ಕರ್ನಾಟಕ

karnataka

By

Published : Sep 8, 2019, 5:25 PM IST

ETV Bharat / state

ಅಡ್ಡಾದಿಡ್ಡಿ ಕಾರು ಚಾಲನೆ: ವಿದ್ಯುತ್​​ ​ಕಂಬಕ್ಕೆ ಡಿಕ್ಕಿಯಾಗಿ ಅವಾಂತರ

ಕಾರು ಡಿಕ್ಕಿ ಪರಿಣಾಮ ನಿಜಲಿಂಗಪ್ಪ ಬಡಾವಣೆಯ ಮನೆಗಳ ವಿದ್ಯುತ್ ಕಟ್ ಆಗಿದೆ.  ಇದಲ್ಲದೆ, ಈ ಡಿಕ್ಕಿಯ ರಭಸಕ್ಕೆ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ನಜ್ಜುಗುಜ್ಜಾಗಿದೆ.

ಅಡ್ಡಾದಿಡ್ಡಿ ಕಾರು ಚಾಲನೆ:

ದಾವಣಗೆರೆ: ವಾಹನ ಚಾಲಕ ಅಡ್ಡಾದಿಡ್ಡಿ ಕಾರು ಚಲಾಯಿಸಿ ಬೆಸ್ಕಾಂ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈ ಘಟನೆ ನಿಜಲಿಂಗಪ್ಪ ಬಡಾವಣೆಯ 2ನೇ ಕ್ರಾಸ್​​ನಲ್ಲಿ ನಡೆದಿದೆ.

ಚಾಲಕ ಅಪ್ರಾಪ್ತ ವಯಸ್ಸಿನವನಾಗಿದ್ದು, ಕ್ರೇಜ್​ಗಾಗಿ ಈ ರೀತಿ ಮಾಡಿದ್ದಾನೆ ಎನ್ನಲಾಗಿದೆ. ಡಿಕ್ಕಿ ಪರಿಣಾಮ ನಿಜಲಿಂಗಪ್ಪ ಬಡಾವಣೆಯ ಮನೆಗಳ ವಿದ್ಯುತ್ ಕಟ್ ಆಗಿದೆ. ಇದಲ್ಲದೆ, ಈ ಡಿಕ್ಕಿಯ ರಭಸಕ್ಕೆ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ನಜ್ಜುಗುಜ್ಜಾಗಿದೆ.

ಈ ಘಟನೆ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ABOUT THE AUTHOR

...view details