ಕರ್ನಾಟಕ

karnataka

ETV Bharat / state

ಓದಿದ್ದು ಎಂಎ ಇಂಗ್ಲಿಷ್‌, ಪಿಹೆಚ್‌ಡಿ.. ಉದ್ಯೋಗ ATM ಕೇಂದ್ರಕ್ಕೆ ಬರುವ ಅಮಾಯಕರಿಗೆ ವಂಚನೆ: ಕೊನೆಗೂ ಸಿಕ್ಕಿಬಿದ್ದ ಆರೋಪಿ! - Cheating to people who intered ATM in Davanagere

ದಾವಣಗೆರೆ ತಾಲೂಕಿನ ಮುಚ್ಚನೂರು ಗ್ರಾಮದ ಪಾಪಣ್ಣ ಎಂಬ ವೃದ್ದ ದಾವಣಗೆರೆ ನಗರಕ್ಕೆ ಬಂದಿದ್ದರು‌. ಈ ವೇಳೆ ಬಸವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಟಿಎಂಗೆ ಹೋಗಿ ಹಣ ಡ್ರಾ ಮಾಡುವಾಗ ಇದೇ ವ್ಯಕ್ತಿ ನಕಲಿ ಎಟಿಎಂ ಕಾರ್ಡ್‌ ಕೊಟ್ಟು ವಂಚಿಸಿದ್ದು ಅವರ ಅಕೌಂಟ್​ನಿಂದ ಹಣ ಡ್ರಾ ಮಾಡಿದ್ದ.

accused-arrested-for-cheat-the-people-in-atm-at-davanagere
ಎಟಿಎಂನಲ್ಲಿ ಹಣ ಕದಿಯುತ್ತಿರುವ ಕಳ್ಳ

By

Published : Mar 8, 2022, 8:43 PM IST

Updated : Mar 9, 2022, 9:05 AM IST

ದಾವಣಗೆರೆ: ಎಟಿಎಂ ಕೇಂದ್ರಕ್ಕೆ ಬರುವ ಸಾರ್ವಜನಿಕರಿಗೆ ಹಣ ತೆಗೆದುಕೊಡುವ ನಾಟಕವಾಡಿ ವಂಚಿಸುತ್ತಿದ್ದ ವ್ಯಕ್ತಿಯನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ಮೂಲದ ಯೋಗಾನಂದ ಬಂಧಿತ ಆರೋಪಿ.

ಇಂಗ್ಲಿಷ್‌ ಎಂಎ​ ವ್ಯಾಸಂಗ ಮಾಡಿ ಪಿಹೆಚ್​ಡಿಯನ್ನೂ ಮುಗಿಸಿರುವ ಈತ ಎಟಿಎಂ ಮುಂದೆ ನಿಂತು ಹಳ್ಳಿ ಜನರು, ವಯಸ್ಸಾದವರನ್ನು ಗುರಿ ಮಾಡಿ ಎಟಿಎಂನಿಂದ ಹಣ ತೆಗೆದುಕೊಡುವ ನಾಟಕವಾಡುತ್ತಿದ್ದ. ಇದೇ ವೇಳೆ ತನ್ನ ಕುಚೋದ್ಯಕ್ಕೆ ಬೀಳುವ ಜನರ ಒರಿಜಿನಲ್‌ ಎಟಿಎಂ ಕಾರ್ಡ್‌ ಹಾಗು ಪಿನ್‌ ಪಡೆದು, ಬದಲಾಯಿಸಿ ಪರಾರಿಯಾಗುತ್ತಿದ್ದ.

ಕಳೆದ ಎರಡು ವರ್ಷಗಳಿಂದ ಕಳ್ಳತನ ಆರಂಭಿಸಿರುವ ಈತ ಇದುವರೆಗೂ 78 ಎಟಿಎಂ ಕಾರ್ಡ್​ಗಳನ್ನು ಬದಲಾವಣೆ ಮಾಡಿ ಜನರಿಗೆ ಮೋಸ ಮಾಡಿದ್ದಾನೆ. ಅಕ್ರಮವಾಗಿ ಬದಲಾವಣೆ ಮಾಡಿದ ಎಟಿಎಂ ಕಾರ್ಡ್‌ಗಳಿಂದ ಒಟ್ಟು 8.58 ಲಕ್ಷ ಹಣ ಡ್ರಾ ಮಾಡಿದ್ದಾನೆ ಎಂದು ಎಸ್​ಪಿ ಸಿಬಿ ರಿಷ್ಯಂತ್ ತಿಳಿಸಿದರು.

ಎಟಿಎಂ ಬರುತ್ತಿದ್ದವರಿಗೆ ವಂಚಿಸುತ್ತಿದ್ದ ಆರೋಪಿ ಬಂಧನ

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?ದಾವಣಗೆರೆ ತಾಲೂಕಿನ ಮುಚ್ಚನೂರು ಗ್ರಾಮದ ಪಾಪಣ್ಣ ಎಂಬ ವೃದ್ದ ದಾವಣಗೆರೆ ನಗರಕ್ಕೆ ಬಂದಿದ್ದರು‌. ಈ ವೇಳೆ ಬಸವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಟಿಎಂಗೆ ಹೋಗಿ ಹಣ ಡ್ರಾ ಮಾಡುವಾಗ ಇದೇ ವ್ಯಕ್ತಿ ನಕಲಿ ಎಟಿಎಂ ಕೊಟ್ಟು ಅವರ ಅಕೌಂಟ್​ನಿಂದ ಹಣ ಡ್ರಾ ಮಾಡಿದ್ದಾನೆ. ಈ ವಿಷಯ ಗೊತ್ತಾಗಿ ಪಾಪಣ್ಣ ಪೊಲೀಸರಿಗೆ ದೂರು ನೀಡಿದ್ದರು.

ಈ ಪ್ರಕರಣವನ್ನು ಪತ್ತೆ ಹಚ್ಚಲು ಎಸ್​ಪಿ ರಿಷ್ಯಂತ್, ಡಿವೈಎಸ್​ಪಿ ನರಸಿಂಹ ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ್ದರು. ವಂಚಕ ಯೋಗಾನಂದನ ಸಿಸಿಟಿವಿ ಫೂಟೇಜ್ ಪರಿಶೀಲಿಸಿ ಕಾರ್ಯಾಚರಣೆಗೆ ಇಳಿದಿದ್ದ ಪೊಲೀಸರು ಎರಡು ತಿಂಗಳ ನಂತರ ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೆ, 8.58 ಲಕ್ಷ ರೂಪಾಯಿ ಹಣವನ್ನು ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ:ಪಡುವಾರಳ್ಳಿ ದೇವು ಕೊಲೆ ಪ್ರಕರಣ: 11 ಮಂದಿಗೆ ಜೀವಾವಧಿ ಶಿಕ್ಷೆ

Last Updated : Mar 9, 2022, 9:05 AM IST

For All Latest Updates

TAGGED:

ABOUT THE AUTHOR

...view details