ಕರ್ನಾಟಕ

karnataka

By

Published : Dec 23, 2020, 3:21 PM IST

ETV Bharat / state

ಗೋಡೆ ಬರಹ ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸಿ: ವಿಎಚ್​ಪಿ ಆಗ್ರಹ

ಮಂಗಳೂರು ಉಗ್ರ ಗೋಡೆ ಬರಹ ಪ್ರಕರಣವನ್ನು ಎನ್ಐಎ ತನಿಖೆಗೆ ನೀಡಲು ಆದೇಶ ನೀಡಬೇಕು ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳದ ಪ್ರಾಂತ ಸಂಚಾಲಕ ಸುನಿಲ್ ಕೆ.ಆರ್. ಒತ್ತಾಯಿಸಿದ್ದಾರೆ.

ವಿಎಚ್​ಪಿಯಿಂದ ಪ್ರತಿಭಟನೆ
ವಿಎಚ್​ಪಿಯಿಂದ ಪ್ರತಿಭಟನೆ

ಮಂಗಳೂರು:ನಗರದಲ್ಲಿನ ಉಗ್ರ ಪರ ಗೋಡೆಬರಹ ಪ್ರಕರಣವನ್ನು ಎನ್ಐಎ ತನಿಖೆಗೆ ನೀಡಲು ಆದೇಶ ನೀಡಬೇಕು. ಜೊತೆಗೆ ಮಂಗಳೂರಿನಲ್ಲಿ ಶಾಶ್ವತವಾಗಿ ಎನ್ಐಎ ಕಚೇರಿಯನ್ನು ಸ್ಥಾಪಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳದ ಪ್ರಾಂತ ಸಂಚಾಲಕ ಸುನಿಲ್ ಕೆ.ಆರ್. ಆಗ್ರಹಿಸಿದ್ದಾರೆ.

ನಗರದ ಮಿನಿ ವಿಧಾನಸೌಧದ ಮುಂಭಾಗ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾವಿರಾರು ವರ್ಷಗಳಿಂದಲೂ ನಮ್ಮ ದೇಶ, ಸಂಸ್ಕೃತಿಯ ಮೇಲೆ ದಾಳಿ ನಡೆಸಿ ಸಂಪೂರ್ಣ ಇಸ್ಲಾಮೀಕರಣ ಮಾಡುವ ಷಡ್ಯಂತರ ನಡೆಸುತ್ತಲೇ ಬರಲಾಗುತ್ತಿದೆ. ಆ ಎಲ್ಲ ದಾಳಿಗಳನ್ನು ಎದುರಿಸುತ್ತಲೇ ಇದ್ದೇವೆ ಎಂದರು.

ಓದಿ:ಮಂಗಳೂರು ಉಗ್ರ ಗೋಡೆಬರಹ ಪ್ರಕರಣ: ನಗರದ ಭದ್ರತೆ ಹೆಚ್ಚಿಸಲು ಸೂಚಿಸಿದ ಬೊಮ್ಮಾಯಿ

ಕರಾವಳಿ ಪ್ರದೇಶ ಹಿಂದುತ್ವದ ಕಡಲು: ಇಲ್ಲಿ ಭಯೋತ್ಪಾದನೆಯನ್ನು ಹುಟ್ಟುಹಾಕಲು ವಿಶ್ವ ಹಿಂದೂ ಪರಿಷತ್ ಬಜರಂಗದಳ ಬಿಡುವುದಿಲ್ಲ. ಪೊಲೀಸರ ಮೇಲೆ ತಲವಾರು ದಾಳಿ ನಡೆಸುವ ಕೃತ್ಯವನ್ನು ನಡೆಸಲಾಗುತ್ತಿದೆ. ಇಂತಹವರ ಮೇಲೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು. ಇಡಿ ಹಿಂದೂ ಸಮಾಜ ಪೊಲೀಸ್ ಇಲಾಖೆಯೊಂದಿಗೆ ಇರುತ್ತದೆ. ಆದ್ದರಿಂದ ಪೊಲೀಸ್ ಇಲಾಖೆಗೆ ಹಿಂಜರಿಕೆ ಬೇಡ ಎಂದು ಸುನಿಲ್ ಕೆ.ಆರ್. ಹೇಳಿದರು.

ABOUT THE AUTHOR

...view details