ಕರ್ನಾಟಕ

karnataka

ದಲಿತೆ ಎಂದು ಅನುಮತಿ ನೀಡದ ಗ್ರಾಮಸ್ಥರು: ಅಂಗನವಾಡಿಯನ್ನ ಕಾನ್ವೆಂಟ್ ರೀತಿ ಮಾಡಿ ಸವಾಲೆಸೆದ ಶಿಕ್ಷಕಿ!

By

Published : Sep 1, 2022, 8:00 PM IST

ಅಂಗನವಾಡಿ ಶಿಕ್ಷಕಿ ಜಾತಿ ಕ್ರೌರ್ಯಕ್ಕೆ ಬಲಿಯಾಗದೇ ತಮ್ಮ ಕೌಶಲ್ಯದ ಮೂಲಕ ಜಾತಿ ತಾರತಮ್ಯ ಮಾಡಿದವರಿಗೆ ಪಾಠ ಕಲಿಸಿದ್ದಾರೆ. ಅಂಗನವಾಡಿಯನ್ನು ಕಾನ್ವೆಂಟ್ ರೀತಿ ಮಾಡಿದ ಶಿಕ್ಷಕಿ ಸಾಧನೆಗೆ ಎಲ್ಲರೂ ಫಿದಾ ಆಗಿದ್ದಾರೆ.

ಇದು ಕಾನ್ವೆಂಟ್​ ಅಲ್ಲ ಅಂಗನವಾಡಿ
ಇದು ಕಾನ್ವೆಂಟ್​ ಅಲ್ಲ ಅಂಗನವಾಡಿ

ದಾವಣಗೆರೆ: ಅಂಗನವಾಡಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕಲಿಸುತ್ತಿದ್ದ ಶಿಕ್ಷಕಿ ಜಾತಿ ಕ್ರೌರ್ಯಕ್ಕೆ ಒಳಗಾದರೂ ಛಲಬಿಡದೇ ಮಕ್ಕಳ ಉನ್ನತ ಭವಿಷ್ಯ ರೂಪಿಸಲು ಮುಂದಾಗಿದ್ದಾರೆ.

ಅಂಗನವಾಡಿಯನ್ನು ಕಾನ್ವೆಂಟ್ ರೀತಿ ಮಾಡಿ ಸವಾಲೆಸೆದ ಶಿಕ್ಷಕಿ

ಅಂಗನವಾಡಿ ಹೊರಗೆ ನಿಲ್ಲಿಸಿದ್ದ ಗ್ರಾಮಸ್ಥರು:ಶಿಕ್ಷಕಿ ದಲಿತೆ ಎಂಬ ಒಂದೇ ಕಾರಣಕ್ಕೆ ಗ್ರಾಮದ ಜನ ಇಂತಹ ಶಿಕ್ಷಕಿ ನಮ್ಮ ಅಂಗನವಾಡಿಗೆ ಬೇಕಾಗಿಲ್ಲ, ಎಂದು ಪಟ್ಟು ಹಿಡಿದು ಮೂರು ತಿಂಗಳುಗಳ ಕಾಲ ಅಂಗನವಾಡಿಗೆ ಬೀಗ ಹಾಕಿ ಆ ಶಿಕ್ಷಕಿಯನ್ನು ಹೊರ ನಿಲ್ಲುವಂತೆ ಮಾಡಿದ್ರು. ಅ ದಿಟ್ಟ ಶಿಕ್ಷಕಿ ಆ ಅಂಗನವಾಡಿಯಿಂದ ದಾವಣಗೆರೆಯ ಕೂಗಳತೆಯಲ್ಲಿರುವ ಆವರಗೆರೆಯ ಗೋಶಾಲೆ ಅಂಗನವಾಡಿಗೆ ವರ್ಗಾವಣೆಗೊಂಡು ಕಾನ್ವೆಂಟ್​​ಗೆ ಸೆಡ್ಡು ಹೊಡೆಯುವಂತೆ ಅಂಗನವಾಡಿ ಅಭಿವೃದ್ಧಿ ಮಾಡಿದ್ದಾರೆ.

ಜಾತಿ ತಾರತಮ್ಯ: ಮಹಿಳೆ ಮನಸ್ಸು ಮಾಡಿದ್ರೇ ಏನ್ ಬೇಕಾದರೂ ಮಾಡಬಲ್ಲಳು ಎಂಬ ಮಾತಿಗೆ ಉತ್ತಮ ಉದಾಹರಣೆಗೆ ದಾವಣಗೆರೆ ತಾಲೂಕಿನ ಹಳೇ ಚಿಕ್ಕನಹಳ್ಳಿ ಗ್ರಾಮದ ಅಂಗನವಾಡಿ ಶಿಕ್ಷಕಿ ಲಕ್ಮಿ ಸಾಕ್ಷಿ. ಇದೇ ಹಳೇಚಿಕ್ಕನಹಳ್ಳಿ ಗ್ರಾಮದ ಅಂಗನವಾಡಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಲು ಜಾತಿ ಎಂಬ ಪೆಡಂಭೂತ ಶಿಕ್ಷಕಿಗೆ ಕಂಠಕವಾಗಿತ್ತು. ದಲಿತೆ ಎಂಬ ಕಾರಣಕ್ಕೆ ಹಳೇ ಚಿಕ್ಕನಹಳ್ಳಿ ಗ್ರಾಮಸ್ಥರು ಶಿಕ್ಷಕಿ ಲಕ್ಷ್ಮಿ ಅವರನ್ನು ಅಂಗನವಾಡಿಗೆ ಬರದಂತೆ ಬೀಗ ಜಡಿಯಲಾಗಿತ್ತು. ಸತತ ಮೂರು ತಿಂಗಳ ಕಾಲ ಅಂಗನವಾಡಿ ಹೊರಗೆ ನಿಂತು ಮಾನಸಿಕ ನೋವು ಅನುಭವಿಸಿದ್ದ ಶಿಕ್ಷಕಿ ಲಕ್ಷ್ಮಿಅವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ದಾವಣಗೆರೆಯ ಆವರಗೆರೆ ಬಳಿ ಇರುವ ಗೋಶಾಲೆಯ ಅಂಗನವಾಡಿಗೆ ವರ್ಗಾವಣೆ ಮಾಡಿತ್ತು.

