ದಾವಣಗೆರೆ: ಇದೇ ತಿಂಗಳ 15 ಹಾಗೂ 16ರಂದು ದುರ್ಗಾಂಬಿಕಾ ದೇವಿಯ ಜಾತ್ರೆ ನಡೆಯಲಿದೆ. ದೇವಾಲಯದ ಸುತ್ತ 500 ಮೀಟರ್ ವ್ಯಾಪ್ತಿಯಲ್ಲಿ ಪ್ರಾಣಿ ಬಲಿ ನಿಷೇಧಿಸಲಾಗಿದೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಭಕ್ತರಿಗೆ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಈಗಾಗಲೇ ದೇವಾಲಯದ ಕಮಿಟಿಯವರನ್ನು ಕರೆಸಿ ಸಭೆ ಮಾಡಿ ಪ್ರಾಣಿ ಬಲಿ ಕೊಡುವಂತಿಲ್ಲ ಎಂದು ಸೂಚಿಸಲಾಗಿದೆ. ಇದು ಕಾನೂನು ಬಾಹಿರ ಎಂದು ತಿಳಿಸಲಾಗಿದ್ದು, ಇದರ ಬಗ್ಗೆ ಕಟ್ಟುನಿಟ್ಟಾಗಿ ನಿಗಾ ವಹಿಸಲು ಅಧಿಕಾರಿಗಳ ತಂಡ ರಚಿಸಲಾಗಿದೆ. ಇನ್ನು ಕೋಣ ಬಲಿ ಕೊಡುವ ಬದಲು ಅದರ ರಕ್ತವನ್ನು ಸಿರಿಂಜ್ ಮೂಲಕ ತೆಗೆದುಕೊಂಡು ದೇವಿಗೆ ಪೂಜೆ ಮಾಡಬಹುದು ಎಂದರು.
ಬೇವಿನ ಉಡುಗೆ, ಅರೆ ಬೆತ್ತಲೆ ಪೂಜೆ, ಉರುಳು ಸೇವೆ, ದೀಡ್ ನಮಸ್ಕಾರ ಇಂತಹ ಮೂಢನಂಬಿಕೆಗಳನ್ನು ಜಾತ್ರೆಯಲ್ಲಿ ಮಾಡಬಹುದು. ಆದ್ರೆ ಮಾನವನ ವ್ಯಕ್ತಿತ್ವದ ಘನತೆಗೆ ಕುಂದು ತರುವಂತಹ ರೀತಿಯಲ್ಲಿ ಆಚರಣೆ ಮಾಡುವಂತಿಲ್ಲ.
ಜಿಲ್ಲಾಡಳಿತದ ಸೂಚನೆ ಮೇರೆಗೆ ಮೂಢನಂಬಿಕೆಗಳ ಆಚರಣೆ ಮಾಡಿದ್ರೆ, ನಿಗಾ ವಹಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಇದನ್ನು ಭಕ್ತರು ಜನಸಾಮಾನ್ಯರು ಪಾಲಿಸುತ್ತಾರೆ ಎಂಬ ನಂಬಿಕೆ ನಮಗಿದೆ ಎಂದು ಜಿಲ್ಲಾಧಿಕಾರಿ ಭರವಸೆ ವ್ಯಕ್ತಪಡಿಸಿದರು.