ಕರ್ನಾಟಕ

karnataka

By

Published : Sep 28, 2020, 9:32 PM IST

ETV Bharat / state

ದಾವಣಗೆರೆಯಲ್ಲಿಂದು 107 ಮಂದಿಗೆ ಕೊರೊನಾ: 100 ಜನರು ಗುಣಮುಖ

ದಾವಣಗೆರೆಯಲ್ಲಿಂದು 107 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 100 ಮಂದಿ‌ ಕೊರೊನಾ‌ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Corona positive for 107 people in Davanagere district
ದಾವಣಗೆರೆಯಲ್ಲಿಂದು 107 ಮಂದಿಗೆ ಕೊರೊನಾ: 100 ಜನರು ಗುಣಮುಖ

ದಾವಣಗೆರೆ: ಜಿಲ್ಲೆಯಲ್ಲಿಂದು 107 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 15,632ಕ್ಕೆ ಏರಿಕೆಯಾಗಿದೆ.

ಇಂದು 100 ಮಂದಿ‌ ಕೊರೊನಾ‌ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಇದುವರೆಗೆ 12,584 ಜನರು ಡಿಸ್ಚಾರ್ಜ್ ಆಗಿದ್ದಾರೆ. ಹೈಪರ್ ಟೆನ್ಶನ್ ಸೇರಿದಂತೆ ವಿವಿಧ ಕಾಯಿಲೆಯಿಂದ ಬಳಲುತ್ತಿದ್ದ ಹರಿಹರ ತಾಲೂಕಿನ ಸಾರಥಿ ಗ್ರಾಮದ 50 ವರ್ಷದ ಕೊರೊನಾ ಸೋಂಕಿತ ಸೆಪ್ಟೆಂಬರ್ 27ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ 241 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಪ್ರಸ್ತುತ 2807 ಸೋಂಕಿತರಿದ್ದು, ಚಿಕಿತ್ಸೆ ಮುಂದುವರಿದಿದೆ. ಒಟ್ಟು 42,099 ಮಂದಿಯ ಗಂಟಲು ದ್ರವ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ.

ABOUT THE AUTHOR

...view details