ದಾವಣಗೆರೆ: ರಾಜ್ಯ ಸರ್ಕಾರದಿಂದ ಬಂದ ಮಾರ್ಗಸೂಚಿಯನ್ವಯ ಇಂದು ಅಧಿಕಾರಿಗಳು ದಾವಣಗೆರೆಯಲ್ಲಿ ಬಹುತೇಕ ಅಂಗಡಿಗಳನ್ನು ಬಂದ್ ಮಾಡಿಸಿದ್ದಾರೆ. ಕೊರೊನಾ ನಿಯಮ ಪಾಲಿಸದಿರುವ ಖಾಸಗಿ ಬಸ್ ಹಾಗೂ ಆಟೋ ಚಾಲಕರಿಗೆ ದಂಡ ಪ್ರಯೋಗ ಮಾಡಿ ಬಿಸಿ ಮುಟ್ಟಿಸಿದ್ರು.
ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿದ್ದು, ಇದರ ಬಗ್ಗೆ ಅಂಗಡಿ ಮಾಲೀಕರಿಗೆ ಅರಿವಿಲ್ಲದೆ ಅಂಗಡಿಗಳನ್ನು ತೆರೆದು ವ್ಯಾಪಾರಕ್ಕೆ ನಿಂತಿದ್ದರು. ಇದನ್ನು ಗಮನಿಸಿದ ತಹಶೀಲ್ದಾರ್ ಗಿರೀಶ್ ರಸ್ತೆಗಿಳಿದು ಬಟ್ಟೆಯ ಅಂಗಡಿ, ಬೆಳ್ಳಿ ಬಂಗಾದಂಗಡಿ, ಸ್ಟೀಲ್ ಮೆಟಲ್ ಅಂಗಡಿಗಳಿಗೆ ನುಗ್ಗಿ ಮಾಲೀಕರಿಗೆ ಚಳಿ ಬಿಡಿಸಿದ್ರು. ಇನ್ನು ಮಂಡಿಪೇಟಿಯಲ್ಲಿರುವ ಮಹೇದ್ರಕರ್ ಬಟ್ಟೆ ಅಂಗಡಿಯಲ್ಲಿ ಸಾವಿರ ಜನ ಇದ್ದಿದ್ದನ್ನು ಗಮನಿದ ತಹಶೀಲ್ದಾರ್ ದಾಳಿ ನಡೆಸಿ ರಾಜ್ಯ ಸರ್ಕಾರದ ಮಾರ್ಗಸೂಚಿ ಗೊತ್ತಿಲ್ವ ಎಂದು ಆಕ್ರೋಶ ವ್ಯಕ್ತಪಡಿಸಿ ಮಹೇಂದ್ರಕರ್ ಬಟ್ಟೆ ಅಂಗಡಿ ಮಾಲೀಕ ವಿಠಲ್ ಎಂಬುವರನ್ನು ವಶಕ್ಕೆ ಪಡೆದ್ರು. ಇನ್ನು ಬೆಳ್ಳಿ-ಬಂಗಾರದ ಅಂಗಡಿಗಳಲ್ಲಿ ಮುಂದೆ ಬೀಗ ಹಾಕಿ ಹಿಂದಿನ ಬಾಗಿಲಿನಿಂದ ವ್ಯವಹಾರ ಮಾಡುತ್ತಿದ್ದನ್ನು ಗಮನಿಸಿದ ತಹಶೀಲ್ದಾರ್ ಪ್ರಕರಣ ದಾಖಲಿಸುವಂತೆ ಎಚ್ಚರಿಕೆ ನೀಡಿದರು. ದಾವಣಗೆರೆಯ ಬೇತೂರು ರಸ್ತೆಯಲ್ಲಿ ಹೆಚ್ಚು ಜನರನ್ನು ಕೂರಿಸಿದ್ದರಿಂದ ಖಾಸಗಿ ಬಸ್ ಆಟೋಗಳಿಗೆ ದಂಡ ಪ್ರಯೋಗ ಮಾಡಿ ಕೊರೊನಾ ಜಾಗೃತಿ ಮೂಡಿಸಿದರು.
ನೈಟ್ ಕರ್ಫ್ಯೂ ಹಿನ್ನೆಲೆ ಡಿಸಿ ಮಹಾಂತೇಶ್ ಬೀಳಗಿ ಸಿಟಿ ರೌಂಡ್ಸ್ ಹಾಕಿ ಕರ್ಫ್ಯೂಗೆ ಸಹಕರಿಸುವಂತೆ ಮನವಿ ಮಾಡಿದರು. ಇನ್ನು ಹಳೇ ದಾವಣಗೆರೆಗೆ ಭೇಟಿ ನೀಡಿದ ಡಿಸಿ, ಎಲ್ಲಾ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿರುವ ದೃಶ್ಯಗಳನ್ನು ಕಂಡು ಸಂತಸ ವ್ಯಕ್ತಪಡಿಸಿದರು.