ಕರ್ನಾಟಕ

karnataka

By

Published : Dec 21, 2021, 7:48 PM IST

ETV Bharat / state

ಚೌಡೇಶ್ವರಿ ದೇವಸ್ಥಾನದಲ್ಲಿಲ್ಲ ದಲಿತರಿಗೆ ಪ್ರವೇಶ.. ಮುಜರಾಯಿಗೆ ಸೇರಿಸಿ ಅಂದ್ರು ಜನ..

ದೇವಸ್ಥಾನದ ಒಡೆತನದ ವಿಚಾರದಲ್ಲಿ ಗ್ರಾಮಸ್ಥರೆಲ್ಲಾ ಒಂದೆಡೆಯಾದ್ರೆ, ಜಯಪ್ಪನವರ ಕುಟುಂಬದ ಟ್ರಸ್ಟ್‌ ಒಂದು ಕಡೆಯಾಗಿದೆ. ಕೂಡಲೇ ಅಧಿಕಾರಿಗಳು ಮಧ್ಯ‌ಪ್ರವೇಶಿಸಿ ದೇವಸ್ಥಾನವನ್ನು ಮುಜರಾಯಿಗೆ ಸೇರಿಸಬೇಕು ಹಾಗೂ ಟ್ರಸ್ಟ್​ನಿಂದ ದೇವಸ್ಥಾನವನ್ನು ಬಿಡಿಸಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

Chowdeshwari Temple
ಚೌಡೇಶ್ವರಿ ದೇವಸ್ಥಾನ

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಗಡಿಗ್ರಾಮ ಮಸಣಿಕೆರೆಯ ಶ್ರೀ ಪದ್ಮಾವತಿ ಚೌಡೇಶ್ವರಿ ದೇವಸ್ಥಾನ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಇದೇ ಗ್ರಾಮದ ಜಯಪ್ಪ ಎಂಬುವರ ತೋಟದಲ್ಲಿ ಕಳೆದ ನೂರಾರು ವರ್ಷಗಳಿಂದ ದಲಿತರು ಹಾಗೂ ಗ್ರಾಮಸ್ಥರು ಪುಟ್ಟ ದೇವಸ್ಥಾನ ಅಭಿವೃದ್ಧಿ ಪಡಿಸಿದರು. ಕಾಲ ಕ್ರಮೇಣ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಆದಾಯವೂ ಕೂಡ ಜಾಸ್ತಿಯಾಗಿದೆ.

ಆದಾಯ ಜಾಸ್ತಿಯಾಗುತ್ತಿದ್ದಂತೆ ವೀರಭದ್ರೇಶ್ವರ ನೆಲೆ ಇರುವ ಜಾಗದಲ್ಲಿ ಚೌಡಮ್ಮ ಇದ್ದರೆ ಸಮಸ್ಯೆ ಆಗುತ್ತೆ ಎಂದು ಪೂರ್ವಿಕರು ಚೌಡಮ್ಮ ದೇವಿಯನ್ನು ಗ್ರಾಮದ ಹೊರವಲಯಕ್ಕೆ ಸಾಗಿಸಿದ್ರು. ನಂತರ ವರ್ಷಕ್ಕೆ 25 ಲಕ್ಷ ರೂಪಾಯಿ ಆದಾಯದ ಜತೆಗೆ ಹರಕೆ ರೂಪದಲ್ಲಿ ಚಿನ್ನ, ಬೆಳ್ಳಿ ಆಭರಣಗಳು ಬರಲಾರಂಭಿಸಿದವು.

