ಕರ್ನಾಟಕ

karnataka

ಪ್ರತಿವರ್ಷ ಪರಿಸರ ದಿನಾಚರಣೆ ಸಮಯದಲ್ಲಿ 5 ದಿನ ಲಾಕ್​ಡೌನ್​ ಇರಲಿ: ಲೋಕೇಶ್​ ನಾಯ್ಕ್​

By

Published : Jun 4, 2020, 9:33 PM IST

ನಗರದ ಕುಮಾರಪಟ್ಟಣದ ಅಂಚೆ ಕಚೇರಿ ಆವರಣದಲ್ಲಿ ಚಿತ್ರ ಕಲಾವಿದ ಡಾ.ಜಿ.ಜೆ ಮೆಹೆಂದಳೆ ರಚಿಸಿದ ವರ್ಣ ಚಿತ್ರ ಬಿಡುಗಡೆ ಮಾಡಲಾಯಿತು.

Drawing release
Drawing release

ಹರಿಹರ:ವಿಶ್ವ ಪರಿಸರ ದಿನಾಚರಣೆ ನಿಮಿತ್ತ ನಗರದ ಕುಮಾರಪಟ್ಟಣದ ಅಂಚೆ ಕಚೇರಿ ಆವರಣದಲ್ಲಿ ಗುರುವಾರ ಚಿತ್ರ ಕಲಾವಿದ ಡಾ.ಜಿ.ಜೆ ಮೆಹೆಂದಳೆ ರಚಿಸಿದ ಚಿತ್ರವನ್ನು ಉಪ ಅಂಚೆ ಪಾಲಕ ಕೆ. ಲೋಕೇಶ್ ನಾಯ್ಕ್ ಬಿಡುಗಡೆ ಮಾಡಿದರು.

ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಲೋಕೇಶ್​ ನಾಯ್ಕ್​, ಪ್ರತಿ ವರ್ಷ ಪರಿಸರ ದಿನಾಚರಣೆ ಸಂದರ್ಭದಲ್ಲಿ ಐದು ದಿನಗಳ ಕಾಲ ವಿಶ್ವದಾದ್ಯಂತ ಲಾಕ್‌ಡೌನ್ ಆಚರಿಸಬೇಕು. ಹಾಗೂ ಆ ವೇಳೆ ಸಸಿ ನೆಡುವುದು, ನದಿ, ಕೆರೆ, ಹಳ್ಳ, ಕೊಳ್ಳಗಳ ಸ್ವಚ್ಛತೆಯ ಸಾಮೂಹಿಕ ಶ್ರಮದಾನ ನಡೆಸಬೇಕು ಇದರಿಂದ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಕಡಿಮೆಯಾಗುತ್ತವೆ ಎಂದು ತಿಳಿಸಿ, ನಿವೃತ್ತ ಚಿತ್ರಕಲಾವಿದ ಮೆಹೆಂದಳೆಯವರ ಪರಿಸರ ಕಾಳಜಿ ಬಗ್ಗೆ ಶ್ಲಾಘಿಸಿದರು.

ಇದೇ ವೇಳೆ ಡಾ.ಜಿ.ಜೆ.ಮೆಹೆಂದಳೆ ಮಾತನಾಡಿ, ಭೂಮಿ ತಾಪಮಾನ ಹೆಚ್ಚಾಗುತ್ತಿದ್ದು ಹಿಮಾಲಯ ಹಾಗೂ ಧೃವ ಪ್ರದೇಶದಲ್ಲಿ ಹಿಮ ಗಡ್ಡೆಗಳು ಕರಗುತ್ತಿವೆ. ಸಮುದ್ರ ಮಟ್ಟ ಏರುತ್ತಾ ಭೂ ಪ್ರದೇಶ ಕ್ಷೀಣಿಸುತ್ತಿದೆ. ಈಗಲೂ ನಾವು ಎಚ್ಚೆತ್ತು ಪರಿಸರ ಕಾಳಜಿ ಹೊಂದದಿದ್ದರೆ ಮಾನವ ಕುಲ ದೊಡ್ಡ ಆಘಾತ ಎದುರಿಸಬೇಕಾಗುತ್ತದೆ ಎಂದರು.

ಡಾ. ಜ್ಯೋತಿ ಮಹಾಂತೇಶ್ ಮಾತನಾಡಿ, ಹಿಂದಿಯ ಪ್ರಸಿದ್ಧ ಗಾದೆ ಮಾತು ಜೈಸಿ ಕರಣಿ ವೈಸಿ ಭರಣಿ ಎಂಬಂತೆ ಪರಿಸರವನ್ನು ನಾವು ಹೇಗೆ ರಕ್ಷಿಸುತ್ತೇವೆಯೋ ಹಾಗೆಯೆ ಪರಿಸರ ನಮ್ಮನ್ನು ರಕ್ಷಿಸುತ್ತದೆ, ತಪ್ಪಿದರೆ ಅದು ನಮ್ಮನ್ನು ಭಕ್ಷಿಸುತ್ತದೆ ಎಂದರು.

ಡಾ.ಮಹಾಂತೇಶ್ ಗುಡ್ಡಪ್ಪ ಹುಚ್ಚಣ್ಣನವರ್ ಮಾತನಾಡಿ, ಭೂಮಿಯ ತಾಪಮಾನ ಇಳಿಸಲು ಹಾಗೂ ಮನುಷ್ಯ ಇಂದು ಎದುರಿಸುತ್ತಿರುವ ಹತ್ತಾರು ಸಮಸ್ಯೆಗಳಿಗೆ ಪರಿಹಾರ ನಮ್ಮಲ್ಲೆ ಇದೆ. ನಮ್ಮ ಮನೆ, ಶಾಲೆ, ಅಂಗಡಿ, ಓಣಿ, ನಗರ, ಪಟ್ಟಣ, ಗ್ರಾಮಗಳಲ್ಲಿ ಹೆಚ್ಚೆಚ್ಚು ಗಿಡ, ಮರಗಳನ್ನು ಬೆಳೆಸಿ ರಕ್ಷಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀನಿವಾಸ ಸಿ.ಎಲ್., ಬಿ.ಎಸ್.ಕಬ್ಬೂರ್, ಸ್ವಪ್ನಾ ಅಂಬಲಿ, ಎಂ.ಎಸ್. ಮರಡೇರ್, ಜಿ.ಆರ್. ಬಸಪ್ಪನವರ, ಜಿ.ಎಲ್. ಜೋಗೇರ್ ಇತರರಿದ್ದರು.

ABOUT THE AUTHOR

...view details