ದಾವಣಗೆರೆ: ಅಡಿಕೆ ದೋಟಿ ಕೊಯ್ಯುವಾಗ ವಿದ್ಯುತ್ ಸ್ಪರ್ಶಿಸಿ ಕೂಲಿ ಕಾರ್ಮಿಕ ಸ್ಥಳದಲ್ಲೇ ಕೊನೆಯುಸಿರೆಳೆದಿರುವ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಹೋಬಳಿಯ ಹೊಟ್ಯಾಪುರದಲ್ಲಿ ನಡೆದಿದೆ.
ಚನ್ನಮುಂಬಾಪುರ ಗ್ರಾಮದ ಸಿಕಾಮಣಿ(35) ಮೃತ ಕೂಲಿ ಕಾರ್ಮಿಕ. ಸಿಕಾಮಣಿ ಶಿವಲಿಂಗಪ್ಪ ಎಂಬುವರ ಅಡಿಕೆ ತೋಟದಲ್ಲಿ ಅಡಿಕೆ ಕೊಯ್ಲು ಮಾಡುವ ವೇಳೆ ಈ ದುರ್ಘಟನೆ ನಡೆದಿದೆ. ಮೃತ ಯುವಕ ಸಿಕಾಮಣಿ ಅಡಿಕೆ ಕೊಯ್ಲು ಮಾಡುತ್ತಿರುವಾಗ ಅಡಿಕೆ ದೋಟಿಗೆ ವಿದ್ಯುತ್ ತಂತಿ ಸ್ಪರ್ಶಿಸಿದೆ, ಅಲ್ಲಿಂದ ಬಿಡಿಸಿಕೊಳ್ಳಲಾಗದೆ ಸಿಕಾಮಣಿ ಸ್ಥಳದಲ್ಲೇ ಸಾವನಪ್ಪಿದ್ದಾರೆ.