ಕರ್ನಾಟಕ

karnataka

ETV Bharat / state

ಸಾವಿನಲ್ಲೂ ಸಾರ್ಥಕತೆ ಮೆರೆದ ದಾವಣಗೆರೆಯ ಅಪ್ಪು ಅಭಿಮಾನಿ.. ನೇತ್ರದಾನ ಮಾಡಿದ ಮಾರ್ಕೆಟ್​ ರವಿ - puneeth rajkumar fans eye donation

ಇಂದು ಹೃದಯಾಘಾತದಿಂದ ಸಾವನ್ನಪ್ಪಿದ ಪುನೀತ್​​ ರಾಜ್​ಕುಮಾರ್​​ ಅಭಿಮಾನಿ ರವಿ ಅವರ ನೇತ್ರದಾನ ಮಾಡಲಾಗಿದೆ.

eye donation by puneeth rajkumar fan
ಅಪ್ಪು ಅಭಿಮಾನಿಯಿಂದ ನೇತ್ರದಾನ

By

Published : Sep 21, 2022, 2:05 PM IST

Updated : Sep 21, 2022, 3:22 PM IST

ದಾವಣಗೆರೆ: ದಿ. ಪವರ್ ಸ್ಟಾರ್ ಪುನೀತ್ ರಾಜ್​​ಕುಮಾರ್ ಇಹಲೋಕ ತ್ಯಜಿಸಿದಾಗ ಅವರ ನೇತ್ರದಾನ ಮಾಡಲಾಗಿತ್ತು. ಇದು ಅಭಿಮಾನಿಗಳಿಗೆ ಸ್ಫೂರ್ತಿಯಾಗಿದ್ದು, ಆ ಸಂದರ್ಭ ಅವರ ಸಾವಿರಾರು ಅಭಿಮಾನಿಗಳು ಕೂಡ ನೇತ್ರದಾನ ಮಾಡಲು ನೋಂದಣಿ ಮಾಡಿಸಿದ್ದರು. ದಾವಣಗೆರೆಯ ನಿವಾಸಿಯಾಗಿದ್ದ ಅಪ್ಪು ಅವರ ಅಪ್ಪಟ ಅಭಿಮಾನಿ ಈಗ ಹೇಳಿದಂತೆ ನಡೆದುಕೊಂಡಿದ್ದಾರೆ. ಅಪ್ಪುವಿನಂತೆ ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ್ದ ರವಿ.. ದಾವಣಗೆರೆಯ ಎಸ್.ಎಂ ಕೃಷ್ಣ ನಗರದ ನಿವಾಸಿ ರವಿ ಅವರು ಮಾರ್ಕೆಟ್ ರವಿ ಎಂದೇ ಚಿರಪರಿಚಿತವಾಗಿದ್ದರು. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಅಪ್ಪಟ ಅಭಿಮಾನಿ ಕೂಡ ಹೌದು. ಅಪ್ಪು ಇಹಲೋಕ ತ್ಯಜಿಸಿದ ವೇಳೆ ರವಿ (31) ಅತ್ಮಹತ್ಯೆಗೆ ಯತ್ನಿಸಿದ್ದರು. ಅದ್ರೆ ಕೆಲ ಮುಖಂಡರು ಬುದ್ಧಿವಾದ ಹೇಳಿ ರಕ್ಷಿಸಿದ್ದರು. ಅದರೆ ರವಿ ಇದೀಗ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಅಪ್ಪು ಅಭಿಮಾನಿಯ ನೇತ್ರದಾನ

ಇಂದು ಹೃದಯಾಘಾತದಿಂದ ಸಾವನ್ನಪ್ಪಿದ ಮಾರ್ಕೆಟ್ ರವಿ ಈಗ ನಟ ಪುನೀತ್ ಅವರಂತೆ ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಈ ಹಿಂದೆಯೇ ರವಿ ಅವರು ಜಯದೇವ ಜಗದ್ಗುರು ಮುರುಘರಾಜೇಂದ್ರ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಕಣ್ಣು ದಾನ ಮಾಡುವುದಾಗಿ ಹೆಸರು ನೋಂದಾಯಿಸಿಕೊಂಡಿದ್ದರು. ಅದರಂತೆ ಇಂದು ಜಿಲ್ಲಾಸ್ಪತ್ರೆಯಲ್ಲಿ ಕುಟುಂಬಸ್ಥರ ಮುಂದೆ ಮೃತ ರವಿಯವರ ಕಣ್ಣುಗಳನ್ನು ಹಸ್ತಾಂತರ ಮಾಡಲಾಗಿದೆ.

ಇದನ್ನೂ ಓದಿ:ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ್​ ನಿಧನ...ಮೋದಿ ಸೇರಿ ಅನೇಕರ ಸಂತಾಪ

ತರಕಾರಿ ಮಾರಿ ಜೀವನ ನಿರ್ವಹಣೆ.. ತರಕಾರಿ ಮಾರಾಟ ಮಾಡಿ ರವಿ ಜೀವನ ಸಾಗಿಸುತ್ತಿದ್ದರು. ಕನ್ನಡ ರಾಜ್ಯೋತ್ಸವ ಹಾಗು ಅಪ್ಪು ಹುಟ್ಟುಹಬ್ಬದ ದಿನದಂದು ಜೂನಿಯರ್ ಪುನೀತ್ ರಾಜ್‍ಕುಮಾರ್ ಅವರನ್ನು ಕರೆಸಿ ಆಚರಣೆ ಮಾಡುತ್ತಿದ್ದರು.

Last Updated : Sep 21, 2022, 3:22 PM IST

ABOUT THE AUTHOR

...view details