ಕರ್ನಾಟಕ

karnataka

By

Published : Aug 7, 2020, 11:04 PM IST

ETV Bharat / state

ದಾವಣಗೆರೆ: ಮಹಾಮಾರಿಯ ವಿರುದ್ಧ ಹೋರಾಡಿ 2048 ಮಂದಿ ಸಂಪೂರ್ಣ ಗುಣಮುಖ

ದಾವಣಗೆರೆಯಲ್ಲಿ 74, ಹರಿಹರದಲ್ಲಿ 6, ಜಗಳೂರಿನಲ್ಲಿ 1, ಚನ್ನಗಿರಿ 3, ಹೊನ್ನಾಳಿ 25, ಹಾಗೂ ಅಂತರ್ ಜಿಲ್ಲೆಯಿಂದ ಬಂದಿದ್ದ ಒಬ್ಬರಲ್ಲಿ ಇಂದು ಕೋವಿಡ್ ದೃಢಪಟ್ಟಿದೆ.

ದಾವಣಗೆರೆ: ಮಹಾಮಾರಿಯ ವಿರುದ್ಧ ಹೋರಾಡಿ 2048 ಮಂದಿ ಸಂಪೂರ್ಣ ಗುಣಮುಖ
ದಾವಣಗೆರೆ: ಮಹಾಮಾರಿಯ ವಿರುದ್ಧ ಹೋರಾಡಿ 2048 ಮಂದಿ ಸಂಪೂರ್ಣ ಗುಣಮುಖ

ದಾವಣಗೆರೆ: ಜಿಲ್ಲೆಯಲ್ಲಿ ಇಂದು 110 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. 206 ಮಂದಿ ಸಂಪೂರ್ಣ ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ದಾವಣಗೆರೆಯಲ್ಲಿ 74, ಹರಿಹರದಲ್ಲಿ 6, ಜಗಳೂರಿನಲ್ಲಿ 1, ಚನ್ನಗಿರಿ 3, ಹೊನ್ನಾಳಿ 25, ಹಾಗೂ ಅಂತರ್ ಜಿಲ್ಲೆಯಿಂದ ಬಂದಿದ್ದ ಒಬ್ಬರಲ್ಲಿ ಕೋವಿಡ್ ಇದ್ದದ್ದು ದೃಢಪಟ್ಟಿದೆ.

ಇಂದು ತಾಲೂಕುವಾರು ಬಿಡುಗಡೆಯಾದವರು:

ದಾವಣಗೆರೆಯಿಂದ 113, ಹರಿಹರದಿಂದ 17, ಜಗಳೂರಿನಿಂದ 6, ಚನ್ನಗಿರಿಯಿಂದ 26, ಹೊನ್ನಾಳಿ 43, ಅಂತರ್ ಜಿಲ್ಲೆಯಿಂದ 1 ಸೇರಿದಂತೆ ಒಟ್ಟು 206 ಮಂದಿ ಸಂಪೂರ್ಣ ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 3146 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 2048 ಮಂದಿ ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 78 ಸಾವು ಸಂಭವಿಸಿದ್ದು, ಪ್ರಸ್ತುತ 1020 ಸಕ್ರಿಯ ಪ್ರಕರಣಗಳು ಇದ್ದು, ಕೋವಿಡ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ABOUT THE AUTHOR

...view details