ಕರ್ನಾಟಕ

karnataka

ETV Bharat / state

ದಾವಣಗೆರೆಯಲ್ಲಿ ಮಾಜಿ ಸಚಿವ ಯು.ಟಿ.ಖಾದರ್ ಕಾರು ಅಪಘಾತ

ಬೆಂಗಳೂರಿನಿಂದ ಬರುತ್ತಿದ್ದ ಯು.ಟಿ. ಖಾದರ್ ಕಾರು ಮುಂದೆ ಹೋಗುತ್ತಿದ್ದ ಕಂಟೈನರ್​ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಮಾಜಿ‌ ಸಚಿವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

By

Published : Apr 14, 2021, 12:00 PM IST

Updated : Apr 14, 2021, 12:38 PM IST

car accident
ಮಾಜಿ ಸಚಿವ ಯುಟಿ ಖಾದರ್ ಕಾರು ಅಪಘಾತ

ದಾವಣಗೆರೆ: ಮಾಜಿ ಸಚಿವ ಯು.ಟಿ. ಖಾದರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ.

ದಾವಣಗೆರೆಯಲ್ಲಿ ಮಾಜಿ ಸಚಿವ ಯು.ಟಿ.ಖಾದರ್ ಕಾರು ಅಪಘಾತ

ದಾವಣಗೆರೆ ತಾಲೂಕಿನ ಅನುಗೋಡು ಗ್ರಾಮದ ಬಳಿ ಘಟನೆ ಸಂಭವಿಸಿದೆ. ಬೆಂಗಳೂರಿನಿಂದ ಬರುತ್ತಿದ್ದ ಖಾದರ್‌ ಅವರ ಕಾರು ಮುಂದೆ ಹೋಗುತ್ತಿದ್ದ ಕಂಟೈನರ್​ಗೆ ಡಿಕ್ಕಿ ಹೊಡೆದಿದೆ.

ಯುಟಿ ಖಾದರ್ ಆರೋಗ್ಯ ವಿಚಾರಿಸಿದ ಎಸ್​ಪಿ ಹನುಮಂತರಾಯ

ಕಾರಿನ ಮುಂಭಾಗದ ಬಾನೆಟ್ ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಎಸ್​ಪಿ ಹನುಮಂತರಾಯ ಭೇಟಿ ಮಾಜಿ ಸಚಿವರ ಆರೋಗ್ಯ ವಿಚಾರಿಸಿದ್ದಾರೆ. ಕಾರು ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮಾಜಿ ಸಚಿವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತ ಸಂಭವಿಸಿದ್ದರಿಂದ ತಮ್ಮ ಕಾರು ಬಿಟ್ಟು ಬೇರೊಂದು ವಾಹನದ ಮೂಲಕ ಖಾದರ್ ಬೆಂಗಳೂರಿಗೆ ತೆರಳಿದರು.

ಇದನ್ನೂ ಓದಿ:ಹಿಂಸಾತ್ಮಕ ಗೇಮ್​ಗಳ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಳ್ಳಲಿ: ಖಾದರ್

Last Updated : Apr 14, 2021, 12:38 PM IST

ABOUT THE AUTHOR

...view details