ಕರ್ನಾಟಕ

karnataka

By

Published : Dec 7, 2020, 4:40 PM IST

ETV Bharat / state

ದಾವಣಗೆರೆ ಸ್ಮಾರ್ಟ್ ಆದರೂ ಅಶೋಕ ರೈಲ್ವೆ ಗೇಟ್​​ಗಿಲ್ಲ ಅದರ ಭಾಗ್ಯ..

ಹಳೇ ದಾವಣಗೆರೆಯಿಂದ ಹೊಸ ದಾವಣಗೆರೆಗೆ ಬರಬೇಕೆಂದರೆ ಅಶೋಕ ರೈಲ್ವೆ ಗೇಟ್ ನಿಂದ ಹಾದು ಹೋಗಬೇಕಾಗಿದೆ. ಹಳೇ ದಾವಣಗೆರೆ ಪ್ರದೇಶ ತೀವ್ರ ಹಿಂದುಳಿದ ಪ್ರದೇಶವಾಗಿದೆ. ಇಲ್ಲಿ ಕೂಲಿ ಆಧಾರಿತ ಕುಟುಂಬಗಳೇ ಹೆಚ್ಚಿದ್ದು, ಅವರೆಲ್ಲ ಆಸ್ಪತ್ರೆಗೆ, ಶಾಲೆಗೆ, ಕೂಲಿ ಕೆಲಸಕ್ಕೆ ಆ್ಯಂಬುಲೆನ್ಸ್ ಸಂಚಾರಕ್ಕೆ ತ್ವರಿತಗತಿಯಲ್ಲಿ ಸಾಗಬೇಕೆಂದರೆ ಈ ರೈಲ್ವೆ ಗೇಟ್ ಕಿರಿಕಿರಿ ಎನ್ನಿಸುತ್ತದೆ.

davanagere-ashoka-railway-bridge-news
ಅಶೋಕ ರೈಲ್ವೆ ಗೇಟ್​​

ದಾವಣಗೆರೆ:ಬೆಣ್ಣೆ ನಗರಿ ದಾವಣಗೆರೆ ಜಿಲ್ಲೆ ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆಗೆ ಸೇರಿದ್ದು, ನಗರದಲ್ಲಿ ಸಾಕಷ್ಟು ಕಾಮಗಾರಿಗಳು ನಡೆಯುತ್ತಿವೆ. ಆದರೆ ಹೃದಯ ಭಾಗದಲ್ಲಿರುವ ಅಶೋಕ ರೈಲ್ವೆ ಗೇಟ್​​ಗೆ ಮಾತ್ರ ಸ್ಮಾರ್ಟ್ ಆಗುವ ಸೌಭಾಗ್ಯ ದೊರೆತಿಲ್ಲ.

​ಸ್ಮಾರ್ಟ್​ ಆಗದ ರೈಲ್ವೆ ಗೇಟ್​: ಜನರ ಬೇಸರ

ನಗರದ ಕೇಂದ್ರ ಬಿಂದು ಗಾಂಧಿ ವೃತ್ತದ, ಅಶೋಕ್ ರಸ್ತೆಯ ರೈಲ್ವೆ ಗೇಟ್ ಅಭಿವೃದ್ಧಿಯಾಗದೆ ಇರುವುದು ಜಿಲ್ಲೆ ಜನತೆಯ ದೌರ್ಭಾಗ್ಯವಾಗಿದೆ. ಈ ರೈಲ್ವೆ ಗೇಟ್ ತೆಗೆದು ಮೇಲ್ಸೇತುವೆ ನಿರ್ಮಾಣ ಮಾಡಬೇಕೆಂಬ ಇಲ್ಲಿನ ಜನರ ನಾಲ್ಕು ದಶಕದ ಕನಸು ಕನಸಾಗಿಯೇ ಉಳಿದಿದೆ. ಹಳೇ ದಾವಣಗೆರೆ ಹಾಗೂ ಹೊಸ ದಾವಣಗೆರೆಗೆ ಸಂಪರ್ಕದ ಕೊಂಡಿಯಾಗಿ ಕಾರ್ಯನಿರ್ವಹಿಸುವ ಈ ರೈಲ್ವೆ ಗೇಟ್​​ನಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತವೆ.