ಈ ಅವಮಾನವನ್ನೇ ಚಾಲೇಂಜ್ ಆಗಿ ಸ್ವೀಕರಿಸಿದ ಶಿಕ್ಷಕಿ, ತಮ್ಮ ನೂತನ ಅಂಗನವಾಡಿಯನ್ನು ಕಾನ್ವೆಂಟ್​​ಗಳಿಗೆ ಸೆಡ್ಡು ಹೊಡೆಯುವಂತೆ ಅಭಿವೃದ್ಧಿ ಮಾಡಿದ್ದಾರೆ. ಇವರ ಅಂಗನವಾಡಿಯಲ್ಲಿ ಒಟ್ಟು 30 ಮಕ್ಕಳಿದ್ದು, ಮಕ್ಕಳಿಗೆ ಕಾನ್ವೆಂಟ್ ಗಳಲ್ಲಿ ಸಿಗುವ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಲಕ್ಷ್ಮಿಯವರು ಭೋಧಿಸುತ್ತಿದ್ದಾರೆ.

ನೋವನ್ನೇ ಸಾವಾಲಾಗಿ ತೆಗೆದುಕೊಂಡ ಶಿಕ್ಷಕಿ:ಹೈಟೆಕ್ ಅಂಗನವಾಡಿಯಲ್ಲಿ ಕಲಿಯುತ್ತಿರುವ ಮಕ್ಕಳು ಕನ್ನಡ , ಇಂಗ್ಲಿಷ್ ಓದುತ್ತಾರೆ ಹಾಗೂ ಬರೆಯುತ್ತಾರೆ. ಇದಿಷ್ಟೇ ಅಲ್ಲದೆ ಕಾನ್ವೆಂಟ್​ನಲ್ಲಿಯೂ ಹೇಳಿಕೊಡದ ಶಿಕ್ಷಣವನ್ನು ಇವರು ಇಲ್ಲಿ ಹೇಳಿಕೊಡುತ್ತಿದ್ದಾರೆ. 2017 ರಲ್ಲಿ ಹಳೇಚಿಕ್ಕನಹಳ್ಳಿ ಅಂಗನವಾಡಿ ತೊರೆದಿದ್ದ ಶಿಕ್ಷಕಿ ಲಕ್ಷ್ಮಿ ಗೋಶಾಲೆಯ ಅಂಗನವಾಡಿಗೆ ಬಂದು ಐದು ವರ್ಷಗಳು ಕಳೆದಿವೆ. ಅಲ್ಲಿ ಪೋಷಕರು ನೀನು ಬೇಡ ಎಂದು ಕಳುಹಿಸಿದ್ದರು, ಇಲ್ಲಿ ಶಿಕ್ಷಕಿ ಮನೆ ಮಾತಾಗಿದ್ದಾರೆ.

ಈ ಅಂಗನವಾಡಿ ಅಭಿವೃದ್ಧಿಗೊಂಡ ಬೆನ್ನಲ್ಲೇ ಈ ಭಾಗದ ಪೋಷಕರು ತಮ್ಮ ಮಕ್ಕಳನ್ನು ಕಾನ್ವೆಂಟ್​​ಗೆ ಕಳುಹಿಸುವ ಬದಲು ವಿಶೇಷವಾದ ಅಂಗನವಾಡಿಗೆ ಕಳುಹಿಸುತ್ತಿದ್ದಾರೆ. ಇದಲ್ಲದೇ ಇಲಾಖೆಯ ಬೆಂಬಲ ಗೋಶಾಲೆ ನಿವಾಸಿಗಳ ಬೆಂಬಲದಿಂದ ಇಷ್ಟೆಲ್ಲ ಅಭಿವೃದ್ಧಿ ಮಾಡಲು ಸಾಧ್ಯವಾಗಿದೆ.

ಅಂಗನವಾಡಿಯನ್ನು ಕಾನ್ವೆಂಟ್ ರೀತಿ ಮಾಡಿ ಸವಾಲೆಸೆದ ಶಿಕ್ಷಕಿ!

ಇದನ್ನೂ ಓದಿ:ಪಂಡರಾಪೂರವರೆಗೆ ಉರುಳುಸೇವೆ ಕೈಗೊಂಡ ಭಕ್ತ: ತನು ಮನವೆಲ್ಲಾ ವಿಠ್ಠಲನ ನಾಮ

ABOUT THE AUTHOR

...view details