ಕರ್ನಾಟಕ

karnataka

ETV Bharat / state

1985ರ ಕಾಲದ ಸೇತುವೆಗೆ ಇನ್ನೂ ಸಿಕ್ಕಿಲ್ಲ ಕಾಯಕಲ್ಪ; ಶಾಲೆಗೆ ತೆರಳಲು ವಿದ್ಯಾರ್ಥಿಗಳ ಸರ್ಕಸ್‌! - ದಾವಣಗೆರೆಯ ಹರಿದ್ರಾವತಿ ನದಿಯ ಸೇತುವೆ ನಿರ್ಮಾಣ ಸ್ಥಗಿತ

ಹರನಹಳ್ಳಿ, ಕೆಂಗಾಪುರ ಸೇರಿ 8 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಜಲಾವೃತವಾಗಿದ್ದರಿಂದ ರಸ್ತೆ ಬಂದ್ ಆಗಿದ್ದು, ನೀರಿನಿಂದ ಕಡಿತಗೊಂಡ ರಸ್ತೆಯಲ್ಲಿ ಶಾಲಾ-ಕಾಲೇಜುಗಳಿ​ಗೆ ವಿದ್ಯಾರ್ಥಿಗಳು ತೆರಳುತ್ತಿದ್ದಾರೆ.

ಜೀವ ಕೈಯಲ್ಲಿ ಹಿಡಿದು ಶಾಲೆಗೆ ತೆರಳುತ್ತಿರುವ ವಿದ್ಯಾರ್ಥಿಗಳು
ಜೀವ ಕೈಯಲ್ಲಿ ಹಿಡಿದು ಶಾಲೆಗೆ ತೆರಳುತ್ತಿರುವ ವಿದ್ಯಾರ್ಥಿಗಳು

By

Published : Apr 22, 2022, 4:40 PM IST

ದಾವಣಗೆರೆ:ಇಲ್ಲಿರುವಸೇತುವೆ 1985ರ ಕಾಲದ್ದು. ಅಲ್ಲಿ ಹರಿಯುವ ಪುಟ್ಟ ನದಿಗೆ ಸೇತುವೆ ನಿರ್ಮಿಸಿ ಸುಮಾರು ಮೂವತ್ತೈದು ವರ್ಷಗಳೇ ಆಗಿವೆ. ಜೋರು ಮಳೆ ಬಂದು ಸೂಳೆಕೆರೆ ಕೋಡಿ ಬಿದ್ರೆ ಸಾಕು ಸೇತುವೆ ಜಲಾವೃತವಾಗುತ್ತಿದೆ. ಪರಿಣಾಮ, ಶಾಲೆಗೆ ತೆರಳುವ ಮಕ್ಕಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಟ್ರ್ಯಾಕ್ಟರ್ ಮೂಲಕ ಮಕ್ಕಳು ಶಾಲೆಗೆ ತೆರಳಬೇಕಿದೆ.


ವಿವರ: ಏಷ್ಯಾದ 2ನೇ ಅತಿದೊಡ್ಡ ಕೆರೆ ಸೂಳೆಕೆರೆ ಭರ್ತಿಯಾಗಿ ಕೋಡಿ ಬಿದ್ದಿದೆ. ಪರಿಣಾಮ ಚನ್ನಗಿರಿ ತಾಲೂಕಿನ ಕೆಂಗಾಪುರ ಹಾಗೂ ಕಬ್ಬಳ ಗ್ರಾಮದ ನಡುವೆ ಹರಿಯುವ ಪುಟ್ಟ ಹರಿದ್ರಾವತಿ ನದಿ ತುಂಬಿ ಹರಿಯುತ್ತಿದೆ. ಹರನಹಳ್ಳಿ, ಕೆಂಗಾಪುರ ಸೇರಿ 8 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಈ ಸೇತುವೆ ಸದ್ಯ ಜಲಾವೃತವಾಗಿದ್ದು ರಸ್ತೆ ಬಂದ್ ಆಗಿದೆ. ಕಬಳ, ತ್ಯಾವಣಗಿ, ಹೊಸೂರು, ಕೆರೆಬೀಳಚಿ, ಕಣವೆ ಬಿಳ್ಚಿ ಸೇರಿ ಬೇರೆ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳು ಒಂದು ಬದಿಯಲ್ಲಿ ನಿಂತು ಟ್ರ್ಯಾಕ್ಟರ್‌ಗಾಗಿ ಕಾದು ಶಾಲೆ ಸೇರುತ್ತಾರೆ. ಟ್ರ್ಯಾಕ್ಟರ್ ಬಾರದೇ ಇದ್ದರೆ ಶಿಕ್ಷಕರು ಗ್ರಾಮದಲ್ಲಿ ಯಾವುದಾದರೂ ಟ್ರಾಕ್ಟರ್ ಕಳುಹಿಸಿ ವಿದ್ಯಾರ್ಥಿಗಳನ್ನು ಶಾಲಾ-ಕಾಲೇಜುಗಳಿಗೆ ಕರೆತರುವ ಕೆಲಸ ಮಾಡಬೇಕು.

ಇದನ್ನೂಓದಿ:ಹುಬ್ಬಳ್ಳಿ ಗಲಭೆ ರಿಂಗ್ ಮಾಸ್ಟರ್ ಮಹಾನಾಯಕ ಆಗಿರಬಹುದೇ? ಮೀರ್‌ಸಾದಿಕ್ ಆಗಿರಬಹುದೇ?: ಬಿಜೆಪಿ

For All Latest Updates

ABOUT THE AUTHOR

...view details