ದಾವಣಗೆರೆ: ಗೂಡ್ಸ್ ರೈಲು ಜೆಸಿಬಿಗೆ ಡಿಕ್ಕಿ ಹೊಡೆದಿದ್ದು ಜೆಸಿಬಿ ಚಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಗರದ ಡಿಸಿಎಂ ರೈಲ್ವೆ ಹಳಿ ಬಳಿ ನಡೆದಿದೆ.
ಗೂಡ್ಸ್ ರೈಲು, ಜೆಸಿಬಿ ನಡುವೆ ಅಪಘಾತ, ಚಾಲಕ ಪ್ರಾಣಾಪಾಯದಿಂದ ಪಾರು - ದಾವಣಗೆರೆ ಗೂಡ್ಸ್ ರೈಲು ಅಪಘಾತ
ಗೂಡ್ಸ್ ರೈಲು ಜೆಸಿಬಿಗೆ ಡಿಕ್ಕಿ ಹೊಡೆದಿದ್ದು ಜೆಸಿಬಿ ಚಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
![ಗೂಡ್ಸ್ ರೈಲು, ಜೆಸಿಬಿ ನಡುವೆ ಅಪಘಾತ, ಚಾಲಕ ಪ್ರಾಣಾಪಾಯದಿಂದ ಪಾರು](https://etvbharatimages.akamaized.net/etvbharat/prod-images/768-512-4994007-thumbnail-3x2-lek.jpg)
ಗೂಡ್ಸ್ ರೈಲು ಹಾಗೂ ಜೆಸಿಬಿ ನಡುವೆ ಡಿಕ್ಕಿ
ಗೂಡ್ಸ್ ರೈಲು ಹಾಗೂ ಜೆಸಿಬಿ ನಡುವೆ ಡಿಕ್ಕಿ
ದಾವಣಗೆರೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಗೂಡ್ಸ್ ರೈಲು ಇದಾಗಿದ್ದು, ರೈಲ್ವೆ ಹಳಿ ಕಾಮಗಾರಿ ನಡೆಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ರೈಲ್ವೆ ಪೊಲೀಸರು ಘಟನೆ ಕುರಿತು ಪರಿಶೀಲನೆ ನಡೆಸಿದ್ದಾರೆ.
ಇನ್ನು ರೈಲಿನ ಇಂಜಿನ್ ಹಾಗೂ ಜೆಸಿಬಿಯನ್ನು ತೆರವುಗೊಳಿಸಲು ರೈಲ್ವೆ ಇಲಾಖೆ ಸಿಬ್ಬಂದಿ ಕೆಲಕಾಲ ಹರಸಾಹಸ ಪಡಬೇಕಾಯಿತು. ಅಪಘಾತವಾದ ಹಿನ್ನೆಲೆ ಬೆಂಗಳೂರಿನಿಂದ ಧಾರವಾಡಕ್ಕೆ ಹೋಗುವ ಇಂಟರ್ ಸಿಟಿ ರೈಲನ್ನು ಮಾಯಕೊಂಡ ರೈಲ್ವೆ ನಿಲ್ದಾಣದ ಬಳಿಯೇ ನಿಲುಗಡೆ ಮಾಡಲಾಗಿದ್ದು, ಪ್ರಯಾಣಿಕರು ಸುಸ್ತಾಗಿದ್ದಾರೆ.