ ಬಸವಂತಪ್ಪ ಚಿರಪರಿಚಿತರು . ಸಿದ್ದೇಶ್ವರ ಹೆಸರಿನ ಪುಟ್ಟ ಕ್ಲಿನಿಕ್ ಇಟ್ಟುಕೊಂಡು ಬರೀ ಎರಡು ರೂಪಾಯಿ ಪಡೆದು ಸುಮಾರು 18 ವರ್ಷಗಳಿಂದ ಬಡವರ ಸೇವೆ ಮಾಡುತ್ತಿದ್ದರು. ಇವರ ಸೇವೆಯನ್ನು ಸರ್ಕಾರ ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

Dr Basavanthappa
ಎರಡು ರೂಪಾಯಿ ಡಾಕ್ಟರ್ ಬಸವಂತಪ್ಪ

By

Published : Oct 31, 2022, 10:43 AM IST

ದಾವಣಗೆರೆ:ಇಂದಿನ ದಿನಗಳಲ್ಲಿ ಚಿಕಿತ್ಸೆ ಬಿಟ್ಟುಬಿಡಿ ವೈದ್ಯರ ಪ್ರವೇಶ ಫೀ ನೋಡಿದರೇ ತಲೆ ತಿರುಗುವ ಕಾಲವಿದು. ಅಂತಹುದರಲ್ಲಿ ಇಲ್ಲೊಬ್ಬ ವೈದ್ಯರು ಯಾರಾದರೂ ಬಳಿ ಬಂದ್ರೇ ಕೇವಲ ಎರಡು ರೂಪಾಯಿ ಪಡೆದು ಅವರಿಗೆ ಸೂಕ್ತ ಚಿಕಿತ್ಸೆ ನೀಡುತ್ತಾ ರಾಜ್ಯಾದ್ಯಂತ ಮನೆಮಾತಾಗಿದ್ದಾರೆ.

ಬಡವರ ಆಶಾಕಿರಣ, ಗ್ರಾಮೀಣ ಜನರ ಆರಾಧ್ಯದೈವ ಎಂದೇ ಜನಪ್ರಿಯಗಳಿಸಿರುವ ಡಾ ಎಂ. ಬಸವಂತಪ್ಪ ಅವರ ಹೆಸರು ಇದೀಗ ಮುನ್ನಲೆಗೆ ಬಂದಿದೆ. ರಾಜ್ಯ ಸರಕಾರ ಡಾ ಎಂ. ಬಸವಂತಪ್ಪ ಅವರ ಸೇವೆ ಗುರುತಿಸಿ ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದೆ.

ಎರಡು ರೂಪಾಯಿ ಡಾಕ್ಟರ್ ಬಸವಂತಪ್ಪ:ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನ ಎರಡು ರೂಪಾಯಿ ಡಾಕ್ಟರ್​​ ಎಂದೇ ಡಾ. ಬಸವಂತಪ್ಪ ಚಿರಪರಿಚಿತರು. ಅವರು ಗ್ರಾಮೀಣ ಭಾಗದಲ್ಲಿ ಸಿದ್ದೇಶ್ವರ ಹೆಸರಿನ ಪುಟ್ಟ ಕ್ಲಿನಿಕ್ ಇಟ್ಟುಕೊಂಡು ಸುಮಾರು 18 ವರ್ಷಗಳಿಂದ ಬಡವರ ಸೇವೆ ಮಾಡುತ್ತಿದ್ದರು. ಇವರ ಸೇವೆಯನ್ನು ಸರ್ಕಾರ ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿ,ಗೌರವಿಸಿದೆ.

ಡಾ.ಬಸವಂತಪ್ಪ ಬೆಳೆದು ಬಂದ ದಾರಿ:ಡಾ ಎಂ. ಬಸವಂತಪ್ಪ ಅವರು ತಂದೆಯ ಮಾತುಗಳನ್ನು ಆದರ್ಶವಾಗಿ ತೆಗೆದುಕೊಂಡು ಬಡವರಿಗೆ ಅತಿ ಕಡಿಮೆ ದರದಲ್ಲಿ ಚಿಕಿತ್ಸೆ ನೀಡಲು ಆರಂಭಿಸಿದ್ದರಂತೆ. ಅದು ಎರಡು ರೂಪಾಯಿ ವೈದ್ಯರೆಂದೇ ಜನಪ್ರಿಯಗಳಿಸಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ಸಂತೇಬೆನ್ನೂರಿನ ಸಿದ್ದಪ್ಪ ಹಾಗು ಹಾಲಮ್ಮ ದಂಪತಿಯ ಎರಡನೇ ಪುತ್ರನಾಗಿ ಇವರು 1951 ಜನಿಸಿದರು.

ಸಿರಿಗೆರೆಯಲ್ಲಿ ಎಸ್​ಎಸ್​ಎಲ್​​​​​ಸಿ, ಶಿವಮೊಗ್ಗದ ಸಹ್ಯಾದ್ರಿ ಪಿಯು ಕಾಲೇಜಿನಲ್ಲಿ ಪಿಯುಸಿ, ಮೈಸೂರು ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದಾರೆ. ಬಳಿಕ 1987 ರಲ್ಲಿ ಸಂತೇಬೆನ್ನೂರಿನ ಸಿದ್ದೇಶ್ವರ ಕ್ಲಿನಿಕ್ ಆರಂಭಿಸಿದ ಅವರು ಬಡವರಿಗೆ ತಂದೆಯವರ ಆದರ್ಶದಂತೆ ಅವರು ಸೇವೆ ಮಾಡ್ತಾ, 18 ವರ್ಷಗಳ ಕಾಲ ಕೇವಲ ಎರಡು ರೂಪಾಯಿ ವೈದ್ಯರು ಎಂದು ಇಡೀ ಸಂತೇಬೆನ್ನೂರಿನಲ್ಲಿ ಖ್ಯಾತಿ ಗಳಿಸಿದ್ದಾರೆ.

ಇದನ್ನೂಓದಿ:ಬೆಳಗಾವಿಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ, ಎಂಇಎಸ್​ನಿಂದ ಕರಾಳ ದಿನಾಚರಣೆ: ಪೊಲೀಸ್ ಸರ್ಪಗಾವಲು

ABOUT THE AUTHOR

...view details