ಕರ್ನಾಟಕ

karnataka

ETV Bharat / state

ಐದು ಲಕ್ಷ ಬೆಲೆಬಾಳುವ ಅಡಕೆ ಕಳ್ಳತನ: ನಾಲ್ವರು ಅಪ್ರಾಪ್ತರು ಅರೆಸ್ಟ್​

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮಾದಾಪುರ ಹಾಗೂ ಶಿವಮೊಗ್ಗ ತಾಲೂಕಿನ ಮುದುವಾಲ ಗ್ರಾಮದಲ್ಲಿ ಐದು ಲಕ್ಷ ಬೆಲೆಬಾಳುವ ಅಡಕೆ ಕದ್ದ ನಾಲ್ವರು ಖದೀಮರನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್​​​ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.

By

Published : Mar 16, 2021, 11:07 AM IST

District Superintendent of Police Hanumantaraya
ಪೋಲಿಸ್ ವರಿಷ್ಠಾಧಿಕಾರಿ ಹನುಮಂತರಾಯ

ದಾವಣಗೆರೆ: ನ್ಯಾಮತಿ ಪೊಲೀಸರು ಐದು ಲಕ್ಷ ಬೆಲೆಬಾಳುವ ಅಡಕೆ ಕದ್ದ ನಾಲ್ವರು ಖದೀಮರನ್ನು ಬಂಧಿಸಿರುವುದಾಗಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.

ಐದು ಲಕ್ಷ ಬೆಲೆಬಾಳುವ ಅಡಕೆ ಕಳ್ಳತನ: ನಾಲ್ವರು ಅಪ್ರಾಪ್ತರು ಅರೆಸ್ಟ್​

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ‌ ಅವರು, ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮಾದಾಪುರ ಹಾಗೂ ಶಿವಮೊಗ್ಗ ತಾಲೂಕಿನ ಮುದುವಾಲ ಗ್ರಾಮದಲ್ಲಿ ಐದು ಲಕ್ಷ ಬೆಲೆಬಾಳುವ ಒಟ್ಟು 1,130 ಕೆ.ಜಿ ಅಡಕೆ ಕದ್ದು ನಾಲ್ವರು ಅಪ್ರಾಪ್ತರು ಓಮಿನಿಯಲ್ಲಿ ಆಯನೂರು ಬಳಿ ಹೋಗುತ್ತಿದ್ದರು. ಈ ವೇಳೆ, ಅನುಮಾನಗೊಂಡ ಪೊಲೀಸರು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಓದಿ:ಬೈಕ್ ಗಳು ಮುಖಾಮುಖಿ ಡಿಕ್ಕಿ: ಪೊಲೀಸ್ ಕಾನ್ಸ್​​ಟೇಬಲ್​ ಸಾವು

ಬಂಧಿತರೆಲ್ಲರೂ ಮೂಲತಃ ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕಿನವರಾಗಿದ್ದು, ಆರೋಪಿಗಳಿಂದ 1,130 ಕೆ.ಜಿ ಅಡಕೆ, ಒಂದು ಓಮಿನಿ ವಶಕ್ಕೆ ಪಡೆಯಲಾಗಿದೆ ಎಂದರು.

ABOUT THE AUTHOR

...view details