ಕರ್ನಾಟಕ

karnataka

By

Published : Jan 20, 2022, 9:52 AM IST

Updated : Jan 20, 2022, 2:31 PM IST

ETV Bharat / state

ಯಕ್ಷಗಾನ ಪ್ರದರ್ಶನ ಮುಗಿಸಿ ವಾಪಸಾಗುತ್ತಿದ್ದ ವೇಳೆ ರಸ್ತೆ ಅಪಘಾತ: ಕಲಾವಿದ ಸಾವು

ಮೂಡಬಿದಿರೆಯ ಗಂಟಾಲ್ ಕಟ್ಟೆ ಬಳಿ ಬೈಕ್​ಗೆ ಓಮಿನಿ ಕಾರು ಡಿಕ್ಕಿ ಹೊಡೆದ ಪರಿಣಾಮ ಹಿರಿಯ ಯಕ್ಷಗಾನ ಕಲಾವಿದರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವೇಣೂರು ವಾಮನಕುಮಾರ್
ವೇಣೂರು ವಾಮನಕುಮಾರ್

ಮಂಗಳೂರು: ಯಕ್ಷಗಾನ ಕಲಾವಿದರೊಬ್ಬರು ಪ್ರದರ್ಶನ ಮುಗಿಸಿ ಮನೆಗೆ ವಾಪಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿ ಸಾವನ್ನಪ್ಪಿರುವ ಘಟನೆ ನಡೆದಿದೆ. ವೇಣೂರು ವಾಮನಕುಮಾರ್ (46) ಮೃತ ಯಕ್ಷಗಾನ ಕಲಾವಿದ.

ಇವರು ಹಿರಿಯಡ್ಕ ಮೇಳ ಕಲಾವಿದರಾಗಿದ್ದು, ಸ್ತ್ರಿ ವೇಷ, ಕಥಾ ನಾಯಕನ ಪಾತ್ರ ಮಾಡುತ್ತಿದ್ದರು. ಹಿರಿಯ ಕಲಾವಿದರಾಗಿರುವ ಇವರು, ನಿನ್ನೆ ಕುಂದಾಪುರದ ಕೊಂಕಿ ಎಂಬಲ್ಲಿ ಯಕ್ಷಗಾನ ಪ್ರದರ್ಶನ ನಡೆಸಿದ್ದರು. ಯಕ್ಷಗಾನ ಪ್ರದರ್ಶನ ಮುಗಿಸಿ ಮನೆಗೆ ಬೈಕ್​ನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಅಪಘಾತವಾಗಿದೆ.

ರಸ್ತೆ ಅಪಘಾತ

ಬೆಳಗ್ಗೆ 6.30ರ ಸಂದರ್ಭದಲ್ಲಿ ಮೂಡಬಿದಿರೆಯ ಗಂಟಾಲ್ ಕಟ್ಟೆ ಎಂಬಲ್ಲಿ ಇವರ ಬೈಕ್​ಗೆ ಓಮಿನಿ ಕಾರು ಡಿಕ್ಕಿ ಹೊಡೆದಿದ್ದು, ವಾಮನಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಕುರಿತು ಮೂಡಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷನ ಮೇಲೆ ನಿಂದನೆ ಆರೋಪ: ಸ್ಪಷ್ಟನೆ ನೀಡಿದ ನಲಪಾಡ್, ಸಿದ್ದು

Last Updated : Jan 20, 2022, 2:31 PM IST

ABOUT THE AUTHOR

...view details