ಕರ್ನಾಟಕ

karnataka

ETV Bharat / state

ಸ್ತ್ರೀ - ಪುರುಷರಿಬ್ಬರೂ ಜೊತೆಯಾಗಿ ಕೊಡುಗೆ ನೀಡಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ; ರಮಾದೇವಿ - ಹರಿಹರ ತಾಲೂಕು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಪ್ರಾರಂಭೋತ್ಸವ

ಸ್ತ್ರೀ ಪುರುಷರಿಬ್ಬರೂ ಜೊತೆಯಾಗಿ ಕೊಡುಗೆ ನೀಡಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ, ನೂರಾರು ವರ್ಷಗಳಿಂದ ದೇಶದ ಅಭಿವೃದ್ಧಿಗಾಗಿ ಪುರುಷರಿಗೆ ಸರಿಸಮಾನವಾಗಿ ಮಹಿಳೆಯರು ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಮಹಿಳಾ ಸಂಘದ ಗೌರವ ಅಧ್ಯಕ್ಷೆ ರಮಾದೇವಿ ಹೇಳಿದರು.

Inauguration of Harihara Taluk Savitribai Phule Teachers Association
ಹರಿಹರ ತಾಲೂಕು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಪ್ರಾರಂಭೋತ್ಸವ

By

Published : Jan 21, 2020, 8:31 PM IST

ದಾವಣಗೆರೆ: ಸ್ತ್ರೀ ಪುರುಷರಿಬ್ಬರೂ ಜೊತೆಯಾಗಿ ಕೊಡುಗೆ ನೀಡಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ, ನೂರಾರು ವರ್ಷಗಳಿಂದ ದೇಶದ ಅಭಿವೃದ್ಧಿಗಾಗಿ ಪುರುಷರಿಗೆ ಸರಿಸಮಾನವಾಗಿ ಮಹಿಳೆಯರು ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಮಹಿಳಾ ಸಂಘದ ಗೌರವ ಅಧ್ಯಕ್ಷೆ ರಮಾದೇವಿ ಹೇಳಿದರು.

ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ ನಡೆದ ಹರಿಹರ ತಾಲೂಕು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಪ್ರಾರಂಭೋತ್ಸವ ಸಂದರ್ಭದಲ್ಲಿ ಸಾವಿತ್ರಿಬಾಯಿ ಫುಲೆಯವರ 186 ನೇ ಜನ್ಮ ದಿನವನ್ನ ಹಾಗೂ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಂದು ನಾಣ್ಯದ ಎರಡು ಮುಖಗಳಂತಿರುವ ಸ್ತ್ರೀ ಪುರುಷರಿಬ್ಬರೂ ಕೊಡುಗೆ ನೀಡಬೇಕು. ಅನೇಕ ವರ್ಷಗಳಿಂದ ಸ್ತ್ರೀ ಸಮಾನತೆಗಾಗಿ ಹೋರಾಟಗಳು ನಡೆಯುತ್ತಿದ್ದು, ಸ್ತ್ರೀ ಸಮಾನತೆ ಮಹಿಳೆಗೆ ದೊರೆತಾಗ ಮಾತ್ರ ದೇಶದ ಅಭಿವೃದ್ಧಿಯಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಘದ ರಾಜ್ಯ ಅಧ್ಯಕ್ಷೆ ಡಾ. ಲತಾ ಮುಳ್ಳೂರು ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಜವಾಬ್ದಾರಿ ಶಿಕ್ಷಕ- ಶಿಕ್ಷಕಿಯರ ಮೇಲಿದ್ದು, ಮುಖ್ಯವಾಗಿ ಶಿಕ್ಷಕಿಯರು ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು ಎಂದು ಕರೆ ಕೊಟ್ಟರು.

ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ ಮಾತನಾಡಿ, ಇಂದು ರಚನೆಯಾದ ಸಂಘವನ್ನು ಉಳಿಸಿಕೊಂಡು ಹೋಗಲು ಪದಾಧಿಕಾರಿಗಳು ಹಾಗೂ ಸದಸ್ಯರುಗಳ ತಾಳ್ಮೆ, ತ್ಯಾಗ ಹಾಗೂ ಸೇವಾ ಮನೋಭಾವವು ಬಹಳ ಮುಖ್ಯವಾಗಿದೆ ಎಂದರು.

For All Latest Updates

TAGGED:

Ramadevi

ABOUT THE AUTHOR

...view details