ದಾವಣಗೆರೆ: ನೀವು ಕೊರೊನಾ ಕಾಲದಲ್ಲಿ ಜನರಿಗೆ ಹೋಳಿಗೆ ಊಟ ಹಾಕಿಸಿ, ಜನಪರ ಕೆಲಸ ಮಾಡಿದ್ದೀರಿ. ಅದನ್ನು ನಾನು ಮರೆಯುವುದಿಲ್ಲ ಎಂದು ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಅವರ ಬಗ್ಗೆ ಬಾಲಕಿಯೋರ್ವಳು ಹಾಡಿ ಹೊಗಳಿದ್ದಾಳೆ.
ನೀವು ಜನಪರ ಕೆಲಸ ಮಾಡಿದ್ದೀರಿ, ನಿಮ್ಮ ಜೊತೆಗೊಂದು ಸೆಲ್ಫಿ ಬೇಕು: ರೇಣುಕಾಚಾರ್ಯಗೆ ಬಾಲಕಿ ಮನವಿ
ಹೊನ್ನಾಳಿ ಕ್ಷೇತ್ರ ಪ್ರವಾಸದಲ್ಲಿದ್ದ ಶಾಸಕ ರೇಣುಕಾಚಾರ್ಯ ಬಳಿ ತುಂಬಿಗೆರೆ ಗ್ರಾಮದ ವಿದ್ಯಾರ್ಥಿನಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅನುಮತಿ ಕೇಳಿದಳು. ಆ ವೇಳೆ ಆಕೆ ಶಾಸಕರು ಮಾಡಿದ ಕೆಲಸಗಳ ಬಗ್ಗೆ ಹೆಮ್ಮೆಯಿಂದ ಅವರಿಗೇ ಹೇಳಿ ಶಾಸಕರ ಮುಖದಲ್ಲಿ ನಗು ತರಿಸಿ, ಆಶೀರ್ವಾದ ಪಡೆದುಕೊಂಡಳು.
ರೇಣುಗೆ ಬಾಲಕಿಯಿಂದ ಅಭಿನಂದನೆ
ರೇಣುಕಾಚಾರ್ಯ ಅವರು ಮಾಡಿದ ಕೆಲಸದ ವಿಡಿಯೋ ತುಣುಕುಕೊಂದನ್ನು ಅವರಿಗೇ ತೋರಿಸಿ ಶಬ್ಬಾಶ್ ಗಿರಿ ಪಡೆದಿದ್ದಾಳೆ. ಹೊನ್ನಾಳಿ ಕ್ಷೇತ್ರ ಪ್ರವಾಸದಲ್ಲಿದ್ದ ಶಾಸಕ ರೇಣುಕಾಚಾರ್ಯ ಬಳಿ ತುಂಬಿಗೆರೆ ಗ್ರಾಮದ ವಿದ್ಯಾರ್ಥಿನಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅನುಮತಿ ಕೇಳಿದಳು. ಆ ವೇಳೆ ಆಕೆ ಶಾಸಕರು ಮಾಡಿದ ಕೆಲಸಗಳ ಬಗ್ಗೆ ಹೆಮ್ಮೆಯಿಂದ ಅವರಿಗೇ ಹೇಳಿ ಶಾಸಕರ ಮುಖದಲ್ಲಿ ನಗು ಮೂಡುವಂತೆ ಮಾಡಿದಳು.
ಬಳಿಕ ಶಾಸಕ ರೇಣುಕಾಚಾರ್ಯ ಅವರು ಬಾಲಕಿಯ ಮಾತಿಗೆ ಮನಸೋತು ಪುಸ್ತಕ ನೀಡಿ ಚೆನ್ನಾಗಿ ಓದುವಂತೆ ಹಾರೈಸಿದರು.