ದಾವಣಗೆರೆ:ಗುಂಪು ಕಟ್ಟಿಕೊಂಡು ಕ್ರಿಕೆಟ್ ಆಡ್ತಿದ್ದ ಮಕ್ಕಳಿಗೆ ಮನೆಗೆ ಹೋಗುವಂತೆ ಹೇಳಿದ ಕಂದಾಯ ನಿರೀಕ್ಷಕರ ಮೇಲೆ ಕಿಡಿಗೇಡಿಗಳಿಬ್ಬರು ಹಲ್ಲೆ ನಡೆಸಿದ ಘಟನೆ ಚನ್ನಗಿರಿ ತಾಲೂಕಿನ ತ್ಯಾವಣಿಗೆ ಗ್ರಾಮದ ನಾಡಕಚೇರಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಕ್ರಿಕೆಟ್ ಆಡ್ಬೇಡಿ ಅಂದಿದ್ದೇ ತಪ್ಪಾಯ್ತು.. ಕಂದಾಯ ನಿರೀಕ್ಷಕರ ಮೇಲೆ ಕಿಡಿಗೇಡಿಗಳಿಬ್ಬರಿಂದ ಹಲ್ಲೆ.. - Davanagere
ನಾಡ ಕಚೇರಿಯ ಆವರಣದಲ್ಲಿ ಮಕ್ಕಳು ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಬಸಣ್ಣ ಮಕ್ಕಳಿಗೆ ಬುದ್ಧಿ ಹೇಳಿ ಮನೆಗೆ ಕಳುಹಿಸಿದ್ದರು. ಬಳಿಕ ಕ್ರಿಕೆಟ್ ವಿಕೆಟ್ಗಳನ್ನು ತೆಗೆದುಕೊಂಡು ಹೋಗಿ ಕಚೇರಿಯಲ್ಲಿ ಇಟ್ಟುಕೊಂಡಿದ್ದರು.
![ಕ್ರಿಕೆಟ್ ಆಡ್ಬೇಡಿ ಅಂದಿದ್ದೇ ತಪ್ಪಾಯ್ತು.. ಕಂದಾಯ ನಿರೀಕ್ಷಕರ ಮೇಲೆ ಕಿಡಿಗೇಡಿಗಳಿಬ್ಬರಿಂದ ಹಲ್ಲೆ.. police stataion](https://etvbharatimages.akamaized.net/etvbharat/prod-images/768-512-7109909-thumbnail-3x2-chaii.jpg)
ಪೊಲೀಸ್ ಠಾಣೆ
ಆರ್ ಐ ಬಸಣ್ಣ ಹಲ್ಲೆಗೊಳಗಾದವರು. ನಾಡ ಕಚೇರಿಯ ಆವರಣದಲ್ಲಿ ಮಕ್ಕಳು ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಬಸಣ್ಣ ಮಕ್ಕಳಿಗೆ ಬುದ್ಧಿ ಹೇಳಿ ಮನೆಗೆ ಕಳುಹಿಸಿದ್ದರು. ಬಳಿಕ ಕ್ರಿಕೆಟ್ ವಿಕೆಟ್ಗಳನ್ನು ತೆಗೆದುಕೊಂಡು ಹೋಗಿ ಕಚೇರಿಯಲ್ಲಿ ಇಟ್ಟುಕೊಂಡಿದ್ದರು.
ಈ ವೇಳೆ ಇಲ್ಲಿಗೆ ಬಂದ ಗ್ರಾಮದ ರಂಜಿತ್ ಅಲಿಯಾಸ್ ಬಂಟಿ ಹಾಗೂ ಆಂಜನೇಯ ಎಂಬ ಯುವಕರಿಬ್ಬರು ಬಸಣ್ಣ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರಲ್ಲದೇ, ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಈ ಸಂಬಂಧ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.