ಕರ್ನಾಟಕ

karnataka

ಆಮ್​ ಆದ್ಮಿ ಪಕ್ಷ ನುಡಿದಂತೆ ನಡೆದು ಅಧಿಕಾರದ ಚುಕ್ಕಾಣಿ ಹಿಡಿದಿದೆ: ರಾಘವೇಂದ್ರ

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿಯು ಪ್ರಚಂಡ ಬಹುಮತದಿಂದ ಆಯ್ಕೆಯಾಗಿ ಸತತ ಮೂರನೇ ಭಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವುದಕ್ಕೆ ದಾವಣಗೆರೆ ಜಿಲ್ಲಾ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ರಾಘವೇಂದ್ರ ಸಂತಸ ವ್ಯಕ್ತಪಡಿಸಿದ್ದಾರೆ.

By

Published : Feb 12, 2020, 5:20 PM IST

Published : Feb 12, 2020, 5:20 PM IST

Davangere District Aap President Raghavendra  reaction about Delhi election
ದಾವಣಗೆರೆ ಜಿಲ್ಲಾ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ರಾಘವೇಂದ್ರ

ದಾವಣಗೆರೆ:ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿಯು ಪ್ರಚಂಡ ಬಹುಮತದಿಂದ ಆಯ್ಕೆಯಾಗಿ ಸತತ ಮೂರನೇ ಭಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವುದಕ್ಕೆ ದಾವಣಗೆರೆ ಜಿಲ್ಲಾ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ರಾಘವೇಂದ್ರ ಸಂತಸ ವ್ಯಕ್ತಪಡಿಸಿದ್ದಾರೆ.

ಆಮ್​ ಆದ್ಮಿ ಪಕ್ಷ ನುಡಿದಂತೆ ನಡೆದು ಅಧಿಕಾರದ ಚುಕ್ಕಾಣಿ ಹಿಡಿದಿದೆ: ರಾಘವೇಂದ್ರ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರವಿಂದ್ ಕೇಜ್ರಿವಾಲ್ ಅವರ ಪ್ರಾಮಾಣಿಕತೆಯ,ಜನಪರ ಕೆಲಸವನ್ನು ನೋಡಿ ದೆಹಲಿಯ ಮತದಾರ ಅವರನ್ನ ಮತ್ತೆ ಆರಿಸಿ ಜನಸೇವೆ ಮಾಡಲೆಂದು ಅವಕಾಶ ಕೊಟ್ಟಿದ್ದಾರೆ. ಇದು ಆಮ್ ಆದ್ಮಿ ಪಾರ್ಟಿಯ ಗೆಲುವುವಲ್ಲ,ಇದು ದೆಹಲಿ‌ ಮತದಾರರ ಗೆಲುವು. ಆಮ್​ ಆದ್ಮಿ ಪಕ್ಷ ನುಡಿದಂತೆ ನಡೆದು ಕಾಯಾ,ವಾಚ,ಮನಸಾ ದೆಹಲಿ ಜನತೆ ಹಿತದೃಷ್ಠಿಗಾಗಿ ಹಗಲಿರುಳಿ ಶ್ರಮಪಟ್ಟು ಕೆಲಸ ನಿರ್ವಹಿಸಿದೆ.

ಕೇಜ್ರಿವಾಲ್ ಇಡೀ ದೇಶದಲ್ಲಿಯೇ ದೆಹಲಿ ರಾಜ್ಯವನ್ನು ಶಿಕ್ಷಣದಲ್ಲಿ ಆರೋಗ್ಯದಲ್ಲಿ ಹಾಗೂ ಮೂಲಭೂತ ಸೌಕರ್ಯಗಳನ್ನ ಕಲ್ಪಿಸಿ ಮಾದರಿಯಾಗಿದ್ದಾರೆ ಎಂದರು.

ABOUT THE AUTHOR

...view details