ಕರ್ನಾಟಕ

karnataka

ETV Bharat / state

ಆರೋಗ್ಯದಲ್ಲಿ ಚೇತರಿಕೆ‌ ಕಾಣ್ತಿದೆ, ಭಯಪಡುವ ಅವಶ್ಯಕತೆ ಇಲ್ಲ.. ಎಂ ಪಿ ರೇಣುಕಾಚಾರ್ಯ - M.P.Renukacharya Condition

ಶೀಘ್ರದಲ್ಲೇ ಮತ್ತೆ ಎಂದಿನಂತೆ ಜನಸೇವೆಗೆ ಮರಳುತ್ತೇನೆ ಎಂದು ಭರವಸೆ ನೀಡಿದ್ದಾರೆ. ಸಾವಿರಾರು ಹಿತೈಷಿಗಳು ದೂರವಾಣಿಯ ಮುಖಾಂತರ ನನ್ನ ಆರೋಗ್ಯದ ಬಗ್ಗೆ ತೋರುತ್ತಿರುವ ಕಾಳಜಿಗೆ ನನ್ನ ಹೃದಯ ತುಂಬಿ ಬಂದಿದೆ..

M.P.Renukacharya
ಎಂ.ಪಿ.ರೇಣುಕಾಚಾರ್ಯ

By

Published : Oct 2, 2020, 8:04 PM IST

ದಾವಣಗೆರೆ :ಕಳೆದ ಮೂರು ದಿನಗಳಿಂದ ಬೆಂಗಳೂರಿನ ನನ್ನ ಸರ್ಕಾರಿ ನಿವಾಸದಲ್ಲಿ ಹೋಂ ಕ್ವಾರಂಟೈನ್​​ನಲ್ಲಿರುವೆ. ನಿರಂತರ ಯೋಗ ಹಾಗೂ ವಾಯುವಿಹಾರ ಮಾಡುತ್ತಿದ್ದೇನೆ. ನನ್ನ ಆರೋಗ್ಯದಲ್ಲಿ ಚೇತರಿಕೆ ಕಾಣುತೊಡಗಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಹೇಳಿದ್ದಾರೆ.

ಆತ್ಮವಿಶ್ವಾಸ ಇದ್ದರೆ ಸಾವನ್ನೂ ಸಹ ಒಂದು ಕ್ಷಣ ತಡೆದು ನಿಲ್ಲಿಸಬಹುದು. ಮನುಕುಲಕ್ಕೆ ಮಾರಕವಾಗಿರುವ ಕೊರೊನಾ ಮಹಾಮಾರಿಯನ್ನು ಎದುರಿಸಲು ಮನುಷ್ಯನಿಗೆ ಆತ್ಮವಿಶ್ವಾಸ ಬಹಳ ಮುಖ್ಯ. ನನ್ನ ಸರ್ಕಾರಿ ನಿವಾಸದಿಂದಲೇ ನನ್ನ ಆಪ್ತ ಸಹಾಯಕರ ಮೂಲಕ ನನ್ನ ಮತ ಕ್ಷೇತ್ರಕ್ಕೆ ಸಂಬಂಧಪಟ್ಟ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಿರುವೆ.

ಶೀಘ್ರದಲ್ಲೇ ಮತ್ತೆ ಎಂದಿನಂತೆ ಜನಸೇವೆಗೆ ಮರಳುತ್ತೇನೆ ಎಂದು ಭರವಸೆ ನೀಡಿದ್ದಾರೆ. ಸಾವಿರಾರು ಹಿತೈಷಿಗಳುದೂರವಾಣಿಯ ಮುಖಾಂತರ ನನ್ನ ಆರೋಗ್ಯದ ಬಗ್ಗೆ ತೋರುತ್ತಿರುವ ಕಾಳಜಿಗೆ ನನ್ನ ಹೃದಯ ತುಂಬಿ ಬಂದಿದೆ. ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಬಂಧುಗಳು ನನ್ನ ಆರೋಗ್ಯ ವಿಚಾರಿಸಲು ಬೆಂಗಳೂರಿಗೆ ಬರಬಾರದು ಎಂದು ಮನವಿ ಮಾಡುತ್ತೇನೆ.

ನನ್ನ ಆರೋಗ್ಯ ವೃದ್ಧಿಗಾಗಿ ನನ್ನ ಹಿತೈಷಿಗಳು, ಮುಖಂಡರು ಹಾಗೂ ಕಾರ್ಯಕರ್ತರು ವಿಶೇಷ ಪೂಜೆ ಮಾಡಿಸಿರುವುದಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ನಿಮ್ಮ ಪ್ರೀತಿ ಪೂರ್ವಕ ಅಭಿಮಾನ ಹಾಗೂ ಹೃದಯ ಪೂರ್ವಕ ಕಾಳಜಿಗೆ ನನ್ನ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದಿದ್ದಾರೆ‌.

ABOUT THE AUTHOR

...view details