ಕರ್ನಾಟಕ

karnataka

ETV Bharat / state

ಡಿಸಿಎಂ ಹುದ್ದೆ ವಿಚಾರದಲ್ಲಿ ಪಕ್ಷಕ್ಕೆ ಮುಜುಗರವಾಗದಂತೆ ನಡೆದುಕೊಳ್ಳುವೆ: ಶ್ರೀರಾಮುಲು - ಡಿಸಿಎಂ ಹುದ್ದೆ ವಿಚಾರ ದಾವಣಗೆರೆಯಲ್ಲಿ ಸಚಿವ ಶ್ರೀರಾಮುಲು ಪ್ರತಿಕ್ರಿಯೆ

ನಾನು ಡಿಸಿಎಂ ಆಗಬೇಕು ಎಂಬುದು ಜನರ ಅಭಿಪ್ರಾಯ. ಅವರಿಗೆ ಉತ್ತರಿಸಲು ನನಗೆ ಆಗುತ್ತಿಲ್ಲ. ಆದ್ರೆ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದಿಲ್ಲ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

DCM Post Issue Minister Shriramulu Reaction
ಬಿ. ಶ್ರೀರಾಮುಲು, ಆರೋಗ್ಯ ಸಚಿವ

By

Published : Jan 2, 2020, 2:07 PM IST

Updated : Jan 2, 2020, 11:32 PM IST

ದಾವಣಗೆರೆ: ಡಿಸಿಎಂ ಹುದ್ದೆ ವಿಚಾರದಲ್ಲಿ ಪಕ್ಷಕ್ಕೆ ಮುಜುಗರವಾಗುವಂತೆ ನಡೆದುಕೊಳ್ಳುವೆ,‌ ಪಕ್ಷದ ನಿರ್ಧಾರಕ್ಕೆ ಬದ್ಧನಾಗಿದ್ದೇನೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.

ಬಿ. ಶ್ರೀರಾಮುಲು, ಆರೋಗ್ಯ ಸಚಿವ

ಹರಿಹರ ತಾಲೂಕು ರಾಜನಹಳ್ಳಿಯ ಗುರುಪೀಠದಲ್ಲಿ ನಡೆಯಲಿರುವ ವಾಲ್ಮೀಕಿ ಜಾತ್ರೆ ಪೂರ್ವಭಾವಿ ಸಭೆಗೆ ತೆರಳುವ ಮುನ್ನ ಮಾತನಾಡಿ, ನಾನು ಡಿಸಿಎಂ ಆಗಬೇಕು ಎಂಬುದು ಜನರ ಅಭಿಪ್ರಾಯ, ಅವರಿಗೆ ಉತ್ತರಿಸಲು ನನಗೆ ಆಗುತ್ತಿಲ್ಲ. ಆದ್ರೆ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದಿಲ್ಲ ಎಂದರು.

ವಾಲ್ಮೀಕಿ ಜಾತ್ರೆಗೂ ಮುನ್ನ ವಾಲ್ಮೀಕಿ ಜನಾಂಗದ ಮೀಸಲಾತಿ ಘೋಷಣೆ ಆಗಬೇಕಿತ್ತು.‌ ವರದಿ ಬರುವುದು ತಡವಾದ ಹಿನ್ನೆಲೆ ಶೇ. 7.5 ಮೀಸಲಾತಿ ಘೋಷಣೆ ವಿಳಂಬವಾಗಿದೆ.‌ ಆದಷ್ಟು ಬೇಗ ಈ ಬಗ್ಗೆ ವರದಿ ನೀಡುವಂತೆ ನಿವೃತ್ತ ನಾಯಾಧೀಶರಲ್ಲಿ ಮನವಿ ಮಾಡುತ್ತೇನೆ. ಸರ್ಕಾರದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಹೇಳಿದರು.

Last Updated : Jan 2, 2020, 11:32 PM IST

For All Latest Updates

TAGGED:

ABOUT THE AUTHOR

...view details