ಕರ್ನಾಟಕ

karnataka

ETV Bharat / state

ಯಡಿಯೂರಪ್ಪ ಅವರನ್ನು ಕಡೆಗಣಿಸಿರುವುದಕ್ಕೆ ಬಿಜೆಪಿಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ : ರೇಣುಕಾಚಾರ್ಯ - ಕಾಂಗ್ರೆಸ್​​ ಮುಕ್ತ ಕರ್ನಾಟಕ

ಹೊನ್ನಾಳಿ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಸ್ವಪಕ್ಷೀಯರ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.

former-mla-renukacharya-slams-bjp-leaders
ಯಡಿಯೂರಪ್ಪ ಅವರನ್ನು ಕಡೆಗಣಿಸಿರುವುದಕ್ಕೆ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ : ರೇಣುಕಾಚಾರ್ಯ

By ETV Bharat Karnataka Team

Published : Aug 29, 2023, 7:43 PM IST

ದಾವಣಗೆರೆ: ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಕಡೆಗಣಿಸಿರುವುದಕ್ಕೆ ಬಿಜೆಪಿಗೆ ಜನ ತಕ್ಕ ಪಾಠ ಕಲಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಕುಳಿತುಕೊಂಡಿರುವ ಐವರು ರಾಜ್ಯ ಬಿಜೆಪಿಯನ್ನು ನಿಯಂತ್ರಿಸುತ್ತಿದ್ದಾರೆ. ಇನ್ನು ನಮ್ಮ ನಾಯಕರಿಗೆ ಬುದ್ಧಿ ಬಂದಿಲ್ಲ ಎಂದು ಹೊನ್ನಾಳಿ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ. ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್​ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಬಗ್ಗೆ ಮಾತನಾಡುತ್ತಿಲ್ಲ. ಬಿಜೆಪಿಯಲ್ಲಿ ಕಾಣದ ಕೈಗಳು ಈ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್​​ ಮುಕ್ತ ಕರ್ನಾಟಕ ಮಾಡುವುದಾಗಿ ಹೇಳಿದ್ದೆವು. ಆದರೆ ಬಿಜೆಪಿಗೆ ರಾಜ್ಯದಲ್ಲಿ ಆ ಸ್ಥಿತಿ ಬಂದಿದೆ. ವಿರೋಧ ಪಕ್ಷದ ನಾಯಕರನ್ನು ನೇಮಕ ಮಾಡಲು ಆಗಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರನ್ನು ಎರಡು ವರ್ಷಗಳ ಹಿಂದೆ ಬದಲಾವಣೆ ಮಾಡಬೇಕಿತ್ತು, ಅದು ಆಗಿಲ್ಲ. ಅಧ್ಯಕ್ಷರು ಸಂಪೂರ್ಣ ನಿಷ್ಕ್ರಿಯರಾಗಿದ್ದಾರೆ. ಪಕ್ಷದಲ್ಲಿ ವರ್ಚಸ್ಸುಳ್ಳ ನಾಯಕರ ಕೊರತೆ ಇದೆ ಎಂದರು.

