ದಾವಣಗೆರೆ:ವಿಜಯದಶಮಿ ಹಬ್ಬದ ಪ್ರಯುಕ್ತ ಹಿಂದೂ ಪರ ಸಂಘಗಳ ನೇತೃತ್ವದಲ್ಲಿ ಶೋಭಯಾತ್ರೆಗೆ ಅದ್ಧೂರಿ ಚಾಲನೆ ದೊರೆತಿದೆ. ಸಂಸದ ಜಿಎಂ ಸಿದ್ದೇಶ್ವರ್ ಈ ಶೋಭಾಯಾತ್ರೆಗೆ ಚಾಲನೆ ನೀಡಿದರು. ದಾವಣಗೆರೆ ನಗರದ ವೆಂಕಟೇಶ್ವರ ವೃತ್ತದಿಂದ ಆರಂಭವಾದ ಶೋಭಾಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಯುವಕರು ಭಾಗಿಯಾಗಿ ಡಿಜೆ ಸದ್ದಿಗೆ ಸಖತ್ ಹೆಜ್ಜೆ ಹಾಕಿದ್ದಾರೆ.
ಇನ್ನು ಕೆಲವರು ಭಗವಾಧ್ವಜ ಹಿಡಿದು ವಿಠಲ ವಿಠಲ ಹಾಡಿಗೆ ಭರ್ಜರಿ ಸ್ಡೆಪ್ ಹಾಕಿದರು. ಇನ್ನು ಶೋಭಾಯಾತ್ರೆಯಲ್ಲಿ ವೀರ್ ಸಾವರ್ಕರ್ ಫ್ಲೆಕ್ಸ್ ರಾರಾಜಿಸುತ್ತಿತ್ತು, ಇದಲ್ಲದೇ ಪರೇಶ್ ಮೆಸ್ತಾ, ಹರ್ಷ ಹಿಂದೂ, ರುದ್ರೇಶ್ ಶಿವಾಜಿ ನಗರ, ಪ್ರವೀಣ್ ನೆಟ್ಟಾರು ಹೀಗೆ ಮೃತ ಹಿಂದೂ ಕಾರ್ಯಕರ್ತರ ಫ್ಲೆಕ್ಸ್ ಅಳವಡಿಕೆ ಮಾಡಿ ಮೆರವಣಿಗೆ ಮಾಡಲಾಗಿತ್ತು.