ಮಂಗಳೂರು:ಮೂಡಬಿದಿರೆ ಪಟ್ಟಣದ ಒಂಟಿಕಟ್ಟೆ ಬಳಿಯಬ ತೆರೆದ ಬಾವಿಯಲ್ಲಿ ಯುವಕನ ಶವ ಪತ್ತೆಯಾಗಿದೆ.
ತೆರೆದ ಬಾವಿಯಲ್ಲಿ ಯುವಕನ ಶವ ಪತ್ತೆ - ಮಂಗಳೂರಿನಲ್ಲಿ ಯುವಕನ ಶವ ಪತ್ತೆ
ಮೂಡಬಿದಿರೆ ಪಟ್ಟಣದ ಒಂಟಿಕಟ್ಟೆ ಬಳಿಯ ತೆರೆದ ಬಾವಿಯಲ್ಲಿ ತೋಕೂರು ನಿವಾಸಿ ಲೋಹಿತ್ ದೇವಾಡಿಗ (26) ಎಂಬುವವರ ಶವ ಪತ್ತೆಯಾಗಿದೆ. ಈ ಕುರಿತು ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಲೋಹಿತ್ ದೇವಾಡಿಗ
ಇಲ್ಲಿನ ಕಿನ್ನಿಗೋಳಿಯ ತೋಕೂರು ನಿವಾಸಿ ಲೋಹಿತ್ ದೇವಾಡಿಗ (26) ಮೃತ ಯುವಕನಾಗಿದ್ದಾನೆ. ನಿನ್ನೆ (ಡಿ. 25) ರಾತ್ರಿ ಸ್ನೇಹಿತರ ಜೊತೆ ಮೂಡುಬಿದಿರೆ ಒಂಟಿಕಟ್ಟೆಯಲ್ಲಿ ನಡೆಯುತ್ತಿರುವ ಕೋಟಿ ಚೆನ್ನಯ ಜೋಡುಕರೆ ಕಂಬಳ ನೋಡಲು ಸ್ನೇಹಿತರೊಂದಿಗೆ ತೆರಳಿದ್ದ. ಆದರೆ, ಬೆಳಗ್ಗೆ ಒಂಟಿಕಟ್ಟೆಯಲ್ಲಿರುವ ತೆರೆದ ಬಾವಿಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ಈ ಸಂಬಂಧಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.