ಕರ್ನಾಟಕ

karnataka

ETV Bharat / state

ದಾವಣಗೆರೆ: ದಂತ ವೈದ್ಯಾಧಿಕಾರಿ ಹುದ್ದೆಯ ಆಸೆ ತೋರಿಸಿ ವೈದ್ಯರಿಂದಲೇ ವಂಚನೆ ಆರೋಪ - Davanagere officer scam

ದಂತ ವೈದ್ಯಾಧಿಕಾರಿ ಹುದ್ದೆಯ ಆಸೆ ತೋರಿಸಿ ವೈದ್ಯರಿಂದಲೇ ವಂಚನೆ ಆರೋಪ - ಲಕ್ಷ ಲಕ್ಷ ಹಣ ಕೊಟ್ಟು ಕೈಸುಟ್ಟುಕೊಂಡ ಆಕಾಂಕ್ಷಿಗಳು- ದಾವಣಗೆರೆಯ ಬಡಾವಣೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು

Cheating by doctors in Davanagere
Cheating by doctors in Davanagere

By

Published : Feb 23, 2023, 7:52 AM IST

ದಾವಣಗೆರೆ:ದಂತ ವೈದ್ಯಧಿಕಾರಿಯ ಸರ್ಕಾರಿ ಹುದ್ದೆ ಕೊಡಿಸುವುದಾಗಿ ನಂಬಿಸಿ ಇಬ್ಬರು ಖಾಸಗಿ ದಂತ ವೈದ್ಯರಿಗೆ ಬರೋಬ್ಬರಿ 7.54 ಲಕ್ಷ ವಂಚಿಸಿರುವ ಆರೋಪ ಪ್ರಕರಣ ದಾವಣಗೆರೆ ನಗರದಲ್ಲಿ ಹಲವು ದಿ‌ನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ನಗರದ ಸಂತೋಷ್ ದಂತ ಚಿಕಿತ್ಸಾಲಯದ ವೈದ್ಯ ಡಾ.ಕೆ ವಿ ಸಂತೋಷ್ ಮತ್ತು ಮತ್ತೋರ್ವ ದಂತ ವೈದ್ಯ ಡಾ.ಮೊಹ್ಮದ್ ಇಮ್ರಾನುಲ್ಲಾ ಮೋಸ ಹೋದವರು. ದಾವಣಗೆರೆ ತಾಲೂಕಿನ ಹೂವಿನಮಡು ಗ್ರಾಮದ ವೈದ್ಯಧಿಕಾರಿ ಡಾ.ಭುವನೇಶ್ ನಾಯ್ಕ ಹಾಗೂ ಕಾಲೇಜ್ ಆಫ್ ಡೆಂಟಲ್ ಸೈನ್ಸ್​ನ ಉಪನ್ಯಾಸಕ ಡಾ.ಸತ್ಯ ಪ್ರಸಾದ್ ಮೋಸ ಮಾಡಿದ ಆರೋಪಿಗಳು. ಇವರಿಬ್ಬರ ವಿರುದ್ಧ ದಾವಣಗೆರೆಯ ಬಡಾವಣೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:1 ರೂಪಾಯಿ ಚಿಲ್ಲರೆ ನೀಡದ ಕಂಡಕ್ಟರ್​: ಪ್ರಯಾಣಿಕನಿಗೆ ₹3 ಸಾವಿರ ಪರಿಹಾರ ನೀಡಲು ಬಿಎಂಟಿಸಿಗೆ ಕೋರ್ಟ್ ಆದೇಶ

