ಮಂಗಳೂರು: ಶಾಸಕ ಆನಂದ್ ಸಿಂಗ್ ರಾಜೀನಾಮೆ ಬಗ್ಗೆ ನನಗೆ ಯಾವ ಮಾಹಿತಿಯೂ ಇಲ್ಲ. ಮಾಧ್ಯಮದ ಮೂಲಕವೇ ನನಗೆ ಮಾಹಿತಿ ಲಭಿಸಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮಂಗಳೂರಿನಲ್ಲಿ ಹೇಳಿದರು. ಆನಂದ್ ಸಿಂಗ್ ಪಕ್ಷದ ಬದ್ದತೆಯ ಶಾಸಕರಾಗಿದ್ದರು. ಆದ ಕಾರಣ ಅವರು ರಾಜೀನಾಮೆ ನೀಡಿರಲಿಕ್ಕಿಲ್ಲ ಎಂಬುದು ನನ್ನ ಭಾವನೆ ಎಂದು ಹೇಳಿದರು.
ಸಿಂಗ್ ರಾಜೀನಾಮೆ ಮಾಹಿತಿ ನನಗಿಲ್ಲ... ಸರ್ಕಾರ ಐದು ವರ್ಷ ಸುಭದ್ರ: ಸಚಿವ ಖಾದರ್ ವಿಶ್ವಾಸ - undefined
ಆನಂದ್ ಸಿಂಗ್ ಪಕ್ಷದ ಬದ್ದತೆಯ ಶಾಸಕರಾಗಿದ್ದರು. ಅವರ ರಾಜೀನಾಮೆ ಬಗ್ಗೆ ನನಗೆ ಯಾವ ಮಾಹಿತಿಯೂ ಇಲ್ಲ. ಮಾಧ್ಯಮದ ಮೂಲಕವೇ ನನಗೆ ಮಾಹಿತಿ ಲಭಿಸಿದೆ ಎಂದು ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
![ಸಿಂಗ್ ರಾಜೀನಾಮೆ ಮಾಹಿತಿ ನನಗಿಲ್ಲ... ಸರ್ಕಾರ ಐದು ವರ್ಷ ಸುಭದ್ರ: ಸಚಿವ ಖಾದರ್ ವಿಶ್ವಾಸ](https://etvbharatimages.akamaized.net/etvbharat/prod-images/768-512-3712488-thumbnail-3x2-mur.jpg)
ಸಚಿವ ಯು.ಟಿ.ಖಾದರ್
ಮೈತ್ರಿ ಸರಕಾರ ಮುರಿದು ಬೀಳುತ್ತದೆ ಎಂಬ ಮಾತು ಸುಮಾರು ಒಂದೂವರೆ ವರ್ಷಗಳಿಂದ ಕೇಳಿ ಬರುತ್ತಿದೆ. ಐದು ಶಾಸಕರ ರಾಜೀನಾಮೆಯಿಂದ ಸರ್ಕಾರ ಕೆಡವಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಮೈತ್ರಿ ಸರಕಾರ ಸುಭದ್ರವಾಗಿದೆ. ನಾವು ಜನರಪರವಾಗಿ ಕೆಲಸ ಮಾಡುತ್ತಿದ್ದೇವೆ. ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ.
ಸಚಿವ ಯು.ಟಿ.ಖಾದರ್
ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ಎಲ್ಲವೂ ಸುಗಮವಾಗಿ ನಡೆದುಕೊಂಡು ಬರುತ್ತಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದೆಲ್ಲವೂ ಸಾಮಾನ್ಯ. ಸರಕಾರ ಸುಭದ್ರವಾಗಿದ್ದು, ಐದು ವರ್ಷಗಳ ಕಾಲ ಖಂಡಿತಾ ಮುಂದುವರಿಯುತ್ತದೆ ಎಂದು ಅವರು ಹೇಳಿದರು.