ಕರ್ನಾಟಕ

karnataka

By

Published : Mar 23, 2021, 11:19 AM IST

ETV Bharat / state

ಅಂತರ್ ಜಿಲ್ಲಾ ಬೈಕ್ ‌ಕಳ್ಳನ ಬಂಧನ, 8 ಬೈಕ್​ಗಳು ವಶ

ಅಂತರ್ ಜಿಲ್ಲಾ ಬೈಕ್‌ ಕಳ್ಳನನ್ನು ಬಂಧಿಸಿದ ಪೊಲೀಸರು ಬಂಧಿತರಿಂದ ದ್ವಿಚಕ್ರ ವಾಹನಗಳನ್ನು ದಾವಣಗೆರೆ ಜಿಲ್ಲೆ ಖಾಕಿ ಪಡೆ ಮಾಡಿದೆ.

Inter district bike thieves, Inter district bike thieves arrest, Inter district bike thieves arrest in Davanagere, Davanagere crime news, ಅಂತರ್ ಜಿಲ್ಲಾ ಬೈಕ್ ‌ಕಳ್ಳರು, ಅಂತರ್ ಜಿಲ್ಲಾ ಬೈಕ್‌ಕಳ್ಳರ ಬಂಧನ, ದಾವಣಗೆರೆಯಲ್ಲಿ ಅಂತರ್ ಜಿಲ್ಲಾ ಬೈಕ್‌ಕಳ್ಳರ ಬಂಧನ, ದಾವಣಗೆರೆ ಅಪರಾಧ ಸುದ್ದಿ,
ಅಂತರ್ ಜಿಲ್ಲಾ ಬೈಕ್ ‌ಕಳ್ಳರ ಬಂಧನ

ದಾವಣಗೆರೆ:ಜಿಲ್ಲೆಯ ಚನ್ನಗಿರಿ ಪೊಲೀಸ್​ ಠಾಣೆಯ ಪೊಲೀಸರು ಅಂತರ ಜಿಲ್ಲಾ ಬೈಕ್​ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ದುಮ್ಮಿ ಗ್ರಾಮದ ನಿವಾಸಿ ಈರಣ್ಣ ಅಲಿಯಾಸ್ ಸರೇಶ್​ನನ್ನು ಪೊಲೀಸರು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಆರೋಪಿ ಈರಣ್ಣ ವಿವಿಧ ಜಿಲ್ಲೆಯಲ್ಲಿ ನಾಲ್ಕು ಲಕ್ಷ ಮೌಲ್ಯ ಬೆಲೆ ಬಾಳುವ ವಿವಿಧ ಕಂಪನಿಯ 8 ಬೈಕ್ ಗಳನ್ನು ಕಳ್ಳತನ ಮಾಡಿ ತಲೆಮರಿಸಿಕೊಂಡಿದ್ದನು. ಪತ್ತೆ ಹಚ್ಚಿದ ಪೊಲೀಸರು ಆರೋಪಿ ಈರಣ್ಣನಿಂದ ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ.

ಇನ್ನು ವಶಪಡಿಸಿಕೊಂಡ ಬೈಕ್​ಗಳ ಬಗ್ಗೆ ಆರೋಪಿತನಿಗೆ ಕಳ್ಳತನ ಮಾಡಿದ ಸ್ಥಳಗಳ ಬಗ್ಗೆ ಮಾಹಿತಿ ಇರುವುದಿಲ್ಲ. ಸಿಬ್ಬಂದಿಯ ಕಾರ್ಯವೈಖರಿ ಬಗ್ಗೆ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಹನುಮಂತರಾಯ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ರಾಜೀವ್‌.ಎಂ ಪ್ರಶಂಸೆ ವ್ಯಕ್ತ ಪಡಿಸಿದರು.

ABOUT THE AUTHOR

...view details