ನಮ್ಮ ಮುಖಂಡರು ಸೌಜನ್ಯಕ್ಕಾದರೂ ಕರೆ ಮಾಡಿ ಮಾತನಾಡುತ್ತಿಲ್ಲ‌. ನಮ್ಮನ್ನು ಬಿಜೆಪಿಯಿಂದ ಹೊರಕಳಿಸಲು ನೋಡುತ್ತಿದ್ದಾರೆ. ಈ ಗಟ್ಟಿ ಧ್ವನಿಯನ್ನು ಯಾರು ಅಡಗಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿದ್ದು ಯಡಿಯೂರಪ್ಪ, ಬೆಳೆಸಿದ್ದು ಯಡಿಯೂರಪ್ಪ, ಇವರಿಗೆ ಸಾಥ್​ ನೀಡಿದ್ದು, ಈಶ್ವರಪ್ಪ ಮತ್ತು ಅನಂತಕುಮಾರ್​ ಎಂದು ಹೇಳಿದರು. ಈಗ ಬಿಜೆಪಿ ಆಫೀಸಿನಲ್ಲಿರುವವರು ಯಾರೂ ಬಿಜೆಪಿ ಕಟ್ಟಿಲ್ಲ ಎಂದು ಸ್ವಪಕ್ಷೀಯರ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ನನ್ನ ಕಣ್ಣೆದುರೇ ಹಾಳಾಗುತ್ತಿದೆ ಎಂದು ಯಡಿಯೂರಪ್ಪನವರು ಕಣ್ಣೀರು ಹಾಕುತ್ತಿದ್ದಾರೆ. ಅನಂತ್​ ಕುಮಾರ್ ಅವರು ಬದುಕಿದ್ದರೆ ಬಿಜೆಪಿಗೆ ಈ ಸ್ಥಿತಿ ಬರುತ್ತಿರಲಿಲ್ಲ. ಈಶ್ವರಪ್ಪ ಅವರನ್ನು ಮೂಲೆ ಗುಂಪು ಮಾಡಿದರು. ಜಗದೀಶ್ ಶೆಟ್ಟರ್​ ಮತ್ತು ಲಕ್ಷ್ಮಣ್​ ಸವದಿಯನ್ನು ಕಾಂಗ್ರೆಸ್​ಗೆ ಹೋಗುವಂತೆ ಇವರೇ ಮಾಡಿದರು. ಈಗ ಬಿಜೆಪಿ ಅಫೀಸ್ ನಲ್ಲಿ ಕೂತಿರುವವರು ಯಾರು ಪಕ್ಷ ಕಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಯಲ್ಲಿ ಯಡಿಯೂರಪ್ಪ ನಂತರ ಎರಡನೇ ಹಂತದ ನಾಯಕರೇ ಇಲ್ಲ. ಅಂತಹ ಪರಿಸ್ಥಿತಿ ತಂದಿದ್ದಾರೆ. ದೆಹಲಿಯಲ್ಲಿ ಕುಳಿತಿರುವ ಕರ್ನಾಟಕದ ನಾಯಕರು ಪೂರ್ತಿ ನಿಯಂತ್ರಿಸುತ್ತಿದ್ದಾರೆ. ಅವರು ಹೇಳಿದವರೇ ಪಕ್ಷದ ರಾಜ್ಯಾಧ್ಯಕ್ಷ ಆಗಬೇಕು. ಅವರು ಹೇಳಿದಂತೆಯೇ ಎಲ್ಲಾ ಆಗಬೇಕು. ಮುಖ್ಯಮಂತ್ರಿ ಆದವರೂ ಅವರ ಮಾತನ್ನು ಕೇಳಬೇಕು. ರಾಜ್ಯ ಬಿಜೆಪಿಯ ದಯನೀಯ ಸ್ಥಿತಿಗೆ ಅವರ ಸರ್ವಾಧಿಕಾರಿ ಧೋರಣೆಯೇ ಪ್ರಮುಖ ಕಾರಣ. ನಮ್ಮ ಜಿಲ್ಲೆಯಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಯಾರಿಗೂ ಮಂತ್ರಿ ಸ್ಥಾನ ನೀಡಲು ಬಿಡಲಿಲ್ಲ ಎಂದು ರೇಣುಕಾಚಾರ್ಯ ಆರೋಪಿಸಿದರು.

ಬಿಜೆಪಿ ಕಚೇರಿಯಲ್ಲಿ ಕೆಲವರಿದ್ದಾರೆ. ಕರೆ ಮಾಡಿ ಜನ ಸೇರಿಸುವಂತೆ ಹೇಳುತ್ತಾರೆ. ಅವರಿಗೆ ಚುನಾವಣೆ ಗಂಧ ಗಾಳಿ ಗೊತ್ತಿಲ್ಲ. ಅಂತವರಿಂದ ಬಿಜೆಪಿಗೆ ಹಿನ್ನಡೆ ಆಗಿದೆ. ನಮ್ಮ ಧ್ವನಿ ಅಡಗಿಸಲು ಯತ್ನಿಸುತ್ತಿದ್ದಾರೆ. ಆದ್ರೆ ನಾನು ಬಿಜೆಪಿ ಬಿಡಲ್ಲ, ಕಾಂಗ್ರೆಸ್​ ಸೇರಲ್ಲ. ಯಾರೂ ನನ್ನನ್ನು ಕಾಂಗ್ರೆಸ್​ಗೆ ಬನ್ನಿ ಎಂದು ಕರೆದಿಲ್ಲ ಎಂದು ರೇಣುಕಾಚಾರ್ಯ ಸ್ಪಷ್ಟಪಡಿಸಿದರು.

ಇದನ್ನೂ ಓದಿ :ನಾವು ನುಡಿದಂತೆ ನಡೆದಿದ್ದೇವೆ, ನಮ್ಮದು ಜಿರೋ ಟಾಲರೆನ್ಸ್ ಸರ್ಕಾರ : ಸಲೀಂ ಅಹ್ಮದ್

ABOUT THE AUTHOR

...view details