ಮಂಗಳೂರು:ರಾಜ್ಯದಲ್ಲಿ ಸಂಭವಿಸಿದ ಪ್ರವಾಹದಿಂದಾಗಿರುವ ಅನಾಹುತಗಳನ್ನು ಗಮನಿಸಿದ್ದೇವೆ. ಅಲ್ಲದೆ, ಜನರ ಸಂಕಷ್ಟಗಳಿಗೆ ನಾವು ಸಾಕಷ್ಟು ಸ್ಪಂದಿಸಿದ್ದೇವೆ. ಇನ್ನೂ ಮಳೆ ಸುರಿಯುತ್ತಿರುವುದು ಸರ್ಕಾರದ ಜೊತೆಗೆ ನಮಗೂ ಕೂಡ ಆಘಾತ ತಂದಿದೆ. ಈ ಬಾರಿ ಭತ್ತದ ಹಾಗೂ ಧಾನ್ಯಗಳ ಕೊಯ್ಲು ಮಾಡುವುದು ರೈತರಿಗೆ ಕಷ್ಟವಾಗಿದೆ. ಹಾಗಾಗಿ ನಾವು 50 ಕೊಯ್ಲು ಯಂತ್ರಗಳನ್ನು ಖರೀದಿಸಲು ಚಿಂತನೆ ನಡೆಸಿದ್ದೇವೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಭೀಕರ ಪ್ರವಾಹ: ರೈತರ ಸಂಕಷ್ಟಗಳಿಗೆ ಸ್ಪಂದಿಸಲು ಮುಂದಾದ್ರು ಡಾ. ಡಿ.ವೀರೇಂದ್ರ ಹೆಗ್ಗಡೆ
ಭಾರಿ ಮಳೆಯಿಂದಾಗಿ ಈ ಬಾರಿ ಭತ್ತದ ಹಾಗೂ ಧಾನ್ಯಗಳ ಕೊಯ್ಲು ಮಾಡುವುದು ಕಷ್ಟವಾಗಿದೆ ಎಂದು ನಾವು 50 ಕೊಯ್ಲು ಯಂತ್ರಗಳನ್ನು ಖರೀದಿಸಲು ಚಿಂತನೆ ನಡೆಸಿರುವುದಾಗಿ ಧಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳ ಭತ್ತ ಹಾಗೂ ಧಾನ್ಯಗಳ ಕೊಯ್ಲು ಮಾಡಲು ಈ ಯಂತ್ರಗಳನ್ನು ಬಳಸಲಾಗುತ್ತದೆ. ಅದನ್ನು ಸಾಗಿಸಲು ಬೇಕಾದ ವಾಹನಗಳು, ಸಿಬ್ಬಂದಿಯನ್ನು ಕಳಿಸಲಾಗುತ್ತದೆ. ಬೇರೆ ಕೊಯ್ಲು ಯಂತ್ರಗಳಿಗಿಂತ ಕಡಿಮೆ ಬಾಡಿಗೆಯಲ್ಲಿ ಇದನ್ನು ರೈತರಿಗೆ ಒದಗಿಸಲಾಗುತ್ತದೆ ಎಂದು ತಿಳಿಸಿದರು.
ನಮ್ಮ ಕ್ಷೇತ್ರದ ಭಕ್ತರು, ಅಭಿಮಾನಿಗಳು ನಮ್ಮ ಪಟ್ಟ ಆದ ದಿವಸವನ್ನು ಪಟ್ಟಾಭಿಷೇಕ ಮಹೋತ್ಸವ ಎಂದು ವಿಶೇಷವಾಗಿ ಆಚರಿಸಿ ಗೌರವಿಸುತ್ತಾರೆ. ಶ್ರೀ ಮಂಜುನಾಥ ಸ್ವಾಮಿಯ ಪೀಠವೇರಿದ್ದೇ ನನ್ನ ಜನ್ಮ ದಿನ ಎಂದು ನಾನು ಅಂದುಕೊಂಡಿದ್ದೇನೆ. ನಿಜವಾಗಿಯೂ ಹೆಗ್ಗೆಡೆಯಾಗಿ ವ್ಯಕ್ತಿತ್ವ ಬಂದಿರೋದು ಇವತ್ತೇ. ಇಂದು ಸ್ವಾಮಿಯ ಸನ್ನಿಧಿಯಲ್ಲಿ ಎಸ್ಡಿಎಂ ವಿದ್ಯಾಸಂಸ್ಥೆಗಳು, ಗ್ರಾಮಾಭಿವೃದ್ಧಿ ಯೋಜನೆ, ರುಡ್ ಸೆಟ್ ಸಂಸ್ಥೆಗಳು ಬೆಳೆದು ಅಪಾರ ಜನಸೇವೆ ಮಾಡುವ ಕಾರ್ಯವನ್ನು ಸ್ವಾಮಿ ನಮಗೆ ಅನುಗ್ರಹಿಸಿದ್ದಾರೆ. ನಾನು ಅದನ್ನು ಶ್ರದ್ಧಾಭಕ್ತಿಯಿಂದ ಮಾಡಿಕೊಂಡು ಬಂದಿದ್ದೇನೆ ಎಂದು ಡಾ.ಡಿ.ವೀರೇಂದ್ರ ಹೆಗ್ಗಡೆಯವರು ನುಡಿದರು.