ಕರ್ನಾಟಕ

karnataka

By

Published : Nov 1, 2021, 3:34 PM IST

ETV Bharat / state

ಕೇದಾರನಾಥೇಶ್ವರ ದೇವಾಲಯ ಮುಂದೆ ಮೊಳಗಿದ ಕನ್ನಡದ ಕಂಪು

ಕೇದಾರನಾಥನ ದರ್ಶನಕ್ಕೆ ತೆರಳಿದ್ದ ದಾವಣಗೆರೆಯ ಮೂಲದ ಪ್ರವಾಸಿಗರು ಇಂದು ಕನ್ನಡ ರಾಜ್ಯೋತ್ಸವ ಇರುವ ಬೆನ್ನಲ್ಲೇ ಕನ್ನಡದ ಧ್ವಜ ಹಿಡಿದು ಕನ್ನಡದ ಕಂಪು ಪಸರಿಸಿದ್ದಾರೆ..

Kannada rajyotsava celebration in front of kedarnath temple
ಉ. ಪ್ರದೇಶದ ಕೇದಾರನಾಥೇಶ್ವರ ದೇವಾಲಯ ಮುಂದೆ ಮೊಳಗಿದ ಕನ್ನಡದ ಕಂಪು

ದಾವಣಗೆರೆ: ಇಂದು ರಾಜ್ಯಾದಂತ್ಯ 66ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ನಮ್ಮ ರಾಜ್ಯವಲ್ಲದೆ ಉತ್ತರಖಂಡದಲ್ಲೂ ಕೂಡ ಕನ್ನಡದ ಕಂಪನ್ನು ಕನ್ನಡಭಿಮಾನಿಗಳು ಪಸರಿಸಿದ್ದಾರೆ.

ಉತ್ತರಖಂಡದ ಕೇದಾರದಲ್ಲಿ ಕನ್ನಡ ‌ಡಿಂಡಿಮವನ್ನು ದಾವಣಗೆರೆಯ ಹುಡುಗರ ತಂಡ ಮೊಳಗಿಸಿದೆ. ದಾವಣಗೆರೆಯಿಂದ ಪ್ರವಾಸ ಹೋದವರಿಂದ ಕೇದಾರನಾಥದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗಿದೆ. ಕೇದಾರನಾಥೇಶ್ವರ ದೇಗುಲದ ಆವರಣದಲ್ಲಿ ಕನ್ನಡದ ಬಾವುಟ ಹಿಡಿದು ಕನ್ನಡಾಂಭೆಗೆ ಜೈಕಾರ ಹಾಕಿದ್ದಾರೆ.

ಕೇದಾರನಾಥೇಶ್ವರ ದೇವಾಲಯ ಮುಂದೆ ಮೊಳಗಿದ ಕನ್ನಡದ ಕಂಪು..

ಕೇದಾರನಾಥನ ದರ್ಶನಕ್ಕೆ ತೆರಳಿದ್ದ ದಾವಣಗೆರೆಯ ಮೂಲದ ಪ್ರವಾಸಿಗರು ಇಂದು ಕನ್ನಡ ರಾಜ್ಯೋತ್ಸವ ಇರುವ ಬೆನ್ನಲ್ಲೇ ಕನ್ನಡದ ಧ್ವಜ ಹಿಡಿದು ಕನ್ನಡದ ಕಂಪು ಪಸರಿಸಿದ್ದಾರೆ.

ಎಲ್ಲೇ ಇರು ಹೇಗೇ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂದು ಹಾಡು ಹಾಡಿ ಕನ್ನಡಾಂಭೆಗೆ ಗೌರವ ಸಲ್ಲಿಸಿದ್ದಾರೆ.

ABOUT THE AUTHOR

...view details