ದಾವಣಗೆರೆ:ನಗರದಲ್ಲಿ ಹಾಡುಹಗಲೆ ಯುವತಿಯ ಮರ್ಡರ್ ಮಾಡಲಾಗಿತ್ತು, ಯುವಕನನ್ನು ನಡುರಸ್ತೆಯಲ್ಲೇ ಚೂರಿಯಿಂದ ಕತ್ತು ಸೀಳಿದ ಹಲ್ಲೆ ಮಾಡಲಾಗಿತ್ತು. ಈ ರೀತಿಯ ಘಟನೆಯಿಂದ ಇಡೀ ದಾವಣಗೆರೆಯ ಯುವ ಸಮುದಾಯ ಬೆಚ್ಚಿಬಿದ್ದಿತ್ತು. ನಮಗೆ ರಕ್ಷಣೆನೇ ಇಲ್ವಾ ಎಂದು ಭಯದ ವಾತಾವರಣದಲ್ಲಿ ಕಾಲಕಳೆಯುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಆದರೆ ಈಗ ತಮ್ಮನ್ನ ತಾವೇ ರಕ್ಷಣೆ ಮಾಡಿಕೊಳ್ಳಲು ಯುವತಿಯರಿಗೆ ಹಾಗೂ ಶಾಲಾ ವಿದ್ಯಾರ್ಥಿನಿಯರಿಗೆ ತಮ್ಮನ್ನ ತಾವೇ ರಕ್ಷಣೆ ಮಾಡಿಕೊಳ್ಳುವ ಕರಾಟೆ ತರಬೇತಿ ನೀಡಲಾಗುತ್ತಿದೆ.
ಪ್ರಸ್ತುತ ದಿನಗಳಲ್ಲಿ ಸಮಾಜದಲ್ಲಿ ಯುವತಿ ಹಾಗೂ ವಿದ್ಯಾರ್ಥಿನಿಯರ ಮೇಲೆ ನಡೆಯುತ್ತಿ ದೌರ್ಜನ್ಯಗಳು ಅಪಾರ, ನಡು ರಸ್ತೆಯಲ್ಲೇ ಯುವತಿಯರು ಭೀಕರವಾಗಿ ಹತ್ಯೆ ಮಾಡಲಾಗುತ್ತಿದೆ. ಇದನ್ನು ಮನಗಂಡ ಕರಾಟೆ ಮಾಸ್ಟರ್ ರಾಜು ಅವರು ಯುವತಿಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ಉಚಿತವಾಗಿ ಕರಾಟೆ ತರಬೇತಿ ನೀಡುತ್ತಿದ್ದಾರೆ.
ದಾವಣಗೆರೆಯ ಚರ್ಚ್ ಬಳಿ ನಡುರಸ್ತೆಯಲ್ಲಿ ಯುವತಿಯ ಹತ್ಯೆಯಿಂದ ಬೇಸರಗೊಂಡ ರಾಜು ಅವರು ಉಚಿತವಾಗಿ ಯುವತಿಯರಿಗೆ ಕರಾಟೆ ಕಲಿಸುವ ಚಿಂತನೆ ಮಾಡುತ್ತಾರೆ. ಪ್ರತಿ ಸರ್ಕಾರಿ ಖಾಸಗಿ ಹಾಗೂ ಶಾಲೆಗೆ ತೆರಳಿ ಐದು ದಿನಗಳ ಕಾಲ ಮಕ್ಕಳು ತಾವೇ ತಮ್ಮ ಆತ್ಮರಕ್ಷಣೆ ಮಾಡಿಕೊಳ್ಳುವಂತೆ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ. ವಿದ್ಯಾರ್ಥಿಗಳಲ್ಲದೇ ಯುವತಿಯರಿಗೆ ಹಾಗೂ ಮಹಿಳೆಯರಿಗೆ ತಮ್ಮ ತರಬೇತಿ ಕೇಂದ್ರದಲ್ಲಿ ಶಿಕ್ಷಣ ನೀಡುತ್ತಿದ್ದಾರೆ.
ದಾವಣಗೆರೆ ನಗರದ ನಿಟ್ಟುವಳ್ಳಿಯಲ್ಲಿರುವ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಕರಾಟೆ ಮಾಸ್ಟರ್ ರಾಜುರವರಿಂದು ಶಾಲೆಯ ಮಕ್ಕಳಿಗೆ ತರಬೇತಿ ನೀಡಿದರು. ಯಾರಾದರೂ ದಾಳಿ ಮಾಡಿದರೆ ಹೇಗೆ ಆತ್ಮ ರಕ್ಷಣೆ ಮಾಡಿಕೊಳ್ಳಬೇಕು, ಲಾಟಿ ಹಾಗು ಚೈನ್ ತರಬೇತಿ, ಪಂಚಸ್, ಕಿಕ್ಸ್ ಫೈಟ್ ಮಾಡೋದು ಹೇಗೆ ಎಂಬುದರ ಬಗ್ಗೆ ತರಬೇತಿ ನೀಡುತ್ತಿದ್ದೇನೆ ಎಂದು ರಾಜು ತಿಳಿಸಿದರು.