ಅಶೋಕ ರೈಲ್ವೆ ಗೇಟ್​​

ಸ್ಮಾರ್ಟ್ ಸಿಟಿ ಆದಾಗಿನಿಂದ ವಾಹನಗಳ ದಟ್ಟಣೆ ಹೆಚ್ಚಾಗಿ, ಗಂಟೆಗಟ್ಟಲೇ ಈ ರೈಲ್ವೆ ಗೇಟ್ ಬಳಿ ಟ್ರಾಫಿಕ್‌ ಜಾಮ್ ಉಂಟಾಗುತ್ತದೆ. ಆದ್ದರಿಂದ ಗಾಂಧಿ ವೃತ್ತದಿಂದ ಅಶೋಕ ಚಿತ್ರಮಂದಿರದ ತನಕ ಒಂದು ಮೇಲ್ಸೇತುವೆ ನಿರ್ಮಿಸಬೇಕೆಂಬ ಬೇಡಿಕೆ ಇಂದಿಗೂ ಈಡೇರಿಲ್ಲ. ಇಲ್ಲಿ ಮೇಲ್ಸೇತುವೆ ನಿರ್ಮಿಸಲು ಮಹಾನಗರ ಪಾಲಿಕೆಗೆ 3 ಕೋಟಿ ರೂ. ಅನುದಾನ ಬಂದಿದ್ದು ಉಪಯೋಗವಾಗಿಲ್ಲ. ಮೇಲ್ಸೇತುವೆ ನಿರ್ಮಿಸಿದರೆ ಅಲ್ಲಿರುವ ಸಾಕಷ್ಟು ಅಂಗಡಿ ಮಾಲೀಕರು ತಮ್ಮ ಆಸ್ತಿ ನೀಡಲು ಮುಂದಾಗಿದ್ದು, ಒಬ್ಬಿಬ್ಬರು ಮಾತ್ರ ಹಿಂದೇಟು ಹಾಕುತ್ತಿದ್ದಾರೆ. ಅವರಿಗೆ ಸರ್ಕಾರದಿಂದ ಪರಿಹಾರ ನೀಡಿ ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭಿಸುತ್ತೇವೆ ಎನ್ನುತ್ತಾರೆ ಸಂಸದ ಜಿ.ಎಂ. ಸಿದ್ದೇಶ್ವರ್.

ಅಶೋಕ ರೈಲ್ವೆ ಗೇಟ್​​

ರೈಲ್ವೆ ಗೇಟ್​​ನಿಂದ ಆಗುವ ಸಮಸ್ಯೆ ಏನು?

ಹಳೇ ದಾವಣಗೆರೆಯಿಂದ ಹೊಸ ದಾವಣಗೆರೆಗೆ ಬರಬೇಕೆಂದರೆ ಇದೇ ರೈಲ್ವೆ ಗೇಟ್ ನಿಂದ ಹಾದು ಹೋಗಬೇಕಾಗಿದೆ. ಹಳೇ ದಾವಣಗೆರೆ ಪ್ರದೇಶ ತೀವ್ರ ಹಿಂದುಳಿದ ಪ್ರದೇಶವಾಗಿದೆ. ಇಲ್ಲಿ ಕೂಲಿ ಆಧಾರಿತ ಕುಟುಂಬಗಳೇ ಹೆಚ್ಚಿದ್ದು, ಅವರೆಲ್ಲ ಆಸ್ಪತ್ರೆಗೆ, ಶಾಲೆಗೆ, ಕೂಲಿ ಕೆಲಸಕ್ಕೆ ಆ್ಯಂಬುಲೆನ್ಸ್ ಸಂಚಾರಕ್ಕೆ ತ್ವರಿತಗತಿಯಲ್ಲಿ ಸಾಗಬೇಕೆಂದರೆ ಈ ರೈಲ್ವೆ ಗೇಟ್ ಕಿರಿಕಿರಿ ಎನ್ನಿಸುತ್ತದೆ.

ಸೇತುವೆ ನಿರ್ಮಾಣ ಮಾಡಿದರೆ ಆಗುವ ಸಮಸ್ಯೆ ಏನು?

ಗಾಂಧಿ ಸರ್ಕಲ್ ನಿಂದ ಅಶೋಕ್​ ಟಾಕೀಸ್ ಮತ್ತು ಸ್ವಲ್ಪ ಭಾಗ ಕೆನರಾ ಬ್ಯಾಂಕ್​ವರೆಗೆ ಸೇತುವೆ ನಿರ್ಮಾಣ ಆಗಲಿದೆ. ಆದರೆ ಆಸ್ತಿಗಳನ್ನು ಬಿಟ್ಟು ಕೊಡಲು ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ. ಮೇಲಾಗಿ ಈ ಸೇತುವೆ ನಿರ್ಮಾಣವಾದರೆ 21 ಕಟ್ಟಡಗಳು ಧ್ವಂಸ ಆಗಲಿವೆ. ಹೀಗೆ ಮಾಡುವುದರಿಂದ ಪ್ರತಿಷ್ಠಿತರ ಕೋಟ್ಯಂತರ ರೂಪಾಯಿ ಆಸ್ತಿ ಕೈ ತಪ್ಪಿ ಹೋಗುತ್ತದೆ ಎಂಬುದು ವಾಸ್ತವ.

ಇದನ್ನೂ ಓದಿ: ಸ್ಮಾರ್ಟ್ ಸಿಟಿ ಯೋಜನೆ: ಕೇಂದ್ರ-ರಾಜ್ಯ ಸರ್ಕಾರದಿಂದ ದಾವಣಗೆರೆಗೆ 400 ಕೋಟಿ ರೂ. ಬಿಡುಗಡೆ

ABOUT THE AUTHOR

...view details