ಕರ್ನಾಟಕ

karnataka

ETV Bharat / state

ಮೂಡುಬಿದಿರೆ: ಸಿಡಿಲು ಬಡಿದು ಇಬ್ಬರು ಸಾವು, ಮೂವರಿಗೆ ಗಾಯ - ಮೂಡುಬಿದಿರೆ ಸಿಡಿಲು ಬಡಿದು ಇಬ್ಬರ ಸಾವು ಮೂವರಿಗೆ ಗಾಯ

ದ.ಕ.ಜಿಲ್ಲೆಯಲ್ಲಿ ಎರಡು ದಿನಗಳೊಳಗೆ ಈ ಪ್ರಕರಣವೂ ಸೇರಿ ಒಟ್ಟು ನಾಲ್ಕು ಜನರು ಸಿಡಿಲಾಘಾತಕ್ಕೆ ಬಲಿಯಾಗಿದ್ದಾರೆ. ಮೊನ್ನೆ ಪುತ್ತೂರಿನಲ್ಲಿ ಓರ್ವ ಹಾಗೂ ನಿನ್ನೆ ಕೊಣಾಜೆಯಲ್ಲಿ ಓರ್ವ ಮೃತಪಟ್ಟಿದ್ದರು.

ಸಿಡಿಲು ಬಡಿದು ಇಬ್ಬರ ಸಾವು
ಸಿಡಿಲು ಬಡಿದು ಇಬ್ಬರ ಸಾವು

By

Published : Nov 1, 2021, 8:45 PM IST

ಮೂಡುಬಿದಿರೆ:ದ.ಕ.ಜಿಲ್ಲೆಯಲ್ಲಿ ಇಂದು ಸಂಜೆ ಗುಡುಗುಸಹಿತ ಭಾರೀ ಮಳೆ ಸುರಿದಿದ್ದು, ಈ ಸಂದರ್ಭದಲ್ಲಿ ಬಡಿದ ಸಿಡಿಲಿಗೆ ಇಬ್ಬರು ದಾರುಣವಾಗಿ ಮೃತಪಟ್ಟರು. ಈ ಘಟನೆ ಪುತ್ತಿಗೆ ಪಂಚಾಯತ್ ವ್ಯಾಪ್ತಿಯ ಕಂಚಿಬೈಲು ಎಂಬಲ್ಲಿ ಸಂಜೆ ಸುಮಾರು 5.30 ಸುಮಾರಿಗೆ ನಡೆದಿದೆ. ಕಂಚಿಬೈಲು ಪದವು ನಿವಾಸಿಗಳಾದ ಯಶವಂತ್ (25) ಮಣಿಪ್ರಸಾದ್ (25) ಸಿಡಿಲು ಮೃತಪಟ್ಟವರೆಂದು ಗುರುತಿಸಲಾಗಿದೆ.

ಇಂದು ಸಂಜೆಯಾಗುತ್ತಲೇ ದಟ್ಟ ಮೋಡ ಕವಿದು ಗುಡುಗುಸಹಿತ ಭಾರೀ ಮಳೆ ಸುರಿಯಿತು. ಈ ವೇಳೆ ಮೂಡುಬಿದಿರೆಯ ಅರ್ಬಿ ಪರಿಸರದಲ್ಲಿದ್ದ ಶೆಡ್​​ಗೆ ಸಿಡಿಲು ಬಡಿಯಿತು. ಕಂಚಿಬೈಲು‌ ಯೆರಗುಂಡಿ ಫಾಲ್ಸ್‌ಗೆ ಹೋಗಿದ್ದ ಯಶವಂತ್, ಮಣಿಪ್ರಸಾದ್ ಸಿಡಿಲು ಬಡಿದು ಸಾವಿಗೀಡಾದರು.

ಇವರೊಂದಿಗಿದ್ದ ಗಣೇಶ್, ಸಂದೀಪ್ ಮತ್ತು ಪ್ರವೀಣ್ ಎಂಬ ಮೂವರು ಸಿಡಿಲಾಘಾತದಿಂದ ಗಾಯಗೊಂಡಿದ್ದಾರೆ. ತಕ್ಷಣ ಆಲಂಗಾರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

ದ.ಕ.ಜಿಲ್ಲೆಯಲ್ಲಿ ಎರಡು ದಿನಗಳೊಳಗೆ ಈ ಪ್ರಕರಣವೂ ಸೇರಿ ಒಟ್ಟು ನಾಲ್ಕು ಜನರು ಸಿಡಿಲಿಗೆ ಬಲಿಯಾಗಿದ್ದಾರೆ. ಮೊನ್ನೆ ಪುತ್ತೂರಿನಲ್ಲಿ ಓರ್ವ ಹಾಗೂ ನಿನ್ನೆ ಕೊಣಾಜೆಯಲ್ಲಿ ಓರ್ವ ಸಿಡಿಲು ಬಡಿದು ಮೃತಪಟ್ಟಿದ್ದರು.

ABOUT THE AUTHOR

...view details