ಪ್ರಕರಣ ಹಿನ್ನೆಲೆ.. 2020ರ ಸೆಪ್ಟೆಂಬರ್​ನಲ್ಲಿ ಸರ್ಕಾರದಿಂದ ದಂತ ವೈದ್ಯಾಧಿಕಾರಿಗಳ ನೇಮಕಗಳ ಹುದ್ದೆಗೆ ಅರ್ಜಿ ಕರೆಯಲಾಗಿತ್ತು. ಆಗ ವೈದ್ಯರಾದ ಸಂತೋಷ್ ಮತ್ತು ಮೊಹ್ಮದ್ ಇಬ್ಬರು ಕೂಡ ಅರ್ಜಿ ಸಲ್ಲಿಸಿದ್ದರು. ಈ ವೇಳೆ ನನಗೆ ಭುವನೇಶ್ ನಾಯ್ಕ್ ಎಂಬುವವರ ಪರಿಚಯವಿದೆ. ಅವರಿಗೆ ದೊಡ್ಡ ದೊಡ್ಡ ಅಧಿಕಾರಿಗಳು ಮತ್ತು ರಾಜಕಾರಣಿಗಳ ಸಂಪರ್ಕವಿದೆ. ಈ ಹುದ್ದೆಗೆ ಆಯ್ಕೆ ಮಾಡಲು ಹತ್ತು ಲಕ್ಷವಾಗುತ್ತದೆ ಎಂದು ವೈದ್ಯ ಸಂತೋಷ್​​ ಅವರಿಂದ ಸ್ನೇಹಿತರೂ ಆದ ಸತ್ಯಪ್ರಸಾದ್ ಮುಂಗಡವಾಗಿ ಐದು ಲಕ್ಷ ವಸೂಲಿ ಮಾಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ:ಮಹಿಳೆಯ ಕೊಂದು ಶವದ ಜೊತೆ ಫೇಸ್‌ಬುಕ್ ಲೈವ್! ಬಳಿಕ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ನಕಲಿ ನೇಮಕಾತಿ ಪಟ್ಟಿ ತೋರಿಸಿ ವಂಚನೆ: ‌ನಗರದ ಸ್ಟೇಡಿಯಂ ಹಿಂಭಾಗದ ರಸ್ತೆಯಲ್ಲಿ ಸಂತೋಷ್ ಅವರಿಂದ ಆರಂಭದಲ್ಲಿ 03 ಲಕ್ಷ ರೂ. ಹಾಗೂ ಇಮ್ರಾನುಲ್ಲಾ ಅವರಿಂದ 2.50 ಲಕ್ಷ ರೂ.ಗಳನ್ನು ವೈದ್ಯರಾದ ಭುವನೇಶ್ ಹಾಗೂ ಸತ್ಯಪ್ರಸಾದ್ ವಸೂಲಿ ಮಾಡಿದ್ದಾರೆ. ಬಳಿಕ ಈ ವಂಚಕರಿಬ್ಬರು ವಾಟ್ಸಪ್ ಮೂಲಕ ನಕಲಿ ಆಯ್ಕೆಪಟ್ಟಿ ಕಳುಹಿಸಿದ್ದಲ್ಲದೇ ಆ ಪಟ್ಟಿಯಲ್ಲಿ ಇವರಿಬ್ಬರ ಹೆಸರಿರುವಂತೆ ತಿದ್ದಪಡಿ ಮಾಡಿ ನಂಬಿಸಿದ್ದರು. ಅ ಬಳಿಕ ಸಂತೋಷ್ ಅವರಿಂದ 1.54 ಲಕ್ಷ ಹಾಗೂ ಇಮ್ರಾನ್ ಅವರಿಂದ 50 ಸಾವಿರ ಹಣವನ್ನು ವಸೂಲಿ ಮಾಡಿ ನಂಬಿಸಿದ್ದರು. 2022 ರ ಮೇ 17 ರಂದು ಬಿಡುಗಡೆಯಾದ ನೇಮಕಾತಿ ಪಟ್ಟಿಯಲ್ಲಿ ಇವರ ಹೆಸರು ಇರದ ಕಾರಣ ಇಬ್ಬರೂ ಮೋಸ ಹೋಗಿರುವುದು ಗೊತ್ತಾಗಿದೆ. ಸದ್ಯ ತಾವು ಮೋಸ ಹೋದ ಬಗ್ಗೆ ದಾವಣಗೆರೆಯ ಬಡಾವಣೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಇದನ್ನೂ ಓದಿ:ಇಂದು ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ: ಪರ್ಯಾಯ ಮಾರ್ಗ ಬಳಸುವಂತೆ ವಾಹನ ಸವಾರರಿಗೆ ಮನವಿ ​

ABOUT THE AUTHOR

...view details