ಕರ್ನಾಟಕ

karnataka

ETV Bharat / state

ರೈತರಿಂದ ಮೆಕ್ಕೆಜೋಳ ಖರೀದಿಸಿ ಹಣ ನೀಡದೆ ವಂಚನೆ: ದಾವಣಗೆರೆಯಲ್ಲಿ ಆರೋಪಿಗಳ ಬಂಧನ

ರೈತರಿಂದ ಬೆಳೆ ಖರೀದಿಸಿ ಬಳಿಕ ಅವರಿಗೆ ಹಣ ನೀಡದೆ ವಂಚಿಸುತ್ತಿದ್ದ ಗ್ಯಾಂಗ್ ಅನ್ನು ದಾವಣಗೆರೆ ಪೊಲೀಸರು ಪತ್ತೆ ಮಾಡಿ ಜೈಲಿಗಟ್ಟಿದ್ದಾರೆ.

By

Published : Oct 27, 2021, 12:56 PM IST

Updated : Oct 27, 2021, 7:49 PM IST

Davanagere police arrested 6 people for cheating farmers
ರೈತರಿಂದ ಮೆಕ್ಕೆಜೋಳ ಖರೀದಿಸಿ ಹಣ ನೀಡದೆ ವಂಚನೆ:

ದಾವಣಗೆರೆ: ಮೆಕ್ಕೆಜೋಳ ಖರೀದಿಸಿ ರೈತ ಹಾಗೂ ವರ್ತಕರಿಗೆ ಹಣ ನೀಡದೆ ಮೋಸ ಮಾಡುತ್ತಿದ್ದ ಬ್ಯಾಂಕ್ ಉದ್ಯೋಗಿ ಸೇರಿ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಹಾಗೂ ವಿಜಯನಗರ ಭಾಗದ ರೈತರ ಬಳಿ ಮೆಕ್ಕೆಜೋಳ ಖರೀದಿಸಿದ ಆರೋಪಿಗಳು ಹಣ ನೀಡದೆ ವಂಚಿಸಿದ್ದರು.

ರೈತರಿಂದ ಮೆಕ್ಕೆಜೋಳ ಖರೀದಿಸಿ ಹಣ ನೀಡದೆ ವಂಚನೆ

ಶಿವಲಿಂಗಯ್ಯ, ಚೇತನ, ಮಹೇಶ್ವರಯ್ಯ, ವಾಗೀಶ್, ಚಂದ್ರು ಹಾಗೂ ಕೆನರಾ ಬ್ಯಾಂಕ್ ಸಿಬ್ಬಂದಿ ಶಿವಕುಮಾರ್ ಬಂಧಿತರು. ಇವರಿಂದ 2.68 ಕೋಟಿ ರೂಪಾಯಿ ವಶಕ್ಕೆ ಪಡೆಯಲಾಗಿದೆ ಎಂದು ದಾವಣಗೆರೆ ಎಸ್​ಪಿ ಸಿಬಿ ರಿಷ್ಯಂತ್ ಮಾಹಿತಿ ನೀಡಿದ್ದಾರೆ.

ಡಿಎಸ್​ಪಿ ಬಿ. ಬಸವರಾಜ್ ನೇತೃತ್ವದ 15 ಜನರ ತಂಡ ಕಾರ್ಯಾಚರಣೆ ನಡೆಸಿ, ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ:ಕತ್ತಲಲ್ಲಿ ಹುಬ್ಬಳ್ಳಿ ಭೂಮಾಪನ ಕಚೇರಿ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಬೇಸರ

Last Updated : Oct 27, 2021, 7:49 PM IST

For All Latest Updates

ABOUT THE AUTHOR

...view details