ಬೆಳ್ತಂಗಡಿ: ಪ್ರಸಿದ್ಧ ಯಕ್ಷಗಾನ ಕಲಾವಿದ ಶ್ರೀಧರ್ ಭಂಡಾರಿ ನಿಧನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಸಂತಾಪ ಸೂಚಿಸಿದ್ದಾರೆ.
ಧರ್ಮಸ್ಥಳ ಯಕ್ಷಗಾನ ಮಂಡಳಿಯಲ್ಲಿ ಹಿರಿಯ ಕಲಾವಿದರಾಗಿ ಮಿಂಚಿದ ಪುತ್ತೂರು ಶ್ರೀಧರ್ ಭಂಡಾರಿ ಇನ್ನಿಲ್ಲ ಎಂಬ ಸಂದೇಶ ಬಂದಾಗ ನನಗೆ ಆಶ್ಚರ್ಯವೂ, ಆಘಾತವೂ ಆಯಿತು. ತನ್ನ ಯೌವನದಲ್ಲಿ ಯಕ್ಷಗಾನ ರಂಗಸ್ಥಳದಲ್ಲಿ ಶ್ರೇಷ್ಠ ಕಲಾವಿದರಾಗಿ ಮಿಂಚಿದ ಶ್ರೀಧರ್ ಭಂಡಾರಿ ತನ್ನ ನೃತ್ಯ, ನಟನೆ ಮತ್ತು ವಾಕ್ ಚಾತುರ್ಯದೊಂದಿಗೆ ಅವರು ಪಾತ್ರವನ್ನು ಅನುಭವಿಸಿ ಪ್ರದರ್ಶಿಸಿದ ರೀತಿ “ಪುತ್ತೂರು ಶ್ರೀಧರ್ ಭಂಡಾರಿ ವೈಯಕ್ತಿಕ ಶೈಲಿ” ಎಂದೇ ಪ್ರಸಿದ್ಧವಾಗಿತ್ತು.