ಕರ್ನಾಟಕ

karnataka

By

Published : Sep 6, 2020, 8:18 AM IST

ETV Bharat / state

ದಾವಣಗೆರೆ ಜಿಲ್ಲೆಯಲ್ಲಿ 406 ಮಂದಿಗೆ ಕೊರೊನಾ‌ ದೃಢ: 7 ಜನರು ಸಾವು

ದಾವಣಗೆರೆ ಜಿಲ್ಲೆಯಲ್ಲಿ ನಿನ್ನೆ 406 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 7 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

Davangere
ದಾವಣಗೆರೆ ಜಿಲ್ಲೆಯಲ್ಲಿ 406 ಮಂದಿಗೆ ಕೊರೊನಾ‌ ದೃಢ

ದಾವಣಗೆರೆ:ನಿನ್ನೆ ಜಿಲ್ಲೆಯಲ್ಲಿ 406 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 10,977ಕ್ಕೇರಿದೆ. ಜಿಲ್ಲೆಯಲ್ಲಿ ನಿನ್ನೆ 7 ಮಂದಿ ಸೋಂಕಿಗೆ ಬಲಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 213ಕ್ಕೇರಿದೆ.

ದಾವಣಗೆರೆಯಲ್ಲಿ 152, ಹರಿಹರ 33, ಜಗಳೂರು 26, ಚನ್ನಗಿರಿ 116, ಹೊನ್ನಾಳಿ 52 ಹಾಗೂ ಹೊರ ಜಿಲ್ಲೆಯಿಂದ ಬಂದಿದ್ದ 27 ಜನರಲ್ಲಿ ಕೊರೊನಾ ಸೋಂಕಿರುವುದು ಖಚಿತವಾಗಿದೆ. ದಾವಣಗೆರೆಯಲ್ಲಿ ನಾಲ್ವರು, ಜಗಳೂರು, ನ್ಯಾಮತಿಯಲ್ಲಿ ಒಬ್ಬರು ಹಾಗೂ ಬಳ್ಳಾರಿಯ ಒಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಇನ್ನು ಜಿಲ್ಲೆಯಲ್ಲಿ 238 ಜನರು‌ ಕೊರೊನಾ‌ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದು, ಒಟ್ಟು 7996 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 2778 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರೆದಿದೆ.

ABOUT THE AUTHOR

...view details