ಕರ್ನಾಟಕ

karnataka

ETV Bharat / state

ವಿಶೇಷ ಚೇತನರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ: ಇವರ ಕ್ರಿಕೆಟ್​ ಆಟಕ್ಕೆ ಎಲ್ಲರೂ ಫಿದಾ! - Wheelchair Cricket Competition at Mangalore

ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೈಂಟ್ ಅಲೋಶಿಯಸ್ ಮತ್ತು ಸಹ್ಯಾದ್ರಿ ಕಾಲೇಜ್ ಸಹಯೋಗದೊಂದಿಗೆ ರಾಜ್ಯ ಮಟ್ಟದ ವೀಲ್ ಚೇರ್ ಕ್ರಿಕೆಟ್ ಸ್ಪರ್ಧೆ ಏರ್ಪಡಿಸಲಾಗಿತ್ತು.

Wheelchair Cricket Competition at Mangalore
ನೋಡುಗರ ಕಣ್ಣಿಗೆ ಹಬ್ಬವಾದ ವಿಕಲಚೇತನರ ವಿಶೇಷ ಕ್ರಿಕೆಟ್...!

By

Published : Dec 9, 2019, 2:08 AM IST

ಮಂಗಳೂರು:ನಗರದ ಹೊರವಲಯದಲ್ಲಿರುವ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ವೀಲ್ ಚೇರ್ ಕ್ರಿಕೆಟ್ ಸ್ಪರ್ಧೆ ನೋಡುಗರ ಮೈ ರೋಮಾಂಚನಗೊಳಿಸುವಂತಿತ್ತು.

ನೋಡುಗರ ಕಣ್ಣಿಗೆ ಹಬ್ಬವಾದ ವಿಕಲಚೇತನರ ವಿಶೇಷ ಕ್ರಿಕೆಟ್...!

ಹೌದು, ಸೈಂಟ್ ಅಲೋಶಿಯಸ್ ಮತ್ತು ಸಹ್ಯಾದ್ರಿ ಕಾಲೇಜ್ ಜಂಟಿಯಾಗಿ ಆಯೋಜಿಸಿರುವ ರಾಜ್ಯ ಮಟ್ಟದ ವೀಲ್ ಚೇರ್ ಕ್ರಿಕೆಟ್ ಸ್ಪರ್ಧೆ ಎಲ್ಲರನ್ನೂ ಮೈ ರೋಮಾಂಚನಗೊಳಿಸುವಂತೆ ಮಾಡಿತು. ವಿಕಲಚೇತನ ಕ್ರೀಡಾಪಟುಗಳನ್ನು ಉತ್ತೇಜಿಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ನಡೆದ ರಾಜ್ಯ ಮಟ್ಟದ ಈ ಪಂದ್ಯಾವಳಿಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ತಂಡಗಳಿಗಾಗಿ 20 ಓವರ್​ನ ಒಂದು ದಿನದ ಪಂದ್ಯಾವಳಿ ಆಯೋಜಿಸಲಾಗಿತ್ತು.

ಮುಂದಿನ ಬಾರಿ ಗೋವಾ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹೀಗೆ ದಕ್ಷಿಣ ಭಾರತದ ವಿಕಲ ಚೇತನರ ತಂಡಗಳನ್ನೂ ಕರೆದು ಆಡಿಸುವ ಯೋಚನೆ ಇದೆ ಎಂದು ಆಯೋಜಕರು ತಿಳಿಸಿದ್ದಾರೆ.

For All Latest Updates

ABOUT THE AUTHOR

...view details