ಕರ್ನಾಟಕ

karnataka

ETV Bharat / state

ಮಾಜಿ ಸಚಿವ ಖಾದರ್ ತಲೆ ಕಡಿಯುವ ಬೆದರಿಕೆ : ಕ್ರಿಮಿನಲ್ ಪ್ರಕರಣ ದಾಖಲು - ಕ್ರಿಮಿನಲ್ ಪ್ರಕರಣ ದಾಖಲು

ಸಿಎಎ ಪರ ಪ್ರತಿಭಟನೆ ವೇಳೆ ಮಾಜಿ ಸಚಿವ ಯು.ಟಿ ಖಾದರ್ ವಿರುದ್ಧ ಘೋಷಣೆ ಕೂಗಿ ತಲೆ ಕಡಿಯುವ ಬೆದರಿಕೆಯೊಡ್ಡಿದ್ದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

Criminal case registred in Mangalore, ಕ್ರಿಮಿನಲ್ ಪ್ರಕರಣ ದಾಖಲು
ಮಾಜಿ ಸಚಿವ ಖಾದರ್ ತಲೆ ಕಡಿಯುವ ಬೆದರಿಕೆ

By

Published : Jan 29, 2020, 10:41 PM IST

ಮಂಗಳೂರು: ಸಿಎಎ ಪರ ಪ್ರತಿಭಟನೆ ವೇಳೆ ಮಾಜಿ ಸಚಿವ ಯು.ಟಿ ಖಾದರ್ ವಿರುದ್ಧ ಘೋಷಣೆ ಕೂಗಿ ತಲೆ ಕಡಿಯುವ ಬೆದರಿಕೆಯೊಡ್ಡಿದ್ದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

ಸಿಎಎ ಪರ ಸಮಾವೇಶಕ್ಕೆ ಬಂದಿದ್ದ ಯುವಕರ ತಂಡವೊಂದು ಯು.ಟಿ. ಖಾದರ್ ವಿರುದ್ಧ ಘೋಷಣೆ ಕೂಗಿ ಯು.ಟಿ. ಖಾದರ್ ತಲೆ ಕಡಿಯುವ, ಕೈ-ಕಾಲು ತೆಗೆಯುವ ಬೆದರಿಕೆ ಘೋಷಣೆ ಕೂಗಿದ್ದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.

ಮಂಗಳೂರಿನ ಸಿಎಎ ಪರ ಸಭೆಯಲ್ಲಿ ಮಾಜಿ ಸಚಿವ ಯು.ಟಿ ಖಾದರ್​ಗೆ ಬೆದರಿಕೆ: ವಿಡಿಯೋ ವೈರಲ್

ನಿನ್ನೆ ಬೆದರಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಚಿವ ಯು.ಟಿ. ಖಾದರ್, ಅವರ ವಿರುದ್ಧ ದೂರು ಸಲ್ಲಿಸಿದರೆ ಅವರ ತಂದೆ-ತಾಯಿ ಮಕ್ಕಳನ್ನು ಜೈಲಿನಿಂದ ಬಿಡಿಸಲು ಸಂಕಷ್ಟ ಪಡಬೇಕಾಗುತ್ತದೆ. ಅದಕ್ಕಾಗಿ ದೂರು ಸಲ್ಲಿಸುವುದಿಲ್ಲ ಎಂದಿದ್ದರು.

ತಲೆ ತೆಗೆಯುತ್ತೇವೆ ಎಂದವರ ಬಗ್ಗೆ ಕನಿಕರ ವ್ಯಕ್ತಪಡಿಸಿದ ಮಾಜಿ ಸಚಿವ ಯು.ಟಿ. ಖಾದರ್

ಇಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಸುಮೊಟೋ ಪ್ರಕರಣ ದಾಖಲಿಸಬೇಕೆಂದು ಕಮಿಷನರ್ ಅವರಿಗೆ ಆಗ್ರಹಿಸಿದ್ದರು. ಈ ಹಿನ್ನೆಲೆ ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಲಾಗಿದೆ.

ABOUT THE AUTHOR

...view details