ಕರ್ನಾಟಕ

karnataka

ETV Bharat / state

ಗ್ರಾಮಗಳನ್ನು ಅಭಿವೃದ್ಧಿಪಡಿಸಿ ನಗರ ಸ್ವರೂಪಕ್ಕೆ ತರಲಾಗುವುದು: ಶಾಸಕ ಖಾದರ್ - u t khadar latest news

50 ಲಕ್ಷ ರೂ. ಅನುದಾನದಲ್ಲಿ ಪಜೀರ್-ಹರೇಕಳ ಮುಖ್ಯ ರಸ್ತೆ ಗ್ರಾಮಚಾವಡಿ ಜಂಕ್ಷನ್ ರಸ್ತೆ ಅಗಲೀಕರಣ ಮತ್ತು ಡಾಂಬರು ಕಾಮಗಾರಿಗೆ ನಿನ್ನೆ ಶಾಸಕ ಯು.ಟಿ.ಖಾದರ್ ಚಾಲನೆ ನೀಡಿದರು.

Villages will be developed; u t khadar
ಪಜೀರ್-ಹರೇಕಳ ಮುಖ್ಯರಸ್ತೆ ಗ್ರಾಮಚಾವಡಿ ಜಂಕ್ಷನ್ ರಸ್ತೆ ಅಗಲೀಕರಣ ಮತ್ತು ಡಾಂಬರು ಕಾಮಗಾರಿಗೆ ಚಾಲನೆ

By

Published : Feb 13, 2021, 2:45 PM IST

ಉಳ್ಳಾಲ: ಹರೇಕಳ-ಅಡ್ಯಾರ್ ಸೇತುವೆ ನಿರ್ಮಾಣ ಬಳಿಕ ಕೇಂದ್ರ ಸ್ಥಾನ ಆಗಲಿರುವ ನಾಲ್ಕು ಗ್ರಾಮಗಳ ಸಂಗಮ ಗ್ರಾಮಚಾವಡಿ ಜಂಕ್ಷನ್​​ಅನ್ನು ಮುಖ್ಯ ರಸ್ತೆಗಳ ಮಾದರಿಯಲ್ಲೇ ಅಭಿವೃದ್ಧಿಪಡಿಸಿ ನಗರ ಸ್ವರೂಪಕ್ಕೆ ತರಲಾಗುವುದು ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.

ಪಜೀರ್-ಹರೇಕಳ ಮುಖ್ಯರಸ್ತೆ ಗ್ರಾಮಚಾವಡಿ ಜಂಕ್ಷನ್ ರಸ್ತೆ ಅಗಲೀಕರಣ ಮತ್ತು ಡಾಂಬರು ಕಾಮಗಾರಿಗೆ ಚಾಲನೆ

50 ಲಕ್ಷ ರೂ. ಅನುದಾನದಲ್ಲಿ ಪಜೀರ್-ಹರೇಕಳ ಮುಖ್ಯ ರಸ್ತೆ ಗ್ರಾಮಚಾವಡಿ ಜಂಕ್ಷನ್ ರಸ್ತೆ ಅಗಲೀಕರಣ ಮತ್ತು ಡಾಂಬರು ಕಾಮಗಾರಿಗೆ ನಿನ್ನೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಸುದ್ದಿಯನ್ನೂ ಓದಿ:ರಾಜಕೀಯ ಅಸ್ತಿತ್ವಕ್ಕಾಗಿ ಅಹಿಂದ ಕೂಗು: ಸಚಿವ ಎಸ್.ಟಿ. ಸೋಮಶೇಖರ್ ವ್ಯಂಗ್ಯ

ಗ್ರಾಮೀಣ ಭಾಗದಿಂದ ದೂರದ ನಗರ ಪ್ರದೇಶಕ್ಕೆ ಪ್ರಯಾಣಿಸುವರಿಗೆ ಯಾವುದೇ ಅಡಚಣೆಯಿಲ್ಲದಂತೆ ಪ್ರಯಾಣಕ್ಕೆ ಅನುಕೂಲ ಕಲ್ಪಿಸುವುದು ಜನಪ್ರತಿನಿಧಿಗಳ ಜವಾಬ್ದಾರಿ. ಇದೀಗ ಮೊದಲ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಎರಡನೇ ಹಂತದಲ್ಲಿ ಇನ್ನಷ್ಟು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ABOUT THE AUTHOR

...view details