ಕರ್ನಾಟಕ

karnataka

By

Published : Jul 10, 2020, 12:14 AM IST

ETV Bharat / state

ಬೆಣ್ಣೆನಗರಿಯಲ್ಲಿ ಬರೋಬ್ಬರಿ 40 ಕೊರೊನಾ ಕೇಸ್​​: ಸೋಂಕಿಗೆ ಓರ್ವ ಬಲಿ

ದಾವಣಗೆರೆಯಲ್ಲಿ ಕೊರೊನಾ ಕಂಟಕವಾಗಿ ಕಾಡ್ತಿದೆ. ಇಂದು ಮತ್ತೆ 40 ಪ್ರಕರಣಗಳು ದಾಖಲಾಗಿದ್ದು, ಒರ್ವ ಬಲಿಯಾಗಿದ್ದಾರೆ. ಇದಲ್ಲದೆ ಜಿಲ್ಲೆಯಲ್ಲಿ 81 ಸಕ್ರಿಯ ಪ್ರಕರಣಗಳಿದ್ದು, ಒಟ್ಟಾರೆ ಈವರೆಗೆ 14 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

40 new corona cases reported in Davanagere and one death in a Day
ಬೆಣ್ಣೆನಗರಿಯಲ್ಲಿ ಬರೋಬ್ಬರಿ 40 ಕೊರೊನಾ ಪ್ರಕರಣ ದೃಢ: ಸೋಂಕಿಗೆ ಓರ್ವ ಬಲಿ

ದಾವಣಗೆರೆ:ಜಿಲ್ಲೆಯಲ್ಲಿ 40 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 1 ಸಾವು ಸಂಭವಿಸಿದೆ. 4 ಮಂದಿ ಸಂಪೂರ್ಣ ಗುಣಮುಖರಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಇನ್ನೂ ದೃಢಪಟ್ಟ ಪ್ರಕರಣಗಳಲ್ಲಿ ರೋಗಿ ಸಂಖ್ಯೆ 30650, 57 ವರ್ಷದ ಪುರುಷ, 30651, 45 ವರ್ಷದ ಮಹಿಳೆ, ಇವರು ಮಹಾರಾಷ್ಟ್ರದಿಂದ ಹಿಂದಿರುಗಿದವರಾಗಿದ್ದಾರೆ.

ಇನ್ನುಳಿದವರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಅಲ್ಲದೆ ಇವರಲ್ಲಿ 22 ಮಂದಿ ಪುರುಷರಾದರೆ 18 ಮಂದಿ ಮಹಿಳೆಯರಿದ್ದಾರೆ. ಈ ನಡುವೆ ರೋಗಿ ಸಂಖ್ಯೆಗಳಾದ 14402, 14403, 15375, 23565, ಇವರೆಲ್ಲರೂ ಸಂಪೂರ್ಣ ಗುಣಮುಖರಾಗಿ ನಿಗದಿತ ಕೋವಿಡ್ ಆಸ್ವತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ರೋಗಿಸಂಖ್ಯೆ 30682, 73 ವರ್ಷದ ಪುರುಷ ತೀವ್ರ ಉಸಿರಾಟದ ತೊಂದರೆಯಿಂದ ಸಾರಿ ಕೇಸ್ ಹಿನ್ನೆಲೆ ಹೊಂದಿದ್ದ ವ್ಯಕ್ತಿ ಮರಣ ಹೊಂದಿರುತ್ತಾರೆ. ಒಟ್ಟು 423 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 328 ಜನರು ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ.

ಜಿಲ್ಲೆಯಲ್ಲಿ ಒಟ್ಟಾರೆ ಕೊರೊನಾದಿಂದಾಗಿ 14 ಸಾವು ಸಂಭವಿಸಿದ್ದು, ಪ್ರಸ್ತುತ್ತ 81 ಸಕ್ರಿಯ ಪ್ರಕರಣಗಳಿವೆ.

ABOUT THE AUTHOR

...view details