ಕರ್ನಾಟಕ

karnataka

By

Published : Oct 21, 2019, 10:54 PM IST

ETV Bharat / state

ಮಲೆನಾಡಿನಲ್ಲಿ ವ್ಯಾಪಕ ಮಳೆ: ಏಳು ವರ್ಷಗಳ ಬಳಿಕ ತುಂಬಿದ ಏಷ್ಯಾದ 2ನೇ ಅತಿದೊಡ್ಡ ಕೆರೆ!

ಮಲೆನಾಡಿನಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ಏಳು ವರ್ಷದ ಬಳಿಕ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಸೂಳೆಕೆರೆಗೆ ನೀರು ಹರಿದು ಬರುತ್ತಿದೆ.

ಏಳು ವರ್ಷಗಳ ಬಳಿಕ ತುಂಬಿದ ಸೂಳೆಕೆರೆ

ದಾವಣಗೆರೆ:ಮಲೆನಾಡಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಭದ್ರಾ ಜಲಾಶಯದ ಒಳ ಹರಿವು ಹೆಚ್ಚಾಗಿರುವ ಕಾರಣ, ನೀರನ್ನು ಹೊರಬಿಡಲಾಗುತ್ತಿದೆ. ಈ ನೀರು ಇದೀಗ ಏಷ್ಯಾ ಖಂಡದ ಎರಡನೇ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸೂಳೆಕೆರೆಗೆ ಹರಿದು ಬರುತ್ತಿದೆ.

ಕಳೆದ ಏಳು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಸೂಳೆಕೆರೆಗೆ ನೀರು ಹರಿದು ಬರುತ್ತಿದೆ. ಭದ್ರಾ ಡ್ಯಾಂನಿಂದ ನಾಲೆ ಮೂಲಕ ನೀರು ಬರುತ್ತಿದೆ. ಜೊತೆಗೆ ಸೂಳೆ ಕೆರೆಗೆ ಸಂತೇಬೆನ್ನೂರು ತಾಲೂಕಿನ ಹಿರೇಹಳ್ಳದಿಂದಲೂ ನೀರು ಬರುತ್ತಿದೆ. ಈಗ ಹಿರೇಹಳ್ಳಿ ಉಕ್ಕಿ ಹರಿಯುತ್ತಿರುವ ಕಾರಣ ಕೆರೆಗೆ ಯಥೇಚ್ಛ ನೀರು ಹರಿದು ಬರುತ್ತಿದೆ.

ಏಳು ವರ್ಷಗಳ ಬಳಿಕ ತುಂಬಿದ ಸೂಳೆಕೆರೆ

ಚಿತ್ರದುರ್ಗ ಜಿಲ್ಲೆಗೆ ಕುಡಿಯುವ ನೀರು ಪೂರೈಸುವ, ಚನ್ನಗಿರಿ ತಾಲೂಕಿನ ರೈತರ ಜೀವನಾಡಿಯಾಗಿರುವ ಸೂಳೆಕೆರೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದು ಒಂದೆಡೆ ರೈತಾಪಿ ವರ್ಗಕ್ಕೆ ಸಂತಸ ತಂದಿದೆ. ಮತ್ತೊಂದೆಡೆ ಕೆರೆ ಕೋಡಿ ಬೀಳುವ ಆತಂಕವೂ ಎದುರಾಗಿದೆ. ಒಂದು ವೇಳೆ ಸೂಳೆಕೆರೆ ಕೋಡಿ ಬಿದ್ದರೆ ಈ ನೀರು ದೇವರ ಬೆಳಕೆರೆಗೆ ಹೋಗುತ್ತದೆ. ಇಲ್ಲಿ ನೀರು ಜಾಸ್ತಿಯಾದರೆ,ರೈತರ ಜಮೀನುಗಳಿಗೆ ನುಗ್ಗುವ ಭೀತಿ ಇದ್ದು, ಜನರು ಎಚ್ಚರದಿಂದ ಇರುವಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಸೂಳೆಕೆರೆಯ ಇಂದಿನ ನೀರಿನ ಮಟ್ಟ 25.5 ಅಡಿ ಇದ್ದು, ಭದ್ರಾ ನಾಲೆ, ಹಿರೇಹಳ್ಳ, ಮಾವಿನ ಹೊಳೆಕೆರೆ ಹಳ್ಳದಿಂದ ಈಗ ಹರಿದು ಬರುತ್ತಿರುವಷ್ಟೇ ಬಂದರೆ ಕೆರೆ ಕೋಡಿ ಬೀಳುವ ಅಪಾಯ ಇದೆ.

ABOUT THE AUTHOR

...view details