ಗ್ರಾಮದ ಮುಖಂಡ ಮಹಾರುದ್ರಪ್ಪ ಮಾತನಾಡಿದರು

ಜಯಪ್ಪನವರು ತಮ್ಮದೇ ಕುಟುಂಬದವರು ಹಾಗೂ ಪರಿಚಯಸ್ಥರ ಹೆಸರಲ್ಲಿ ಟ್ರಸ್ಟ್‌ ಸ್ಥಾಪಿಸಿಕೊಂಡು ದೇವಸ್ಥಾನ ಟ್ರಸ್ಟ್‌ ಒಡೆತನಕ್ಕೆ ಸೇರಿದರು ಎಂದು ಘೋಷಿಸಿಕೊಂಡ್ರು. ಅಂದಿನಿಂದಲೂ ದಲಿತರಿಗೆ ಈ ದೇವಸ್ಥಾನಕ್ಕೆ ಪ್ರವೇಶ ಇಲ್ಲವಂತೆ. ಏಳು ವರ್ಷದ ಅವಧಿಯಲ್ಲಿ ಒಂದೂವರೆ ಕೋಟಿಗೂ ಹೆಚ್ಚು ಆದಾಯ ಇರುವ ಈ ದೇವಾಲಯಕ್ಕೆ ದಲಿತರಿಗೆ ಪ್ರವೇಶ ಇಲ್ಲದೇ ಇರುವುದು ಆಕ್ರೋಶಕ್ಕೆ ಕಾರಣ ಆಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲವಂತೆ.

ದೇವಸ್ಥಾನದಲ್ಲಿ ದಲಿತರಿಗೆ ಪ್ರವೇಶ ನೀಡಿಲ್ಲ ಎಂದು ರಂಗಸ್ವಾಮಿ ಎಂಬುವವರು ಚನ್ನಗಿರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೇವಸ್ಥಾನ ಇರುವ ಜಮೀನು ಮಾಲೀಕ ಜಯಪ್ಪ ಸೇರಿದಂತೆ ನಾಲ್ಕು ಜನರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾದ ಹಿನ್ನೆಲೆ ಆ ವ್ಯಕ್ತಿಗಳು ತಲೆಮರೆಸಿಕೊಂಡಿದ್ದಾರೆ.

ದೇವಸ್ಥಾನದ ಒಡೆತನದ ವಿಚಾರದಲ್ಲಿ ಗ್ರಾಮಸ್ಥರೆಲ್ಲ ಒಂದೆಡೆಯಾದ್ರೆ, ಜಯಪ್ಪನವರ ಕುಟುಂಬದ ಟ್ರಸ್ಟ್‌ ಒಂದುಕಡೆಯಾಗಿದೆ. ಕೂಡಲೇ ಅಧಿಕಾರಿಗಳು ಮಧ್ಯ‌ಪ್ರವೇಶಿಸಿ ದೇವಸ್ಥಾನವನ್ನು ಮುಜರಾಯಿಗೆ ಸೇರಿಸಬೇಕು ಹಾಗೂ ಟ್ರಸ್ಟ್​ನಿಂದ ದೇವಸ್ಥಾನವನ್ನು ಬಿಡಿಸಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಒಟ್ಟಾರೆಯಾಗಿ ಜಮೀನು ಮಾಲೀಕ ಹಾಗೂ ಗ್ರಾಮಸ್ಥರ ನಡುವೆ ದೇವಸ್ಥಾನ ನಲುಗುತ್ತಿದ್ದು, ಜಮೀನು ಮಾಲೀಕ ಇದು ನಮ್ಮ ಸ್ವಂತ ಆಸ್ತಿ ಎಂದರೆ ಇತ್ತ ಗ್ರಾಮಸ್ಥರು ಮುಜರಾಯಿಗೆ ಸೇರಿಸಿ ಎಂದು ಪಟ್ಟು ಹಿಡಿದಿದ್ದಾರೆ. ಏನೇ ಆಗಲಿ ಗ್ರಾಮದ ಶಾಂತಿಗೆ ಭಂಗ ತಂದಿರುವ ಈ ದೇವಸ್ಥಾನದ ವಿಚಾರದಲ್ಲಿ ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ.

ಓದಿ:ಮದ್ಯ ಮಾರಾಟದಲ್ಲಿ ಟಾರ್ಗೆಟ್‌ ಫಿಕ್ಸ್‌ ಮಾಡಿ ಹಣ ಗಳಿಸೋದು ಸರಿಯಲ್ಲ.. ಸರ್ಕಾರಕ್ಕೆ ಕಾಂಗ್ರೆಸ್‌ ಶಾಸಕ ತುಕಾರಾಂ ತರಾಟೆ

For All Latest Updates

TAGGED:

ABOUT THE AUTHOR

...view details